ಶ್ರೇಯಸ್ ಮಂಜು ನಟನೆಯ ರಾಣ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ನಂದಕಿಶೋರ್ ವಿವಿಧ ಪ್ರೊಡಕ್ಷನ್ ಹೌಸ್ ಗಳ ಜೊತೆ ಮಾತುಕತೆಯಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ನಟ-ನಿರ್ಮಾಪಕ ಬಿಸಿ ಪಾಟೀಲ್ ಅವರೊಂದಿಗೆ ಮುಂದಿನ ಪ್ರಾಜೆಕ್ಟ್ ಗಾಗಿ ಚರ್ಚಿಸಿದ್ದಾರೆ. ಬಿಸಿ ಪಾಟೀಲ್ ಅವರೊಂದಿಗೆ ಮುಂದಿನ ಸಿನಿಮಾವನ್ನು ಖಚಿತಪಡಿಸಿರುವ ನಂದಕಿಶೋರ್ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಪ್ರೊಡಕ್ಷನ್ ಹೌಸ್ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ನಂತರ ನಾಯಕ ಯಾರು ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ನಂದ ಕಿಶೋರ್ ತಿಳಿಸಿದ್ದಾರೆ. ಕಥೆ ಪೂರ್ಣಗೊಂಡ ನಂತರ ಅಂತಿಮವಾಗಿ ಅಪ್ ಡೇಟ್ ನೀಡುತ್ತೇವೆ ಎಂದಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಪ್ರಾಜೆಕ್ಟ್ ಆರಂಭಿಸುವ ಸಾಧ್ಯತೆಯಿದೆ ಎಂದು ನಿರ್ದೇಶಕ ನಂದ ಕಿಶೋರ್ ತಿಳಿಸಿದ್ದಾರೆ.
ಸದ್ಯ ನಿರ್ದೇಶಕ ನಂದ ಕಿಶೋರ್, ಪ್ರಜ್ವಲ್ ದೇವರಾಜ್ ಅವರೊಂದಿಗೆ ಸುಮಂತ್ ಕ್ರಾಂತಿ ನಿರ್ಮಾಣದ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಸಿ ಪಾಟೀಲ್ ಜೊತೆ ಪ್ರಾಜೆಕ್ಟ್ ನ ಅಧಿಕೃತ ಘೋಷಣೆಗಾಗಿ ಕಾಯಲಾಗುತ್ತಿದೆ. ಇದರ ಜೊತೆಗೆ ಯೋಗರಾಜ್ ಭಟ್ ನಿರ್ದೇಶನದ ಚಿತ್ರವನ್ನು ಬಿ.ಸಿ.ಪಾಟೀಲ್ ನಿರ್ಮಿಸಲಿದ್ದಾರೆ.
Advertisement