ಕಾರ್ಮಿಕರ ದಿನ: ಪೌರ ಕಾರ್ಮಿಕರ ಮೇಲೆ ಹೂಮಳೆ ಸುರಿದ ನಟ ರಮೇಶ್

ಕಾರ್ಮಿಕ ದಿನಾಚರಣೆ ಪ್ರಯುಕ್ತ ಸ್ಯಾಂಡಲ್ ವುಡ್ ರಾಬರ್ಟ್ ಚಿತ್ರ ತಂಡ, ಸಿನಿ ಕಾರ್ಮಿಕರಿಗೆ ಮೇಕಿಂಗ್ ವಿಡಿಯೋ ಮೂಲಕ‌ ಶುಭಾಶಯ ಕೋರಿದರೆ .ನಟ ರಮೇಶ್ ಅರವಿಂದ್ ಒಂದು ಹೆಜ್ಜೆ ಮುಂದೆ ಹೋಗಿ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದ್ದಾರೆ
ಪೌರ ಕಾರ್ಮಿಕರ ಮೇಲೆ ಹೂಮಳೆ ಸುರಿದ ನಟ ರಮೇಶ್
ಪೌರ ಕಾರ್ಮಿಕರ ಮೇಲೆ ಹೂಮಳೆ ಸುರಿದ ನಟ ರಮೇಶ್
Updated on

ಕಾರ್ಮಿಕ ದಿನಾಚರಣೆ ಪ್ರಯುಕ್ತ ಸ್ಯಾಂಡಲ್ ವುಡ್ ರಾಬರ್ಟ್ ಚಿತ್ರ ತಂಡ, ಸಿನಿ ಕಾರ್ಮಿಕರಿಗೆ ಮೇಕಿಂಗ್ ವಿಡಿಯೋ ಮೂಲಕ‌ ಶುಭಾಶಯ ಕೋರಿದರೆ .ನಟ ರಮೇಶ್ ಅರವಿಂದ್ ಒಂದು ಹೆಜ್ಜೆ ಮುಂದೆ ಹೋಗಿ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದ್ದಾರೆ

ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದ ಎದುರು ಕಸ ಗುಡಿಸಲು ಬರುವ ಪೌರ ಕಾರ್ಮಿಕರ ಮೇಲೆ ಹೂವಿನ ಸುರಿಮಳೆಗೈಯುವ ಮೂಲಕ ರಮೇಶ್ ಅವರು ವಿಭಿನ್ನವಾಗಿ ಗೌರವ ಸಲ್ಲಿಸಿದ್ದಾರೆ.

ಪ್ರತಿನಿತ್ಯ ತಮ್ಮ ಮನೆ ಮುಂದಿನ ಕಸ ಗುಡಿಸುವ ಪೌರ ಕಾರ್ಮಿಕ ಮಹಿಳೆಯ ಮೇಲೆ ಹೂವಿನ ಮಳೆಗೆರೆದ ನಟ "ನಮ್ಮ ನಿತ್ಯದ ಬದುಕು ನೀವಿಲ್ಲದೆ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. .ಎಲ್ಲಾ ಕಾರ್ಮಿಕರಿಗು ನನ್ನ ಪ್ರೀತಿಯ ನಮನಗಳು" ಎಂದು ಹೇಳಿದ್ದಾರೆ

ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರಿದಿರುವ ಈ ಸಮಯದಲ್ಲಿ ವೈದ್ಯರು, ದಾದಿಯರು, ಪೋಲೀಸರು ಜತೆಗೆ ಪೌರ ಕಾರ್ಮಿಕರು ಸಹ ಅವರತ ಶ್ರಮಿಸುತ್ತಿದ್ದಾರೆ.  ಅಂತಹಾ ಪೌರ ಕಾರ್ಮಿಕರಿಗೆ ರಮೇಶ್ ಗೌರವ ಸೂಚಿಸಿರುವುದು ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ನಟ ರಮೇಶ್ ಅರವಿಂದ್ ಅವರ 'ಶಿವಾಜಿ ಸುರತ್ಕಲ್' ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು ಲಾಕ್ ಡೌನ್ ಮುಗಿದ ನಂತರ ಅವರ ಮುಂದಿನ ಚಿತ್ರವಾದ '100' ತೆರೆಗೆ ಬರಲಿಕ್ಕೆ ಸಿದ್ದವಿದೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com