ನಿಖಿಲ್ ಕುಮಾರಸ್ವಾಮಿ ಚಿತ್ರಕ್ಕೆ ಕಥೆ ಸಿದ್ಧವಾಗುತ್ತಿದೆ: ಎಪಿ ಅರ್ಜುನ್
ಕಿಸ್ ಸಿನಿಮಾ ನಂತರ ಎಪಿ ಅರ್ಜುನ್ ನಿಖಿಲ್ ಕುಮಾರ್ ಸಿನಿಮಾಗಾಗಿ ಕಥೆ ಸಿದ್ಧ ಪಡಿಸುತ್ತಿದ್ದಾರೆ. ನಿಖಿಲ್ ಕುಮಾರ್ ಒಡೆತನದ ಎನ್ ಕೆ ಎಂಟರ್ ಪ್ರೈಸಸ್ ಸಿನಿಮಾ ನಿರ್ಮಾಣ ಮಾಡುತ್ತಿದೆ.
ಈಗಾಗಲೇ ಶೇ.50 ರಷ್ಟು ಕಥೆ ಸಿದ್ಧವಾಗಿದೆ ಎಂದು ನಿರ್ದೇಶಕ ಎಪಿ ಅರ್ಜುನ್ ಹೇಳಿದ್ದಾರೆ. ಇದೊಂದು ಕಮರ್ಷಿಯಲ್ ಸಿನಿಮಾವಾಗಿದ್ದು, ನೈಜತೆಗೆ ಹತ್ತಿರದ ಕಥೆಯಾಗಿದೆ.ಜೊತೆಗೆ ಭಾವಾನಾತ್ಮಕ ಸನ್ನಿವೇಶಗಳು ಹೆಚ್ಚಿನ ಪ್ರಮಾಣದಲ್ಲಿವೆ ಎಂದು ಹೇಳಿದ್ದಾರೆ.
ನನ್ನ ಹಿಂದಿನ ಸಿನಿಮಾಗಳಿಗಿಂತ ಇದು ವಿಭಿನ್ನವಾಗಿದೆ, ಹಾಗೂ ಈ ರೀತಿ ಕಥೆಯನ್ನು ನಾನು ಇದೇ ಮೊದಲ ಬಾರಿಗೆ ಮಾಡುತ್ತಿದ್ದೇನೆ ಎಂದು ವಿವರಿಸಿದ್ದಾರೆ.
ಇದರಲ್ಲಿ ಯಾವುದೇ ರಾಜಕೀಯ ಕಥೆಯಲ್ಲಿ, ಇದೊಂದು ಮನರಂಜನಾ ಸಿನಿಮಾವಾಗಿದೆ ಎಂದು ಅರ್ಜುನ್ ಸ್ಪಷ್ಟ ಪಡಿಸಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಕಥೆಯನ್ನು ಪೂರ್ಣಗೊಳಿಸುತ್ತಿದ್ದು, ರಂಗಭೂಮಿ ಹಿನ್ನೆಲೆಯಿರುವ ಕಲಾವಿದರನ್ನು ಚಿತ್ರಕ್ಕೆ ಕರೆತರಲು ಪ್ಲಾನ್ ಮಾಡಿರುವುದಾಗಿ ತಿಳಿಸಿದ್ದಾರೆ.
ಸಿನಿಮಾ ಇನ್ನೂ ಆರಂಭದ ಹಂತದಲ್ಲಿದ್ದು, ಕಥೆ ಸಂಪೂರ್ಣವಾದ ನಂತರ ಕಲಾವಿದರ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ