ವೆಂಕಟ್ ಭಾರದ್ವಾಜ್ ನಿರ್ದೇಶನದ 'ಆಹತ' ಮೂಲಕ ಸ್ಯಾಂಡಲ್ ವುಡ್ ಗೆ ಕಬೀರ್ ಸೋಮಯಾಜಿ ಪಾದಾರ್ಪಣೆ

ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ ಕೊನೆಯ ಸಿನಿಮಾ ಆಮ್ಲೆಟ್ ನೇರವಾಗಿ ಟಿವಿ ಚಾನೆಲ್ ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯಿತು
ವೆಂಕಟ್ ಭಾರದ್ವಾಜ್
ವೆಂಕಟ್ ಭಾರದ್ವಾಜ್

ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ ಕೊನೆಯ ಸಿನಿಮಾ ಆಮ್ಲೆಟ್ ನೇರವಾಗಿ ಟಿವಿ ಚಾನೆಲ್ ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯಿತು. ಈಗ, ನಿರ್ದೇಶಕರು ತಮ್ಮ ಮುಂದಿನ ಯೋಜನೆಗೆ ಸಿದ್ಧರಾಗಿದ್ದಾರೆ. ಆಹಾಟ ಎಂಬ ಟೈಟಲ್ ಇಡಲಾಗಿದ್ದು, ಈ ಚಿತ್ರವು ಕ್ರೈಮ್ ಥ್ರಿಲ್ಲರ್ ಆಗಿದೆ.

ಇದೇ ಮೊದಲ ಬಾರಿಗೆ  ನಟ ಕಬೀರ್ ಸೋಮಯಾಜಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಬೀರ್ ಮುಂಬಯಿಯಲ್ಲಿ ನೆಲೆಸಿರುವ ಕನ್ನಡಿಗನಾಗಿದ್ದು, ಕೆನಡಾದ ಟೊರೊಂಟೊ ಫಿಲ್ಮ್ ಸ್ಕೂಲ್‌ನಲ್ಲಿ ಎರಡು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ಅವರು ಅನುಪಮ್ ಖೇರ್ ಸಂಸ್ಥೆಯಲ್ಲಿ ನಟನಾ ಕೋರ್ಸ್ ತೆಗೆದುಕೊಂಡರು ಮತ್ತು ವೆಂಕಟ್ ಭಾರದ್ವಾಜ್ ಅವರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುವ ಬಗ್ಗೆ ಉತ್ಸುಕರಾಗಿದ್ದಾರೆ.

ಆಹತ ಚಿತ್ರದಲ್ಲಿ ಪ್ರಿಯಾ ಹೆಗ್ಡೆ ನಾಯಕಿಯಾಗಿ ಕಬೀರ್ ಗೆ ಜೋಡಿಯಾಗಿದ್ದಾರೆ. ಕಿರುತೆರೆಯಲ್ಲಿ ಹೆಸರುವಾಸಿಯಾದ ನಟಿ, ಕನ್ನಡ ಚಲನಚಿತ್ರ ಜಿಲ್ಖಾ ಮತ್ತು ಒಂದೆರಡು ತೆಲುಗು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಜಿಲ್ಖಾ ಚಿತ್ರವು ನವೆಂಬರ್ 2020 ರಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು ಮತ್ತು ಕೇವಲ 25 ದಿನಗಳಲ್ಲಿ ಚಿತ್ರೀಕರಿಸಲಾಯಿತು.

ಸಿಲ್ವರ್‌ಲೈನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಬಾಂಬೆ ಪ್ರಕಾಶ್ ನಿರ್ಮಿಸಿದ್ದು, ಚಿತ್ರವು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನಿರ್ಮಾಪಕರು 2021 ರ ಕೊನೆಯಲ್ಲಿ ಥಿಯೇಟರ್  ಗಳಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ. ಅಹತದ ಪಾತ್ರವರ್ಗದಲ್ಲಿ ಉಗ್ರಮ್ ಮಂಜು, ದಿನೇಶ್ ಮಂಗಳೂರು, ಗೋಪಿ ಕೃಷ್ಣ ದೇಶಪಾಂಡೆ ಮತ್ತು ನಾಗೇಂದ್ರ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com