ದರ್ಬಾರ್ ಸಿನಿಮಾ ತಂಡದ ಜೊತೆ ವಿ ಮನೋಹರ್
ದರ್ಬಾರ್ ಸಿನಿಮಾ ತಂಡದ ಜೊತೆ ವಿ ಮನೋಹರ್

23 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕಿಳಿದ ವಿ. ಮನೋಹರ್

ಓ ಮಲ್ಲಿಗೆ ಮತ್ತು ಇಂದ್ರಧನುಷ್ ಚಿತ್ರಗಳನ್ನು ನಿರ್ದೇಶಿಸಿದ್ದ ಜನಪ್ರಿಯ ಸಂಗೀತ ಸಂಯೋಜಕ ವಿ ಮನೋಹರ್ 23 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕಿಳಿಸಿದಿದ್ದಾರೆ.

ಓ ಮಲ್ಲಿಗೆ ಮತ್ತು ಇಂದ್ರಧನುಷ್ ಚಿತ್ರಗಳನ್ನು ನಿರ್ದೇಶಿಸಿದ್ದ ಜನಪ್ರಿಯ ಸಂಗೀತ ಸಂಯೋಜಕ ವಿ ಮನೋಹರ್ 23 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕಿಳಿಸಿದಿದ್ದಾರೆ.

ದರ್ಬಾರ್ ಎಂಬ ಟೈಟಲ್ ನ ಈ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸತೀಶ್ ಬರೆದಿದ್ದಾರೆ, ಅವರು ನಾಯಕರಾಗಿಯೂ ನಟಿಸಿದ್ದಾರೆ. ಚಿತ್ರದಲ್ಲಿ ಜಾಹ್ನವಿ, ಸಾಧು ಕೋಕಿಲಾ, ಹಿರಿಯ ನಟ ಅಶೋಕ್, ಲಕ್ಷ್ಮಿ ದೇವಮ್ಮ, ನವೀನ್ ಪಡೀಲ್, ಸಂತು, ಕಾರ್ತಿಕ್ ಮತ್ತು ತ್ರಿವೇಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇಂದ್ರಧನುಷ್ ನಂತರ ತಾವು ಧಾರಾವಾಹಿಗಳು ಮತ್ತು ಸಂಗೀತ ಸಂಯೋಜನೆಯಲ್ಲಿ ನಿರತರಾಗಿದ್ದಾಗಿ ಮನೋಹರ್ ಇತ್ತೀಚೆಗೆ ಮಾಧ್ಯಮದೊಂದಿಗಿನ ತಮ್ಮ ಸಂವಾದದಲ್ಲಿ ಪ್ರಸ್ತಾಪಿಸಿದರು. ನಾನು ಮತ್ತೆ ನಿರ್ದೇಶಕರ ಕುರ್ಚಿಗೆ ಬರಲು ಸತೀಶ್ ಕಾರಣ. ಈ ಕಥೆಯು ಮತದಾನದ ಮಹತ್ವವನ್ನು ಎತ್ತಿ ತೋರಿಸುತ್ತದೆ' ಎಂದು ಅವರು ಹೇಳಿದರು.

<strong>ಸತೀಶ್, ಜಾಹ್ನವಿ</strong>
ಸತೀಶ್, ಜಾಹ್ನವಿ

ಬಿ.ಎನ್.ಶಿಲ್ಪಾ ನಿರ್ಮಾಣದ ಈ ಚಿತ್ರಕ್ಕೆ ಮನೋಹರ್ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ದರ್ಬಾರ್ ಮೂರು ಹಾಡುಗಳನ್ನು ಒಳಗೊಂಡಿದೆ ಮತ್ತು ಉಪೇಂದ್ರ ಡ್ಯುಯೆಟ್ ಹಾಡನ್ನು ಹಾಡಿದ್ದಾರೆ.

ಜಯಂತ್ ಕಾಯ್ಕಿಣಿಯವರ ಸಾಹಿತ್ಯದೊಂದಿಗೆ. ರಾಪರ್ ಮತ್ತು ಖ್ಯಾತ ಗಾಯಕ ಚಂದನ್ ಶೆಟ್ಟಿ ಶೀರ್ಷಿಕೆ ಗೀತೆಗೆ ಧ್ವನಿ ನೀಡಿದ್ದಾರೆ. ರಾಜಕೀಯ ಹಿನ್ನೆಲೆಯ ಈ ಚಿತ್ರಕ್ಕೆ ಸಾಮ್ರಾಟ್ ಅವರ ಛಾಯಾಗ್ರಹಣವಿದೆ.

Related Stories

No stories found.

Advertisement

X
Kannada Prabha
www.kannadaprabha.com