‘ಶಿವಾಜಿ ಸುರತ್ಕಲ್’ ರಮೇಶ್ ಅರವಿಂದ್ ಅಭಿನಯದ 101ನೇ ಚಿತ್ರ ಪತ್ತೆದಾರಿ ಕಥಾಹಂದರವಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ
ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಚಿತ್ರವಿದಾಗಿದ್ದು, ಖ್ಯಾತ ಕ್ರಿಕೆಟಿಗರೊಬ್ಬರು ಈ ಚಿತ್ರದ ಮೊದಲ ಪ್ರೇಕ್ಷಕರಾಗಿದ್ದಾರೆ ಅವರೇ ರಾಹುಲ್ ದ್ರಾವಿಡ್! ಹೌದು, ಚಿತ್ರತಂಡ ಅವರಿಗಾಗಿಯೇ ಮಂಗಳವಾರ ವಿಶೇಷ ಪ್ರದರ್ಶನ ಏರ್ಪಡಿಸಿತ್ತು
ಚಿತ್ರತಂಡದೊಡನೆ ಕುಳಿತ ಸಿನಿಮಾ ವೀಕ್ಷಿಸಿದ ರಾಹುಲ್ ದ್ರಾವಿಡ್ “ಶಿವಾಜಿ ಸುರತ್ಕಲ್ ಅದ್ಭುತವಾಗಿದೆ ಕ್ಲೈಮ್ಯಾಕ್ಸ್ ಬೆರಗುಗೊಳಿಸಿತು ಎಲ್ಲ ಪ್ರೇಕ್ಷಕರಿಗೂ ಇದೇ ಬಗೆಯ ಅನುಭವವಾಗಲಿದೆ” ಎಂದು ಹೇಳಿದ್ದಾರೆ
ಉತ್ತಮ ಚಿತ್ರ ನೀಡಿದ್ದಕ್ಕಾಗಿ ನಾಯಕ ನಟ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ಶ್ರೀವತ್ಸ ಅವರಿಗೆ ಧನ್ಯವಾದ ಸಲ್ಲಿಸಿದ್ದು, ‘ಶಿವಾಜಿ ಸುರತ್ಕಲ್’ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ರಮೇಶ್ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ತನಿಖಾಧಿಕಾರಿ ಪಾತ್ರದಲ್ಲಿ ನಟಿಸಿರುವ ನಟನಿಗೆ ರಾಧಿಕಾ ನಾರಾಯಣ್ ಜತೆಯಾಗಿದ್ದಾರೆ. ಚಿತ್ರದಲ್ಲಿ ಆರೋಹಿ ನಾರಾಯಣ್ ಸಹ ಇದ್ದಾರೆಜ್ಯೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.
Advertisement
Advertisement