ಮೇ 18ಕ್ಕೆ ಉರಿಗೌಡ ನಂಜೇಗೌಡ ಸಿನಿಮಾ ಮುಹೂರ್ತ: ಚಿತ್ರಕ್ಕೆ ಸಚಿವ ಅಶ್ವತ್ಥ್ ನಾರಾಯಣ ಚಿತ್ರಕಥೆ?

ಟಿಪ್ಪುವಧೆಯ ವಿಚಾರದಲ್ಲಿ ಚರ್ಚೆಯಾಗುತ್ತಿರುವ ಉರಿಗೌಡ ಮತ್ತು ನಂಜೇಗೌಡ ಎಂಬ ವ್ಯಕ್ತಿಗಳ ಕುರಿತಾದ ಸಿನಿಮಾವನ್ನು ಸಚಿವ, ನಿರ್ಮಾಪಕ ಮುನಿರತ್ನ ನಿರ್ಮಾಣ ಮಾಡುತ್ತಿದ್ದು. ಮೇ 18 ಕ್ಕೆ ಸಿನಿಮಾದ ಮುಹೂರ್ತ ನಿಗದಿಯಾಗಿದೆ.
ಸಚಿವ ಮುನಿರತ್ನ
ಸಚಿವ ಮುನಿರತ್ನ
Updated on

ಬೆಂಗಳೂರು: ಟಿಪ್ಪುವಧೆಯ ವಿಚಾರದಲ್ಲಿ ಚರ್ಚೆಯಾಗುತ್ತಿರುವ ಉರಿಗೌಡ ಮತ್ತು ನಂಜೇಗೌಡ ಎಂಬ ವ್ಯಕ್ತಿಗಳ ಕುರಿತಾದ ಸಿನಿಮಾವನ್ನು ಸಚಿವ, ನಿರ್ಮಾಪಕ ಮುನಿರತ್ನ ನಿರ್ಮಾಣ ಮಾಡುತ್ತಿದ್ದು. ಮೇ 18 ಕ್ಕೆ ಸಿನಿಮಾದ ಮುಹೂರ್ತ ನಿಗದಿಯಾಗಿದೆ.

ಸಿನಿಮಾ ಮುಹೂರ್ತ ಮೇ 18 ರ ಬೆಳಿಗ್ಗೆ 10 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ರಾಜ್ಯದ ಮತ್ತೋರ್ವ ಸಚಿವರಾದ, ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥ ನಾರಾಯಣ ಈ ಸಿನಿಮಾಗೆ ಚಿತ್ರಕಥೆಯನ್ನು ಬರೆಯಲಿದ್ದಾರೆ ಎಂಬುದು ಮತ್ತೊಂದು ಅಚ್ಚರಿಯ ವಿಷಯವಾಗಿದೆ.

ಪೋಸ್ಟರ್ ನಲ್ಲಿ ಸಚಿವ ಆರ್ ಅಶೋಕ್ ಹಾಗೂ ಮಾಜಿ ಸಚಿವ ಸಿಟಿ ರವಿ ಅವರ ಭಾವಚಿತ್ರವಿದ್ದು, ಉಭಯ ನಾಯಕರೂ ಚಿತ್ರವನ್ನು ಪ್ರೇಕ್ಷಕರಿಗೆ ಅರ್ಪಿಸಲಿದ್ದಾರೆ ಎಂದು ಮುನಿರತ್ನ ಟ್ವೀಟ್ ಮಾಡಿದ್ದಾರೆ.

ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ 'ಉರೀಗೌಡ ನಂಜೇಗೌಡ' ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್.ಅಶ್ವಥ್ ನಾರಾಯಣ್ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸಚಿವ ಮುನಿರತ್ನ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com