ಅಕ್ಟೋಬರ್ 15 ರಂದು ದರ್ಶನ್ 'ಕ್ರಾಂತಿ' ಗೆ ಮುಹೂರ್ತ

ಸಿನಿಮಾ ಘೋಷಣೆಯಾದಾಗಿನಿಂದಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದರು, ಹೀಗಾಗಿ ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾ ತಂಡ ಗುಡ್ ನ್ಯೂಸ್ ನೀಡಿದೆ.
ಕ್ರಾಂತಿ ಪೋಸ್ಟರ್
ಕ್ರಾಂತಿ ಪೋಸ್ಟರ್

ಸಿನಿಮಾ ಘೋಷಣೆಯಾದಾಗಿನಿಂದಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದರು, ಹೀಗಾಗಿ ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾ ತಂಡ ಗುಡ್ ನ್ಯೂಸ್ ನೀಡಿದೆ.

ಅಕ್ಟೋಬರ್ 15 ರ ವಿಜಯದಶಮಿಯ ಶುಭ ಸಂದರ್ಭದಲ್ಲಿ ಕ್ರಾಂತಿ ಸಿನಿಮಾ ಮೂಹೂರ್ತ ನಡೆಯಲಿದ್ದು ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ. ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣ ಮಾಡುತ್ತಿರುವ ಕ್ರಾಂತಿ ಸಿನಿಮಾ ತಮಿಳು, ತೆಲುಗು ಮತ್ತು ಮಲಯಾಳಂ ಹಾಗೂ ಹಿಂದಿಯಲ್ಲಿ  ತಯಾರಾಗಲಿದೆ. 

ಈ ಹಿಂದೆ ಯಜಮಾನ ಸಿನಿಮಾವನ್ನು ಪ್ರೊಡಕ್ಷನ್ ಹೌಸ್ ಮತ್ತು ನಿರ್ದೇಶಕರು ಒಂದಾಗಿ ತಯಾರಿಸಿದ್ದರು ಅದು ಹಿಟ್ ಕಂಡಿತ್ತು. ಈ ತಂಡ ಮತ್ತೊಂದು ಹಿಟ್ ಸಿನಿಮಾ ನೀಡಲು ಮುಂದಾಗಿದ್ದು, ನಿರೀಕ್ಷೆ ಭಾರಿ ಹೆಚ್ಚಾಗಿದೆ. 

ಇತ್ತೀಚೆಗೆ ಸಿನಿಮಾ ತಂಡ ಬಹುಭಾಷೆಯ ಪೋಸ್ಟರ್ ರಿಲೀಸ್ ಮಾಡಿದ್ದು ಉತ್ತಮ ಪ್ರತಿಕ್ರಿಯೆ ನೀಡಿತ್ತು. ಸಂಗೀತ್ ನಿರ್ದೇಶಕ ಹರಿಕೃಷ್ಣ ನಿರ್ದೇಶಕರಾಗಿ ಪ್ರಮೋಷನ್ ಪಡೆದಿದ್ದಾರೆ. ಕಲಾವಿದರ ಮತ್ತು ಹೆಚ್ಚಿನ ವಿವರಗಳನ್ನು ಚಿತ್ರ ತಂಡ ಬಹಿರಂಗ ಪಡಿಸಿಲ್ಲ. ದರ್ಶನ್ ಅವರ ಕೊನೆಯ ಸಿನಿಮಾ ರಾಬರ್ಟ್ ಹಿಟ್ ದ ನಂತರ ಕ್ರಾಂತಿ ಸಿನಿಮಾ ಘೋಷಿಸಲಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com