ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಸ್.ಮಹೇಂದರ್

ಹಳ್ಳಿ ಕಥೆ ಆಧಾರಿತ ಸಿನಿಮಾ ನಿರ್ದೇಶಿಸುತ್ತಿರುವ ಎಸ್ ಮಹೇಂದರ್, ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ರವಿಚಂದ್ರನ್ ಎಸ್ ಮಹೇಂದರ್
ರವಿಚಂದ್ರನ್ ಎಸ್ ಮಹೇಂದರ್
Updated on

ಹಳ್ಳಿ ಕಥೆ ಆಧಾರಿತ ಸಿನಿಮಾ ನಿರ್ದೇಶಿಸುತ್ತಿರುವ ಎಸ್ ಮಹೇಂದರ್, ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಕರ್ಪೂರದ ಬೊಂಬೆ, ಸ್ನೇಹಲೋಕ, ವಾಲಿ, ನಿನಗಾಗಿ ಸೇರಿದಂತೆ ಹಲವು ಸಿನಿಮಾ ನಿರ್ದೇಶಿಸಿರುವ ಮಹೇಂದರ್ ಇದೇ ಮೊದಲ ಬಾರಿಗೆ ರವಿಚಂದ್ರನ್ ಜೊತೆ ಕೆಲಸ ಮಾಡುತ್ತಿದ್ದಾರೆ.

ರವಿಚಂದ್ರನ್ ಮತ್ತು ನಾನು ಜೊತೆಯಾಗಿ ಸಿನಿಮಾ ಮಾಡುತ್ತಿದ್ದೇವೆ, ಇದಕ್ಕಾಗಿ ನಾವು ಈಗಾಗಲೇ ಕಥೆ ಸಿದ್ಧಪಡಿಸಿದ್ದೇವೆ ಎಂದು ಸ್ವತಃ ಮಹೇಂದರ್ ಅವರೇ ಸ್ಪಷ್ಟ ಪಡಿಸಿದ್ದಾರೆ.

ಎಲ್ಲವೂ ಸಿದ್ಧವಾಗಿದ್ದು ಲಾಕ್ ಡೌನ್ ನಂತರ ಅಧಿಕೃತವಾಗಿ ಪ್ರಕಟಿಸಲಿದ್ದೇವೆ ಎಂದು ಹೇಳಿದ್ದಾರೆ, ತಾಂತ್ರಿಕ ವರ್ಗ ಕಲಾವಿದರ ಆಯ್ಕೆಗಾಗಿ ನಾವು ಅಂತಿಮ ಹಂತದ ಸಿದ್ಧತೆ ನಡೆಸಿದ್ದೇವೆ, ನಾವು ಇಷ್ಟರಲ್ಲೇ ಶೂಟಿಂಗ್ ಆರಂಭಿಸಬೇಕಿತ್ತು, ಆದರೆ ಕೊರೋನಾ ಸಾಂಕ್ರಾಮಿಕದಿಂದಾಗಿ ಮುಂದೂಡಿದೆ ಎಂದು ತಿಳಿಸಿದ್ದಾರೆ.

ಹಳ್ಳಿ ಆಧಾರಿತ ಕಥೆಯೊಂದಿಗೆ ಇದೇ ಮೊದಲ ಬಾರಿಗೆ ಮಹೇಂದರ್ -ರವಿಚಂದ್ರನ್ ಒಂದಾಗುತ್ತಿದ್ದಾರೆ, ಸದ್ಯ ರವಿಚಂದ್ರನ್ ಬಿಎಂ ಗಿರಿಜಾ ಅವರ ಅವರ ಕನ್ನಡಿಗ ಸಿನಿಮಾದಲ್ಲಿ ನಟಿಸುತ್ತಿದ್ದಾರೆ,  ಅದರ ಜೊತೆಗೆ ರವಿ ಬೋಪಣ್ಣ ಕೂಡ ತೆರೆ ಕಾಣಲು ಸಿದ್ಧವಾಗಿದೆ.

ಮಹೇಂದರ್ ಕೂಡ  ತಮ್ಮ ನಿರ್ದೇಶನದ ಪಂಪ ಸಿನಿಮಾ ಪೂರ್ಣಗೊಳಿಸಿದ್ದಾರೆ. ಕೋರೋನಾ ಸಾಂಕ್ರಾಮಿಕದಂದಾಗಿ ರಿಲೀಸ್ ಡೇಟ್ ಮುಂದೂಡಲ್ಪಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com