ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಿಸಲು ಈಗಾಗಲೇ ಅನೇಕ ತಾರೆಯರು ಹಣ ಸೇರಿದಂತೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇದೀಗ ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಅವರು ಒಟ್ಟು 1.30ಕೋಟಿ ರೂ.ದೇಣಿಗೆ ನೀಡಿದ್ದಾರೆ.
ದಕ್ಷಿಣ ರಾಜ್ಯ ಸೇರಿದಂತೆ ಪ್ರಧಾನಿ ನಿಧಿಗೂ ದೇಣಿಗೆ ನೀಡುವ ಮೂಲಕ ವಿಜಯ್ ಮಾನವೀಯತೆ ಮೆರೆದಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ 5 ಲಕ್ಷ ರೂ, ಪ್ರಧಾನಿ ನಿಧಿಗೆ 25 ಲಕ್ಷ ರೂ, ತಮಿಳುನಾಡು ಮುಖ್ಯಮಂತ್ರಿ ಗಳ ನಿಧಿಗೆ 50 ಲಕ್ಷ ರೂ. ಹಾಗೂ ಕೇರಳ ಸಿಎಂ ನಿಧಿಗೆ 10 ಲಕ್ಷ ರೂ. ಚಿತ್ರ ಕಾರ್ಮಿಕರ ನಿಧಿಗೆ 25 ಲಕ್ಷ ರೂ. ಮತ್ತು ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ ಮುಖ್ಯಮಂತ್ರಿ ಗಳ ನಿಧಿಗೆ ತಲಾ 5 ಲಕ್ಷ ರೂ ದೇಣಿಗೆ ನೀಡಿದ್ದಾರೆ.
ವಿಜಯ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement