ಖಾಸಗಿ ವಿಡಿಯೋ ಲೀಕ್ ನೋವು ನಡುವೆ Akshaya Tritiya ದಿನ ಪದ್ಮಶ್ರೀ ಪುರಸ್ಕೃತನಿಗೆ ನಟಿ ಜ್ಯೋತಿ ರೈ ನೆರವು!

ತೆಲುಗಿನ ಗುಪ್ಪೆಡಂತ ಮನಸು ಧಾರಾವಾಹಿ ಮೂಲಕ ಜನಪ್ರಿಯರಾದ ಕಿರುತೆರೆ ನಟಿ ಜ್ಯೋತಿ ರೈ ಇದೀಗ ಸಂಕಷ್ಟದಲ್ಲಿದ್ದವರಿಗೆ ಹಣ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಟಿ ಜ್ಯೋತಿ ರೈ
ನಟಿ ಜ್ಯೋತಿ ರೈ
Updated on

ತೆಲುಗಿನ ಗುಪ್ಪೆಡಂತ ಮನಸು ಧಾರಾವಾಹಿ ಮೂಲಕ ಜನಪ್ರಿಯರಾದ ಕಿರುತೆರೆ ನಟಿ ಜ್ಯೋತಿ ರೈ ಇದೀಗ ಸಂಕಷ್ಟದಲ್ಲಿದ್ದವರಿಗೆ ಹಣ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಂಕಷ್ಟದಲ್ಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದರ್ಶನಂ ಮೊಗಿಲಯ್ಯ ಅವರಿಗೆ ರೂ. 50 ಸಾವಿರ ಆರ್ಥಿಕ ನೆರವು ನೀಡಿದ್ದಾರೆ. ಅಕ್ಷಯ ತೃತೀಯದಂದು ಅವರು ತಮ್ಮ ತಂಡದ ಮೂಲಕ ಮೊಗಿಲಿಯವರನ್ನು ಭೇಟಿಯಾಗಿ ರೂ. 50 ಸಾವಿರ ನಗದು ಹಣ ನೀಡಿದರು.

ನನಗೂ ಈಗ ಒಂದಿಷ್ಟು ಕಷ್ಟಗಳು ಎದುರಾಗುತ್ತಿವೆ. ತನ್ನ ಕಷ್ಟಕ್ಕಿಂತ ಮೊಗಿಲಯ್ಯನ ಸ್ಥಿತಿಯೇ ಹೆಚ್ಚು ಕಾಡುತ್ತಿದೆ ಎಂದು ಜ್ಯೋತಿ ರೈ ಹೇಳಿದ್ದಾರೆ. ತೆಲಂಗಾಣದ ಕಿನ್ನೇರ ಕಲಾವಿದ ದರ್ಶನಂ ಮೊಗಿಲಯ್ಯ ಕೂಲಿ ಕೆಲಸ ಮಾಡಿ ಕುಟುಂಬಕ್ಕೆ ಆಸರೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮೊಗಿಲಯ್ಯರವರಿಗೆ ರಾಜ್ಯ ಸರ್ಕಾರ ಗೌರವಧನ ಸಹ ನಿಲ್ಲಿಸಿತ್ತು. ಹೀಗಾಗಿ ಅವರಿಗೆ ಜೀವನ ನಡೆಸುವುದು ಕಷ್ಟವಾಗಿತ್ತು.

ನಟಿ ಜ್ಯೋತಿ ರೈ
ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ ಖಾಸಗಿ ವಿಡಿಯೋ ಲೀಕ್; ನಟಿ ಹೇಳಿದ್ದೇನು?

ಜ್ಯೋತಿ ರೈ ಅವರ ನಿರ್ಧಾರದಿಂದ ಎಲ್ಲರೂ ಸಂತಸಗೊಂಡಿದ್ದಾರೆ. ನೆಟ್ಟಿಗರು ಆಕೆಯ ಮಹಾನ್ ಮನಸ್ಸನ್ನು ಶ್ಲಾಘಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ವೈಯಕ್ತಿಕ ವಿಚಾರದಿಂದ ಜ್ಯೋತಿ ರೈ ಸುದ್ದಿಯಲ್ಲಿರುವುದು ಗೊತ್ತೇ ಇದೆ. ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮ ಖಾತೆಯ ಪೋಸ್ಟ್‌ನಲ್ಲಿ ನಟಿಯ ವೈಯಕ್ತಿಕ ವೀಡಿಯೊ ಲೀಕ್ ಮಾಡಿದ್ದನ್ನು. ಅಲ್ಲದೆ ಹಣ ಕಳುಹಿಸಿದರೆ ವೀಡಿಯೊವನ್ನು ಹಂಚಿಕೊಳ್ಳುವುದಾಗಿ ಹೇಳಿದ್ದನು. ಇದು ನಟಿಯನ್ನು ತೀವ್ರವಾಗಿ ಬಾಧಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com