ನಟ ವಿಶಾಲ್ ಗೆ ಮದ್ರಾಸ್ ಹೈಕೋರ್ಟ್ ನೋಟಿಸ್!

ನಟ ವಿಶಾಲ್ ರ ಮುಂಬರುವ ಚಿತ್ರ ಚಕ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡದಂತೆ ತಡೆಯುವಂತೆ ಚಲನಚಿತ್ರ ನಿರ್ಮಾಣ ಸಂಸ್ಥೆ ಟ್ರೈಡೆಂಟ್ ಆರ್ಟ್ಸ್ ಸಲ್ಲಿಸಿದ್ದ ಅರ್ಜಿ ಸಂಬಂಧ ನಟ ವಿಶಾಲ್ ಮತ್ತು ನಿರ್ದೇಶಕ ಎಂ ಆನಂದನ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. 
ವಿಶಾಲ್
ವಿಶಾಲ್
Updated on

ಚೆನ್ನೈ: ನಟ ವಿಶಾಲ್ ರ ಮುಂಬರುವ ಚಿತ್ರ ಚಕ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡದಂತೆ ತಡೆಯುವಂತೆ ಚಲನಚಿತ್ರ ನಿರ್ಮಾಣ ಸಂಸ್ಥೆ ಟ್ರೈಡೆಂಟ್ ಆರ್ಟ್ಸ್ ಸಲ್ಲಿಸಿದ್ದ ಅರ್ಜಿ ಸಂಬಂಧ ನಟ ವಿಶಾಲ್ ಮತ್ತು ನಿರ್ದೇಶಕ ಎಂ ಆನಂದನ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. 

ವಿಶಾಲ್ ರ ಹಿಂದಿನ 'ಆಕ್ಷನ್' ಚಿತ್ರದಿಂದ 8 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಟ್ರೈಡೆಂಟ್ ಆರ್ಟ್ಸ್ ಅರ್ಜಿ ಸಲ್ಲಿಸಿದ್ದು ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಎನ್ ಸತೀಶ್ ಕುಮಾರ್ ನಟ-ನಿರ್ದೇಶಕರಿಗೆ ನೋಟಿಸ್ ನೀಡಿದ್ದು ಗುರುವಾರದೊಳಗೆ ಲಿಖಿತ ಹೇಳಿಕೆ ನೀಡುವಂತೆ ಸೂಚಿಸಿದೆ.

ಅರ್ಜಿದಾರರ ಪರ ವಕೀಲ ವಿಜಯನ್ ಸುಬ್ರಮಣಿಯನ್ ಅವರು ಆಗಸ್ಟ್ 29, 2018ರಂದು ಆನಂದನ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆ ಪ್ರಕಾರ "ವಿಶಾಲ್ ಸೇನಾಧಿಕಾರಿಯಾಗಿ ನಟಿಸಬೇಕು ಎಂದು ನಿರ್ಧರಿಸಲಾಯಿತು. ಅದೇ ದಿನ 1 ಲಕ್ಷ ರೂ. ಟೋಕನ್ ಮುಂಗಡ ಚೆಕ್ ಅನ್ನು ನಿರ್ದೇಶಕರಿಗೆ ನೀಡಲಾಗಿತ್ತು ಎಂದು ನಿರ್ಮಾಪಕರು ಹೇಳಿದ್ದಾರೆ.

ಆದಾಗ್ಯೂ, ಕೊರೋನಾ ಪ್ರೇರಿತ ಲಾಕ್‌ಡೌನ್ ನಿಂದಾಗಿ ಯೋಜನೆಗಳನ್ನು ಸ್ಥಗಿತಗೊಳಿಸಲಾಯಿತು. "ಆದರೆ ಆನಂದನ್ ನಿರ್ದೇಶನದಲ್ಲಿ ವಿಶಾಲ್ 'ಚಕ್ರ' ಹೆಸರಿನ ಚಿತ್ರದ ನಿರ್ಮಾಣವನ್ನು ಪ್ರಾರಂಭಿಸಿದರು. ಆ ಬಳಿಕ ಆನಂದನ್ ನನ್ನೊಂದಿಗೆ ಮಾತನಾಡುವುದನ್ನು ಅಥವಾ ಭೇಟಿಯಾಗುವುದನ್ನು ತಪ್ಪಿಸಿದರು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

44 ಕೋಟಿ ರೂ.ಗಳ ಪರಿಗಣನೆಗೆ 'ಚಕ್ರ' ಅನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅರ್ಜಿದಾರರು, ಈ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸದಿದ್ದಲ್ಲಿ, ಒಪ್ಪಂದದ ಅಡಿಯಲ್ಲಿ ನನ್ನ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಇದೇ ವೇಳೆ ಆನಂದನ್ ಮತ್ತು ವಿಶಾಲ್ ಅವರಿಗೆ 1 ಕೋಟಿ ರೂ. ಠೇವಣಿ ಇಡಲು ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಅವರು ವಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com