'ಕೃಷ್ಣ ಟಾಕೀಸ್' ನಡೆಸೋಕೆ ತಯಾರಾದ ಅಜಯ್ ರಾವ್!

ವಿಜಯಾನಂದ್ ನಿರ್ದೇಶನದ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಬಿಡುಗಡೆಗೆ ಸಿದ್ಧವಾಗಿದ್ದು, ಲಾಕ್‌ಡೌನ್ ಮುಗಿದ ನಂತರ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.
ಕೃಷ್ಣ ಟಾಕೀಸ್ ಚಿತ್ರದ ದೃಶ್ಯ
ಕೃಷ್ಣ ಟಾಕೀಸ್ ಚಿತ್ರದ ದೃಶ್ಯ
Updated on

ವಿಜಯಾನಂದ್ ನಿರ್ದೇಶನದ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಬಿಡುಗಡೆಗೆ ಸಿದ್ಧವಾಗಿದ್ದು, ಲಾಕ್‌ಡೌನ್ ಮುಗಿದ ನಂತರ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ಇದೀಗಲೇ ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಪ್ರಸ್ತುತಪಡಿಸಲು ತಯಾರಕರು ಯೋಜಿಸುತ್ತಿದ್ದು ಕರ್ನಾಟಕದಲ್ಲಿ ಶೀಘ್ರವೇ ಮನರಂಜನಾ ಉದ್ಯಮವು ಸುವ್ಯವಸ್ಥಿತವಾಗಿ ಮುಂದುವರಿಯಲಿದೆ ಎಂದು ಆಶಿಸಿದೆ.

ಗೋಕುಲ್ ಎಂಟರ್‌ಟೈನರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಗೋವಿಂದ್ ರಾಜು ಎ.ಎಚ್. ನಿರ್ಮಿಸಿದ್ದಾರೆ.. ಚಿತ್ರದ  ಫಸ್ಟ್ ಸ್ಟಿಲ್ ಗಳನ್ನು ತಂಡ ಹಂಚಿಕೊಂಡಿದ್ದು ದರಲ್ಲಿ ಅಪೂರ್ವಾ ಮತ್ತು ಸಿಂಧು ಲೋಕನಾಥ್ ಇದ್ದಾರೆ.

ಸಾಮಾನ್ಯವಾಗಿ ಲವ್ ಬಾಯ್ ಆಗಿ ಕಾಣಿಸಿಕೊಳ್ಳುವಲ್ಲಿ ಹೆಸರಾದ ಅಜಯ್ಈ ಸಸ್ಪೆನ್ಸ್ ಥ್ರಿಲ್ಲರ್‌ನಲ್ಲಿ ಹಿಂದೆಂದೂ ನೋಡಿರದ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.

ಈ ಚಿತ್ರದಲ್ಲಿ ಶ್ರೀಧರ್ ವಿ ಸಂಭ್ರಮ್  ಸಂಗೀತ ಮತ್ತು ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದೆ. ಕೃಷ್ಣ ಟಾಕೀಸ್ ನಲ್ಲಿ ಚಿಕ್ಕಣ್ಣ, ಮಂಡ್ಯ ರಮೇಶ್, ಶೋಭರಾಜ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಇನ್ನು ನಟ ಅಜಯ್ ರಾವ್ ಅವರು ಶೋಕಿವಾಲಾ ಚಿತ್ರದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ನಿರ್ಮಿಸಿದ ಮತ್ತು ಜಾಕಿ ನಿರ್ದೇಶನದ ಈ ಚಿತ್ರದಲ್ಲಿ ಸಂಜನಾ ಆನಂದ್  ನಾಯಕಿಯಾಗಿದ್ದಾರೆ.ಚಿತ್ರದ ಡಬ್ಬಿಂಗ್ ಇತ್ತೀಚಿಗೆ ಮುಗಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com