ವೀರಪ್ಪನ್ ವೆಬ್ ಸಿರೀಸ್: ಶಂಕರ್ ಬಿದರಿ ಪಾತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ

ಎಎಂಆರ್ ರಮೇಶ್ ಕಾಡುಗಳ್ಳ ವೀರಪ್ಪನ್ ಕುರಿತ ವೆಬ್ ಸಿರೀಸ್ ತಯಾರಿಸುತ್ತಿದ್ದಾರೆ, ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ವೆಬೆ ಸಿರೀಸ್ ಈಗಾಗಲೇ 36 ದಿನಗಳ ಶೂಟಿಂಗ್ ಮುಗಿಸಿದೆ.
ಸುನೀಲ್ ಶೆಟ್ಟಿ
ಸುನೀಲ್ ಶೆಟ್ಟಿ
Updated on

ಎಎಂಆರ್ ರಮೇಶ್ ಕಾಡುಗಳ್ಳ ವೀರಪ್ಪನ್ ಕುರಿತ ವೆಬ್ ಸಿರೀಸ್ ತಯಾರಿಸುತ್ತಿದ್ದಾರೆ, ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ವೆಬೆ ಸಿರೀಸ್ ಈಗಾಗಲೇ 36 ದಿನಗಳ ಶೂಟಿಂಗ್ ಮುಗಿಸಿದೆ.

ಸದ್ಯದ ಹೊಸ ವಿಷಯವೆಂದರೇ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಈ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪೈಲ್ವಾನ್ ನಟನ ಜೊತೆ ಚರ್ಚಿಸಿದ್ದು, ಈಗ ಕನ್ಫರ್ಮ್ ಆಗಿದೆ, ಸುನೀಲ್ ಶೆಟ್ಟಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ, 25 ರಿಂದ 30 ದಿನಗಳ ಶೆಡ್ಯೂಲ್ ನೀಡಿದ್ದು ಶೀಘ್ರದಲ್ಲೇ ಅವರು ಸೆಟ್
ಬರಲಿದ್ದಾರೆ, ಅವರು ನಮ್ಮ ಪ್ರಾಜೆಕ್ಟ್ ನ ಭಾಗವಾಗಿರುವುದು ನಮಗೆ ಖುಷಿ ತಂದಿದೆ ಎಂದು ರಮೇಶ್ ತಿಳಿಸಿದ್ದಾರೆ.

ಕಿಶೋರ್ ವೀರಪ್ಪನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಈ ವೆಬ್ ಸಿರೀಸ್ ನಲ್ಲಿ ವಿವೇಕ್ ಓಬೇರಾಯ್ ಅವರನ್ನು ಕರೆ ತರುವ ಯೋಜನೆಯಿದ್ದು, ಈ ಸಂಬಂಧ ವಿವೇಕ್ ತಂದೆ ಸುರೇಶ್ ಓಬೇರಾಯ್ ಅವರ ಜೊತೆ ಚರ್ಚಿಸಿರುವುದಾಗಿ ಹೇಳಿದ್ದಾರೆ. 

ಈ ವೆಬ್ ಸಿರೀಸ್‌ನಲ್ಲಿ ವೀರಪ್ಪನ್ ಬದುಕಿನ ಇನ್ನಷ್ಟು ರೋಚಕ ಸಂಗತಿಗಳನ್ನು ಬಿಚ್ಚಿಡಲು ರಮೇಶ್‌ ನಿರ್ಧರಿಸಿದ್ದಾರೆ. ಈ ವೆಬ್ ಸಿರೀಸ್‌ ಸುಮಾರು 10 ಗಂಟೆ ಅವಧಿಯಲ್ಲಿ ಮೂಡಿಬರಲಿದೆಯಂತೆ. 'ಅಟ್ಟಹಾಸ'ದಲ್ಲಿ ವೀರಪ್ಪನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ಕಿಶೋರ್ ಇಲ್ಲಿಯೂ ವೀರಪ್ಪನ್ ಅವತಾರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಇದು ಮೂಡಿಬರಲಿದ್ದು, ಆ ಭಾಷೆಯ ಜನಪ್ರಿಯ ನಟರು ಇದರಲ್ಲಿ ಬಣ್ಣ ಹಚ್ಚಲಿದ್ದಾರೆ. ರವಿ ಕಾಳೆ, ಸಂಪತ್, ರಾಯ್ ಲಕ್ಷ್ಮಿ, ವಿಜಯಲಕ್ಷ್ಮಿ ಮತ್ತು ಸುರೇಂದ್ರ ಪ್ರಸಾದ್ ಸೇರಿದಂತೆ ಹಲವರು ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com