ಒಡಿಶಾ ಸಮುದ್ರ ತೀರದಲ್ಲಿ ಅರಳಿದ ಸಾಹಸ ಸಿಂಹನ ಮರಳು ಶಿಲ್ಪ!

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅತ್ಯಪೂರ್ವ ಕಲಾವಿದ. ನಾಳೆ(ಸೆಪ್ಟೆಂಬರ್ 18) ಅವರ 71ನೇ ಜನ್ಮದಿನ. ಈ ಪ್ರಯುಕ್ತ ಒಡಿಶಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ  ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.
ಸಾಹಸ ಸಿಂಹನ ಮರಳು ಶಿಲ್ಪ
ಸಾಹಸ ಸಿಂಹನ ಮರಳು ಶಿಲ್ಪ

ಬೆಂಗಳೂರು: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅತ್ಯಪೂರ್ವ ಕಲಾವಿದ. ನಾಳೆ(ಸೆಪ್ಟೆಂಬರ್ 18) ಅವರ 71ನೇ ಜನ್ಮದಿನ. ಈ ಪ್ರಯುಕ್ತ ಒಡಿಶಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ  ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.

ಡಾ.ವಿಷ್ಣುವರ್ಧನ್ ಗೌರವಾರ್ಥ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ರಚಿಸಲಾಗಿದೆ.

ಖ್ಯಾತ ಮರಳು ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಇದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವಿಷ್ಣುಸೇನಾ ಸಮಿತಿ ಅಧ್ಯಕ್ಷ, ವಿಷ್ಣು ಅವರ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ ಒದಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com