ಕಾರವಾರದ ದೇರಿಯಾ ಗ್ರಾಮಕ್ಕೆ 'ಕಾಂತಾರ' ಹೀರೋ ರಿಷಬ್ ಶೆಟ್ಟಿ ಭೇಟಿ

'ಕಾಂತಾರ' ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ಅವರು ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಅರಣ್ಯವಾಸಿಗಳೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಿದರು, ಅಲ್ಲಿನ ನಿವಾಸಿಗಳೊಂದಿಗೆ ಸಂವಾದ ನಡೆಸಿ ಸಂರಕ್ಷಣೆಗೆ ಅವರ ಕೊಡುಗೆಯ ಬಗ್ಗೆ ತಿಳಿದುಕೊಂಡರು.
ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ
Updated on

ಕಾರವಾರ(ಉತ್ತರ ಕನ್ನಡ): 'ಕಾಂತಾರ' ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ಅವರು ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಅರಣ್ಯವಾಸಿಗಳೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಿದರು, ಅಲ್ಲಿನ ನಿವಾಸಿಗಳೊಂದಿಗೆ ಸಂವಾದ ನಡೆಸಿ ಸಂರಕ್ಷಣೆಗೆ ಅವರ ಕೊಡುಗೆಯ ಬಗ್ಗೆ ತಿಳಿದುಕೊಂಡರು.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಣಬಿಗಳಿಗೆ ಭೇಟಿ ನೀಡುವ ಕನಸು-ನನಸಾಯಿತು. ಮೂರು ವರ್ಷಗಳ ನಂತರ ದೇರಿಯಾಕ್ಕೆ ಭೇಟಿ ನೀಡಿ ಡೇರೆಕರ್ ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆದರು, ಪ್ರಕೃತಿಯ ಬಗ್ಗೆ ತಮ್ಮ ಜ್ಞಾನವನ್ನು ಹಂಚಿಕೊಂಡರು.

'ಕಾಂತಾರ'ದಲ್ಲಿ ಕಾಡುಪ್ರಾಣಿಗಳು, ಅರಣ್ಯ ಸಂರಕ್ಷಣೆಯ ಸಂದೇಶವನ್ನು ನೀಡಲಾಗಿತ್ತು. ಈ ದಿಸೆಯಲ್ಲಿ ಅರಣ್ಯ ಇಲಾಖೆಯ ಆಹ್ವಾನದ ಮೇರೆಗೆ ವಿಶ್ವ ಪರಿಸರ ದಿನಕ್ಕೆ ಭೇಟಿ ನೀಡಿದರು.  ಅವರನ್ನು ವಾಘ್‌ಬಂಧ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸ್ವಾಗತಿಸಿದರು. ಸಂಪ್ರದಾಯದಂತೆ ಗ್ರಾಮದಲ್ಲಿ ಸಸಿ ನೆಟ್ಟ ಅವರಿಗೆ ಕುಣಬಿಗಳ ಪದ್ಧತಿಯಂತೆ ಮಕರಂದ ಸ್ರವಿಸುವ ಜೇನು ತುಂಡನ್ನು ನೀಡಲಾಯಿತು.

ಸಂವಾದದ ಸಮಯದಲ್ಲಿ, ಕುನಬಿಗಳು ಮರಗಳು, ಪ್ರಾಣಿಗಳ ಚಲನೆ ಮತ್ತು ಗೆಡ್ಡೆಗಳು ಸೇರಿದಂತೆ ಔಷಧದ ತಮ್ಮ ಸಾಂಪ್ರದಾಯಿಕ ಜ್ಞಾನದ ಬಗ್ಗೆ ಮಾತನಾಡಿದರು.

ಇದಕ್ಕೂ ಮುನ್ನ ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ಪಾತಗುಡಿಗೆ ಭೇಟಿ ನೀಡಿ ಅರಣ್ಯವಾಸಿಗಳಿಗೆ ಪುನರ್ವಸತಿ ಕಲ್ಪಿಸಿದ ಬಗ್ಗೆ ಅಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿ ಕಾವಲುಗಾರ ಗಜಾನಂದಗೌಡ ಅವರಿಗೆ ಅರಣ್ಯ ಇಲಾಖೆಯಲ್ಲಿ ಜೀವದಾನದ ಕುರಿತು ಮಾತನಾಡಿದರು. ಗ್ರಾಮಸ್ಥರನ್ನು ಭೇಟಿ ಮಾಡಿ ಮಕ್ಕಳಿಗೆ ಶಾಲೆ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದರು. ದೇಗುಲದ ಜೀರ್ಣೋದ್ಧಾರ ಹಾಗೂ ಸೌಂದರ್ಯೀಕರಣಕ್ಕೆ ತಮ್ಮ ಕೊಡುಗೆ ನೀಡುವುದಾಗಿ ತಿಳಿಸಿದರು.

ರಿಷಬ್ ಶೆಟ್ಟಿ ಅವರಿಗೆ ಕುಣಬಿ ಬುಡಕಟ್ಟು ಜನಾಂಗದ ಗಡ್ಡೆ ಆಧಾರಿತ ಆಹಾರ, ಅಕ್ಕಿ ರೊಟ್ಟಿ, ಕರಿಬೇವು ಮತ್ತು ಇತರ ಪದಾರ್ಥಗಳ ಆತಿಥ್ಯ ನೀಡಲಾಯಿತು. ಸಾಮಾನ್ಯ ಊಟದ ನಂತರ ಬಿಸಿ ಕೋಕಂ ಪಾನೀಯವನ್ನು ನೀಡಲಾಯಿತು.

ಸ್ಥಳಾಂತರಗೊಂಡಿರುವ ಸುಳೇವಾಡಿ ಗ್ರಾಮಸ್ಥರು, ಸರ್ಕಾರದಿಂದ ಪಡೆದ ಪ್ಯಾಕೇಜ್‌ನಿಂದ ಸಂತೋಷವಾಗಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ತಮಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು. 

ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ, ಈ ಸ್ಥಳವು ನನಗೆ ಮನೆಯ ಅನುಭವವನ್ನು ನೀಡುವುದರಿಂದ ದೇರಿಯಾಕ್ಕೆ ಮತ್ತೊಮ್ಮೆ ಭೇಟಿ ನೀಡಲು ನನಗೆ ಸಂತೋಷವಾಗಿದೆ. ಇದು ಕುಂದಾಪುರ ಸಮೀಪದ ಕೆರಾಡಿಯನ್ನು ಹೋಲುತ್ತದೆ. ನಮ್ಮಂತೆ ಇವರೂ ಪ್ರಕೃತಿಯ ಆರಾಧಕರು. ನನ್ನ ಹಳ್ಳಿಯೂ ಅಷ್ಟೇ ಸುಂದರ. ಮನೆಗೆ ಬಂದಂತಿದೆ ಎಂದರು. 

ಆದಿವಾಸಿಗಳ ಹಕ್ಕುಗಳ ಕುರಿತು, ಈ ಜನರು ಯುಗಗಳಿಂದಲೂ ಇಲ್ಲಿದ್ದಾರೆ. ಅವರಿಗೆ ಪ್ರವಾಸೋದ್ಯಮಕ್ಕೆ ಮಾನ್ಯತೆ ಸಿಗುವಂತೆ ನೆರವು ನೀಡಬೇಕು ಎಂದು ಹೇಳಿದರು. "ಹಲವಾರು ರೆಸಾರ್ಟ್‌ಗಳು ಮತ್ತು ಹೋಮ್-ಸ್ಟೇಗಳಿವೆ. ಅವರ ಇಚ್ಛೆಗೆ ವಿರುದ್ಧವಾಗಿ ಅವರನ್ನು ದೂರ ಮಾಡಲು ಪ್ರಯತ್ನಿಸುವ ಬದಲು, ಅವರ ಮೂಲನೆಲೆಗೆ ಸಂಪರ್ಕ ಕಲ್ಪಿಸುವಂತೆ ನಾವು ಏನಾದರೂ ಮಾಡಬೇಕು ಎಂದು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com