'ಸಿರಿ ಲಂಬೋದರ ವಿವಾಹ' ರಿಲೀಸ್ ಡೇಟ್ ಫಿಕ್ಸ್
ಸೌರಭ ಕುಲಕರ್ಣಿ ಚೊಚ್ಚಲ ನಿರ್ದೇಶನದ ಸಿರಿಲಂಬೋದರ ವಿವಾಹ ಬಿಡುಗಡೆಗೆ ಸಜ್ಜಾಗಿದೆ. ರಂಗಭೂಮಿ-ಕಿರುತೆರೆ ನಟ ಅಂಜನ್ ಎ. ಭಾರದ್ವಾಜ್ ನಾಯಕ ಮತ್ತು ಖ್ಯಾತ ನಟ ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ಈ ಚಿತ್ರದ ನಾಯಕಿ.
ಡಿಸೆಂಬರ್ 2022 ರಲ್ಲಿ ದುಬೈ, ಅಬುಧಾಬಿ ಮತ್ತು ಮಸ್ಕತ್ನಲ್ಲಿ ನಡೆದ ಪ್ರೀಮಿಯರ್ ಶೋಗಳಲ್ಲಿ ಎನ್ಆರ್ಐ ಕನ್ನಡಿಗರ ಹೃದಯ ಗೆದ್ದಿದೆ. ಮತ್ತು ಈಗ ಅದು ಫೆಬ್ರವರಿ 17 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.
ಕಿರುತೆರೆ ನಿರೂಪಕ ಸಂಜೀವ ಕುಲಕರ್ಣಿ ಪುತ್ರ ಸೌರಭ ಕುಲಕರ್ಣಿ ನಿರ್ದೇಶನದ ಎಸ್.ಎಲ್.ವಿ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಅಂಜನ್ ಭಾರದ್ವಾಜ್ ಮತ್ತು ರಮೇಶ್ ಪುತ್ರಿ ದಿಶಾ ರಮೇಶ್ ನಾಯಕ- ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಮದುವೆ ಇವೆಂಟ್ ಹಿನ್ನೆಲೆಯಲ್ಲಿ ಸಾಗಲಿದೆ.
ಎಸ್.ಎಲ್.ವಿ ಎಂದರೆ ಸಿರಿ ಲಂಬೋದರ ವಿವಾಹ. ಈ ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ವೆಡ್ಡಿಂಗ್ ಪ್ಲಾನರ್ಸ್ಗಳಾಗಿದ್ದು, ಇದೊಂದು ಹೊಸ ಬಗೆಯ ಕಥಾ ಹಂದರವನ್ನು ಹೊಂದಿದೆ. ಸಿರಿ ಹಾಗೂ ಲಂಬೋದರ ಎನ್ನುವವರ ವಿವಾಹ ಮಾಡಿಸಲು ನಾಯಕ-ನಾಯಕಿ ಸಿದ್ಧರಾಗುತ್ತಾರೆ. ಅಲ್ಲಿ ನಡೆಯುವ ಒಂದಷ್ಟು ಹಾಸ್ಯಮಯ, ಭಾವನಾತ್ಮಕ ಹಾಗೂ ರೋಚಕ ಸನ್ನಿವೇಶಗಳ ಮಿಶ್ರಣವೇ ಸಿರಿ ಲಂಬೋದರ ವಿವಾಹ.
ಎಸ್.ಎಲ್.ವಿ. ಎಂದರೆ ‘ಸಿರಿ ಲಂಬೋದರ ವಿವಾಹ’. ‘ಸಿರಿ’ ಹಾಗೂ ‘ಲಂಬೋದರ’ ಜೋಡಿಯ ವಿವಾಹ ಮಾಡಿಸಲು ನಾಯಕ-ನಾಯಕಿ ಸಿದ್ಧರಾಗುತ್ತಾರೆ. ಅಲ್ಲಿ ನಡೆಯುವ ಒಂದಷ್ಟು ಹಾಸ್ಯ, ಭಾವನಾತ್ಮಕ ಸನ್ನಿವೇಶಗಳ ಮಿಶ್ರಣವೇ ‘ಎಸ್.ಎಲ್.ವಿ’ ಎನ್ನುತ್ತಾರೆ ನಿರ್ದೇಶಕರು. ತಾರಾಂಗಣದಲ್ಲಿ ರಾಜೇಶ್ ನಟರಂಗ, ಸುಂದರ್ ವೀಣಾ, ಬಲ ರಾಜವಾಡಿ, ರೋಹಿತ್ ನಾಗೇಶ್, ಪಿ.ಡಿ. ಸತೀಶ್ಚಂದ್ರ, ಸದಾನಂದ ಕಾಳೆ, ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಶಿವು ಇದ್ದಾರೆ. ವರ್ಸ್ಯಾಟೋ ವೆಂಚರ್ಸ್, ಪವಮಾನ ಕ್ರಿಯೇಷನ್ಸ್, ಫೋರೆಸ್ ನೆಟ್ವರ್ಕ್ ಸಲ್ಯೂಷನ್ಸ್ ಹಾಗೂ ಧೂಪದ ದೃಶ್ಯ ಬ್ಯಾನರ್ಗಳ ಅಡಿಯಲ್ಲಿ ಚಿತ್ರ ತಯಾರಾಗಿದೆ.
ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣ, ಸಂಘರ್ಷ್ ಕುಮಾರ್ ಅವರ ಸಂಗೀತ ನಿರ್ದೇಶನ, ವಿನೋದ್ ಅವರ ಸಾಹಸ ನಿರ್ದೇಶನ, ಗಂಗಮ್ ರಾಜು ಅವರ ನೃತ್ಯ ಸಂಯೋಜನೆ, ನಮ್ಮನೆ ಪ್ರೊಡಕ್ಷನ್ಸ್ ತಂಡದ ಕ್ರಿಯಾಶೀಲತೆ ಚಿತ್ರದಲ್ಲಿದೆಯಂತೆ. ಬೆಂಗಳೂರು ಮತ್ತು ಮೈಸೂರಿನಲ್ಲಿ 39 ದಿನಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಸ್ಎಲ್ವಿಗಾಗಿ ನುರಿತ ತಂತ್ರಜ್ಞರ ಸಾಮರಸ್ಯದ ಮಿಶ್ರಣವಿದೆ ಎಂದು ಸೌರಭ್ ಅಭಿಪ್ರಾಯಪಟ್ಟಿದ್ದಾರೆ.