ಲಾಕ್‌ಡೌನ್ ನಡುವೆ ಸಾವಯವ ಕೃಷಿ ಮಾಡಿ ಸೈ ಎನಿಸಿಕೊಂಡ ರಿಯಲ್ ಸ್ಟಾರ್

ರಿಯಲ್ ಸ್ಟಾರ್ ಅಂದಾಕ್ಷಣ ಕಣ್ಣಮುಂದೆ ಕಾಣುವ ಚಿತ್ರ ಸ್ಯಾಂಡಲ್‌ವುಡ್ ನಟ "ಉಪೆಂದ್ರ". ಅವರದ್ದು ವಿಶಿಷ್ಟ ಮ್ಯಾನರಿಸಂ, ವಿಚಿತ್ರ ಸಂಭಾಷಣೆ, ಗೊಂದಲ ಮೂಡಿಸುವ ನಿರ್ದೇಶನದಿಂದ ಸೈ ಎನಿಸಿಕೊಂಡ ನಟ. ಈಗ ತಾನೊಬ್ಬ ಮಾದರಿ ಕಷಿಕ ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ
Updated on

ರಿಯಲ್ ಸ್ಟಾರ್ ಅಂದಾಕ್ಷಣ ಕಣ್ಣಮುಂದೆ ಕಾಣುವ ಚಿತ್ರ ಸ್ಯಾಂಡಲ್‌ವುಡ್ ನಟ "ಉಪೆಂದ್ರ". ಅವರದ್ದು ವಿಶಿಷ್ಟ ಮ್ಯಾನರಿಸಂ, ವಿಚಿತ್ರ ಸಂಭಾಷಣೆ, ಗೊಂದಲ ಮೂಡಿಸುವ ನಿರ್ದೇಶನದಿಂದ ಸೈ ಎನಿಸಿಕೊಂಡ ನಟ. ಈಗ ತಾನೊಬ್ಬ ಮಾದರಿ ಕಷಿಕ ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ.

ಎಲ್ಲರ ಬಾಯಲ್ಲಿ ಓಳು ಬರೀ ಓಳು ಎಂದು ಗುನಿಗುಸುವಂತೆ ಮಾಡಿದ ಉಪೇಂದ್ರ. ಹೀಗೆ‌ ನಿರ್ದೇಶನ, ನಟನೆ, ಹಾಡು, ಸಂಭಾಷಣೆಯಷ್ಟೇ ಅಲ್ಲದೇ ಕಳೆದ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯದಲ್ಲಿಯೂ ಛಾಪು ಮೂಡಿಸಲು ಪ್ರಯತ್ನಿಸಿದ್ದರು.

ಆದರೆ ಉಪೇಂದ್ರ ಅವರಿಗೆ ರಾಜಕೀಯ ಕೈಹಿಡಿಯಲಿಲ್ಲ. ಬಿಜೆಪಿಗೆ ಪರೋಕ್ಷವಾಗಿ ಬೆಂಬಲಿಸಲು ಉಪೇಂದ್ರ ರಾಜಕೀಯದಲ್ಲಿದ್ದಾರೆ ಎಂದು ಆರೋಪಿಸಲಾಗಿತ್ತು. 

ಇದೀಗ ಕೊರೋನಾವೈರಸ್ ಲಾಕ್ ಡೌನ್ ಇರುವ ಕಾರಣ ಬಿಡುವಾಗಿರುವ ನಟ ತಮ್ಮ ಜಮೀನಿನಲ್ಲಿ ವಿವಿಧ ಬಗೆಯ ಹಣ್ಣು, ತರಕಾರಿ, ಹೂವಿನ ಬೆಳೆಯನ್ನ ಹಾಕಿದ್ರು. ಅತೀ ಕಡಿಮೆ ವೆಚ್ಚದಲ್ಲಿ ಹೇಗೆ ಬೆಳೆ ಬೆಳೆಯಬೇಕು ಅಂತ ತಿಳಿಸಿಸ್ಕೊಟ್ಟಿದ್ದಾರೆ. 

ಈ ಸಂಬಂಧ ಸಾಮಾಜಿಕ ತಾಣದಲ್ಲಿ ಸಹ ಪೋಸ್ಟ್ ಹಾಕಿಕೊಂಡ ನಟ "ಅತಿ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ.. This is low cost natural farming...., #natural_farming #upendra #lockdown #farmar #farmer_upendra #upp
#prajaakeeya #upp" ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com