ಬುಲೆಟ್​ ಪ್ರಕಾಶ್
ಬುಲೆಟ್​ ಪ್ರಕಾಶ್

ಮಣ್ಣಲ್ಲಿ ಮಣ್ಣಾದ ಹಾಸ್ಯನಟ ಬುಲೆಟ್​ ಪ್ರಕಾಶ್

 ಸೋಮವಾರ ಸಂಜೆ ನಿಧನವಾಗಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆ ಮಂಗಳವಾರ ಹೆಬ್ಬಾಳದ ರುದ್ರಭೂಮಿಯಲ್ಲಿ ನೆರವೇರಿದೆ.

ಬೆಂಗಳೂರು: ಸೋಮವಾರ ಸಂಜೆ ನಿಧನವಾಗಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆ ಮಂಗಳವಾರ ಹೆಬ್ಬಾಳದ ರುದ್ರಭೂಮಿಯಲ್ಲಿ ನೆರವೇರಿದೆ.

ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ಆಪ್ತರು ಮಾತ್ರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. 

ಇಂದು ಮುಂಜಾನೆ ರಾಮಯ್ಯ ಆಸ್ಪತ್ರೆಯಿಂದ ಬುಲೆಟ್ ಪ್ರಕಾಶ್ ಅವರ ಪಾರ್ಥಿವ ಶರೀರವನ್ನು ಪಡೆದ ಅವರ ಕುಟುಂಬ ಬಳಿಕ ಭುವನೇಶ್ವರಿ ನಗರದಲ್ಲಿನ ನಿವಾಸಕ್ಕೆ ಕೊಂಡೊಯ್ದರು. ಮಧ್ಯಾಹ್ನ  12 ಗಂಟೆ ಸುಮಾರಿಗೆ ಹೆಬ್ಬಾಳಕ್ಕೆ ಪಾರ್ಥಿವ ಶರೀರ ಸಾಗಿಸಲಾಗಿತ್ತು. .ಮಡಿವಾಳ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಿದವು. 

ಅಂತ್ಯಕ್ರಿಯೆಯಲ್ಲಿ ನಟ ದುನಿಯಾ ವಿಜಯ್ ಹಾಗೂ ಕೆಲ ಆಪ್ತರು ಮಾತ್ರವೇ ಭಾಗವಹಿಸಿದ್ದರು. ಭಾಗವಹಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com