ಸಂತೋಷ್ ಬಾಲರಾಜ್ ನಟನೆಯ 'ಸತ್ಯಂ' ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ!

ಕನ್ನಡ ಚಿತ್ರರಂಗದಲ್ಲಿ 'ಕೆಂಪ', 'ಕರಿಯ‌ 2' ಒಲವಿನ ಓಲೆ ಹಾಗೂ 'ಗಣಪ' ಚಿತ್ರಗಳ ಮೂಲಕ ಭರವಸೆ ಮೂಡಿಸಿದ ನಟ ಸಂತೋಷ್ ಬಾಲರಾಜ್. ಇದೀಗ 'ಸತ್ಯಂ' ಎಂಬ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಸತ್ಯಂ ಸಿನಿಮಾ ಸ್ಟಿಲ್
ಸತ್ಯಂ ಸಿನಿಮಾ ಸ್ಟಿಲ್
Updated on

ಕನ್ನಡ ಚಿತ್ರರಂಗದಲ್ಲಿ 'ಕೆಂಪ', 'ಕರಿಯ‌ 2' ಒಲವಿನ ಓಲೆ ಹಾಗೂ 'ಗಣಪ' ಚಿತ್ರಗಳ ಮೂಲಕ ಭರವಸೆ ಮೂಡಿಸಿದ ನಟ ಸಂತೋಷ್ ಬಾಲರಾಜ್. ಇದೀಗ 'ಸತ್ಯಂ' ಎಂಬ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ತಾತ ಮೊಮ್ಮಗನ ಸುತ್ತ ನಡೆಯುವ ಕಥಾಹಂದರದ ಚಿತ್ರವನ್ನು ಅಶೋಕ್ ಕಡಬ ನಿರ್ದೇಶಿಸಿದ್ದಾರೆ. ಸತ್ಯಂ ಎಂಬ ಶೀರ್ಷಿಕೆಯಡಿ, ಅಶೋಕ್ ಕಡಬ ನಿರ್ದೇಶನದ ಚಿತ್ರವು ಕನ್ನಡ ಮತ್ತು ತೆಲುಗು ಮತ್ತು ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಅಪಾರ ಮೆಚ್ಚುಗೆ ಗಳಿಸಿದೆ.

ಹೊಸ ವರ್ಷದಂದು ಬಿಡುಗಡೆಗೆ ತಯಾರಕರು ಸಜ್ಜಾಗುತ್ತಿದ್ದಾರೆ, ಕೆಎ ಸುರೇಶ್ ವಿತರಣೆ ಮಾಡಲಿದ್ದಾರೆ. ಸಂತೋಷ್ ಅವರ ಪ್ರಕಾರ, ಸತ್ಯಂ ಅವರ ಹಿಂದಿನ ಎಲ್ಲಾ ಚಿತ್ರಗಳಿಗೆ ಹೋಲಿಸಿದರೆ ವಿಭಿನ್ನ ಪರಿಕಲ್ಪನೆಯನ್ನು ಹೊಂದಿದ್ದಾರೆ. “ನನ್ನ ದಿವಂಗತ ತಂದೆ ಮತ್ತು ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ಕಥೆಯನ್ನು ಕೇಳಿದರು ಮೆಚ್ಚಿದರು, ಆದರೆ ಅವರು ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಟೀಸರ್‌ಗೆ ಬಂದಿರುವ ಪ್ರತಿಕ್ರಿಯೆಗೆ ಸಂತಸ ತುಂಬಿದೆ. ಚಿತ್ರವು ಅಸಾಧಾರಣವಾಗಿ ರೂಪುಗೊಂಡಿದೆ ಎಂದಿದ್ದಾರೆ.

ಸತ್ಯಂ ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ ಮತ್ತು ಸಿನೆಟೆಕ್ ಸೂರಿ ಅವರ ಛಾಯಾಗ್ರಹಣವಿದೆ, ಈ ಚಿತ್ರವು ಎರಡು ವಿಭಿನ್ನ ಕಾಲಾವಧಿಯ ಕಥೆಗಳನ್ನು ಒಳಗೊಂಡಿದೆ. ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಅಜ್ಜ ಮತ್ತು ಮೊಮ್ಮಗನ ನಡುವಿನ ಸಂಬಂಧದ ಸುತ್ತ ಕಥೆ ಸುತ್ತುತ್ತದೆ. ಪ್ರಾರ್ಥನಾ ವಿಧಿಗಳ ಸಮಯದಲ್ಲಿ ಕೆಲವು ತಪ್ಪು ಕಲ್ಪನೆಗಳು ಮತ್ತು ಅವಘಡಗಳು ಸಂಭವಿಸುತ್ತವೆ.

40 ವರ್ಷಗಳ ನಂತರ ಕುಟುಂಬದ ಮುಖ್ಯಸ್ಥರು ಹಳ್ಳಿಗೆ ಹಿಂದಿರುಗಿದಾಗ ಕಥೆಯು ಆರಂಭವಾಗುತ್ತದೆ ಎಂದು ನಿರ್ದೇಶಕರು ಚಿತ್ರದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಮಹಾಂತೇಶ್ ವಿಕೆ ಈ ಯೋಜನೆಗೆ ಬಂಡವಾಳ ಹೂಡುತ್ತಿದ್ದು, ರಂಜಿನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ತಾರಾಗಣದಲ್ಲಿ ಸುಮನ್, ಸಯಾಜಿ ಶಿಂಧೆ, ಪವಿತ್ರ ಲೋಕೇಶ್, ಅವಿನಾಶ್ ಮತ್ತು ಮುಖ್ಯಮಂತ್ರಿ ಚಂದ್ರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com