'ಕುರುಡು ಕಾಂಚಾಣ' ಮೂಲಕ ನಾಯಕಿಯಾಗಿ ಅಮೂಲ್ಯ ಗೌಡ ಪಾದಾರ್ಪಣೆ!

ಅಪರಂಜಿ, ಅಗ್ನಿಸಾಕ್ಷಿ ಮತ್ತು ನನ್ನರಸಿ ರಾಧೆ ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ ಮಾಡೆಲ್ ಕಮ್ ನಟಿ ಅಮೂಲ್ಯಗೌಡ ಕುರುಡು ಕಾಂಚಾಣ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಅಮೂಲ್ಯಗೌಡ
ಅಮೂಲ್ಯಗೌಡ
Updated on

ಅಪರಂಜಿ, ಅಗ್ನಿಸಾಕ್ಷಿ ಮತ್ತು ನನ್ನರಸಿ ರಾಧೆ ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ ಮಾಡೆಲ್ ಕಮ್ ನಟಿ ಅಮೂಲ್ಯಗೌಡ ಕುರುಡು ಕಾಂಚಾಣ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಎಸ್ ಪ್ರದೀಪ್ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಕಿರಣ್ ರಾಜ್ ಕೂಡ ನಟಿಸಿದ್ದಾರೆ. ಅಮೂಲ್ಯ, ಹೈಪರ್, ಬಬ್ಲಿ ಮತ್ತು ನೇರ ಸ್ವಭಾವದ ಜನ್ನಿ ಪಾತ್ರದಲ್ಲಿ ನಟಿಸಿದ್ದಾರೆ.

ನಿರ್ಮಾಪಕರು ಟಾಕಿ ಭಾಗಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು ಈ ತಿಂಗಳ ಕೊನೆಯಲ್ಲಿ ಹಾಡಿನ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಹೋಗಲಿದ್ದಾರೆ.

ಶಿವರಾಜಕುಮಾರ್, ಉಪೇಂದ್ರ, ಮಾಲಾಶ್ರೀ, ರಮ್ಯಾ, ಸಂಗೀತ ಶೃಂಗೇರಿ, ಮತ್ತು ಭಾರತಿ ವಿಷ್ಣುವರ್ಧನ್ ಅವರಂತಹ ತಾರೆಯರನ್ನು ನಾನು ಸಂದರ್ಶಿಸಿದ್ದೆ,  ಅವರು ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದರು, ನನ್ನ ಗಮನವನ್ನು ಸಿನಿಮಾದತ್ತ ಕೇಂದ್ರೀಕರಿಸುವಂತಾಯಿತು.

ಆರಂಭಿಕ ಪ್ರಾಜೆಕ್ಟ್‌ಗಳು ಟೇಕಾಫ್ ಆಗದ ಕಾರಣ ನಾನು ಕೆಲವು ತೊಂದರೆಗಳನ್ನು ಎದುರಿಸಿದರೂ, ಅಂತಿಮವಾಗಿ ಕುರುಡು ಕಾಂಚನಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡಲು ನನಗೆ ಸಂತೋಷವಾಗಿದೆ ಎಂದು ಅಮೂಲ್ಯಗೌಡ ಹೇಳಿದ್ದಾರೆ. ವಿ ಟಾಕೀಸ್‌ನ ನಿರ್ಮಾಣದ ಕುರುಡು ಕಾಂಚನಾ ಚಿತ್ರಕ್ಕೆ ಗೀತಾ ಕೈವರ್ ಅವರ ಸಂಗೀತ ಮತ್ತು ಪ್ರವೀಣ್ ಶೆಟ್ಟಿ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com