ದರ್ಶನ್ ಹುಟ್ಟು ಹಬ್ಬದಂದು ಗದ್ದಲ: ಮೂರು ಕೇಸ್ ದಾಖಲು

ದರ್ಶನ್ ಹುಟ್ಟುಹಬ್ಬದಂದು ಉಂಟಾದ ಗಲಾಟೆ ಸಂಬಂಧ ದರ್ಶನ್ ಅಭಿಮಾನಿಗಳು ಹಾಗೂ ಅವರ ಮ್ಯಾನೇಜರ್ ವಿರುದ್ಧ ಮೂರು ಎಫ್ ಐ ಆರ್ ದಾಖಲಾಗಿವೆ.
ದರ್ಶನ್
ದರ್ಶನ್
Updated on

ಬೆಂಗಳೂರು: ದರ್ಶನ್ ಹುಟ್ಟುಹಬ್ಬದಂದು ಉಂಟಾದ ಗಲಾಟೆ ಸಂಬಂಧ ದರ್ಶನ್ ಅಭಿಮಾನಿಗಳು ಹಾಗೂ ಅವರ ಮ್ಯಾನೇಜರ್ ವಿರುದ್ಧ ಮೂರು ಎಫ್ ಐ ಆರ್ ದಾಖಲಾಗಿವೆ.

ಫೆಬ್ರವರಿ 15 ಮತ್ತು 16 ರಂದು ಹುಟ್ಟಹಬ್ಬ ಸಂಭ್ರಮಾಚರಣೆ ಸಂಬಂಧ ರಾಜರಾಜೇಶ್ವರಿ ನಗರದ ಐಡಿಯಲ್ಸ್ ಹೋಮ್ ನಿವಾಸಿಗಳು  ದೂರು ದಾಖಲಿಸಿದ್ದಾರೆ.

ದರ್ಶನ್ ಅಭಿಮಾನಿಗಳು ತಮ್ಮ ಮನೆಯ ಹೂ ಕುಂಡಗಳನ್ನು ಹಾಳು ಮಾಡಿದ್ದಾರೆಂದು ಒಂದು ದೂರು ಹಾಗೂ ಮನೆ ಮುಂದೆ ನಿಲ್ಲಿಸಿದ್ದ ಎಸ್ ಯು ವಿ ಕಾರಿಗೆ ಹಾನಿಯಾಗಿದ್ದು 40 ಸಾವಿರ ರು ನಷ್ಟವಾಗಿದೆ ಎಂದ ಮತ್ತೊಬ್ಬರು ದೂರು ದಾಖಲಿಸಿದ್ದಾರೆ.

ಮುಂದಿನ ದಿನಗಳಲ್ಲಿ ಈ ರೀತಿಯ ಸಂಭ್ರಮಾಚರಣೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ. ನಿವಾಸಿಗಳು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಸಿಟಿವಿ ಕ್ಯಾಮೆರಾ ಫೂಟೇಜ್ ಪರಿಶೀಲಿಸಿ  ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ, ಆದರೆ ಕತ್ತಲಾದ್ದರಿಂದ ವಿಡಿಯೋ ಸ್ಪಷ್ಟವಾಗಿಲ್ಲ, ಆಯೋಜಕರಿಗೆ ಹೇಳಿಕೆ ಕೊಡುವಂತೆ  ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಪೊಲೀಸ್ ಪೇದೆ ದೇವರಾಜ್ ಎಂಬುವರು  ಜ್ಞಾನಭಾರತಿ ನಗರ ಪೊಲೀಸ್ ಠಾಣೆಯಲ್ಲಿ ದರು ದಾಖಲಿಸಿದ್ದಾರೆ, ದರ್ಶನ್ ಅಭಿಮಾನಿಯೊಬ್ಬರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.  ಅಬಿಮಾನಿಯೊಬ್ಬ ತಮ್ಮ ಮೇಲೆ ಹಲ್ಲೆ ಮಾಡಿದ್ದರಿಂದ ತಮ್ಮ ಮೂಗು ಹಾಗೂ ಬಲ ಗಣ್ಣಿಗೆ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com