ವಿಕ್ಕಿ ವರುಣ್ ಚೊಚ್ಚಲ ನಿರ್ದೇಶನದ 'ಕಾಲಾಪತ್ಥರ್' ಬಿಡುಗಡೆಗೆ ಡೇಟ್ ಫಿಕ್ಸ್

ಭುವನ್ ಮೂವೀಸ್ ಬ್ಯಾನರ್‌ನಡಿಯಲ್ಲಿ ನಾಗರಾಜು ಬಿಲ್ಲಿನಕೋಟೆ ಮತ್ತು ಭುವನ್ ಸುರೇಶ್ ನಿರ್ಮಿಸಿರುವ ಕಾಲಾಪತ್ಥಾರ್ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ.
ಕಾಲಾಪತ್ಥರ್ ಸಿನಿಮಾ ತಂಡ
ಕಾಲಾಪತ್ಥರ್ ಸಿನಿಮಾ ತಂಡ
Updated on

ಸೂರಿ ಮತ್ತು ಯೋಗರಾಜ್ ಭಟ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಗಳಿಸಿರುವ ಹಾಗೂ ಕೆಂಡಸಂಪಿಗೆ ಮತ್ತು ಕಾಲೇಜ್ ಕುಮಾರ್ ಚಿತ್ರಗಳ ಮೂಲಕ ಛಾಪು ಮೂಡಿಸಿದ್ದ ವಿಕ್ಕಿ ವರುಣ್ ಈಗ ಕಾಲಾಪತ್ಥರ್ ಚಿತ್ರದ ಮೂಲಕ ನಿರ್ದೇಶನಕ್ಕೆ ಮುಂದಾಗಿದ್ದಾರೆ.

ರಾಮ ರಾಮ ರೇ... ಚಿತ್ರಕ್ಕೆ ಹೆಸರಾದ ಡಿ ಸತ್ಯ ಪ್ರಕಾಶ್ ಬರೆದಿರುವ ಚಿತ್ರದ ಕಥೆಯುಳ್ಳ ಸಿನಿಮಾ ಸೆಪ್ಟೆಂಬರ್ 13 ರಂದು ಬಿಡುಗಡೆಯಾಗಲಿದೆ. ಭುವನ್ ಮೂವೀಸ್ ಬ್ಯಾನರ್‌ನಡಿಯಲ್ಲಿ ನಾಗರಾಜು ಬಿಲ್ಲಿನಕೋಟೆ ಮತ್ತು ಭುವನ್ ಸುರೇಶ್ ನಿರ್ಮಿಸಿರುವ ಕಾಲಾಪತ್ಥಾರ್ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಜೈನಾಪುರ ಗ್ರಾಮದಲ್ಲಿ ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಚಿತ್ರದ ಕಥಾವಸ್ತುವು ಕಾಶಿಬಾಯಿ ಮಲ್ಲಪ್ಪ ದೇಸಾಯಿ ಅವರ ಮೇಲೆ ಕೇಂದ್ರೀಕೃತವಾಗಿದೆ, ಅವರು ಬ್ರಿಟಿಷ್ ಯುಗದಲ್ಲಿ ರೋಲ್ಸ್ ರಾಯ್ಸ್ ಕಾರು ಹೊಂದಿದ್ದ ಮೊದಲ ಭಾರತೀಯರಾಗಿದ್ದರು.

ಅಧಿಕೃತ ಬಳಕೆಗಾಗಿ ಜಿಲ್ಲಾಧಿಕಾರಿ ಕಾರನ್ನು ಕೋರಿದಾಗ, ಕಾಶಿಬಾಯಿ ನಿರಾಕರಿಸುತ್ತಾರ. ಇದರಿಂದ ಕೋಪಗೊಂಡ ಅಧಿಕಾರಿಗಳು ಕಾರಿನ ನೋಂದಣಿಯನ್ನು ರದ್ದುಗೊಳಿಸುತ್ತಾರೆ, ಆದರೆ ಕಾಶಿಬಾಯಿ ತನ್ನ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಇದರ ಜೊತೆಗೆ ಗ್ರಾಮವು ಅಸಾಮಾನ್ಯ ಸವಾಲನ್ನು ಎದುರಿಸುತ್ತಿದೆ. ಇದು ಮಳೆಗಾಲದಲ್ಲಿ ಗ್ರಾಮವೂ ಸಂಪೂರ್ಣವಾಗಿ ಮುಳುಗುತ್ತದೆ ಮತ್ತು ಬೇಸಿಗೆಯಲ್ಲಿ ಕಾಣಿಸುತ್ತದೆ.ಮಳೆಗಾಲದ ಸಮಯದಲ್ಲಿ ರಾಜ್ಯ ಸರ್ಕಾರವು ಹತ್ತಿರದ ಸ್ಥಳದಲ್ಲಿ ಗ್ರಾಮಸ್ಥರಿಗೆ ಪರ್ಯಾಯ ವಸತಿಗಳನ್ನು ಒದಗಿಸುತ್ತದೆ. ಧನ್ಯ ರಾಮ್‌ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ, ಜೊತೆಗೆ ಅಚ್ಯುತ್ ಕುಮಾರ್, ನಾಗಾಭರಣ, ಸಂಪತ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಸಂದೀಪ್ ಕುಮಾರ್ ಅವರ ಛಾಯಾಗ್ರಹಣವಿದೆ.

ಕಾಲಾಪತ್ಥರ್ ಸಿನಿಮಾ ತಂಡ
30 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಗೆ 'ಬೆಳ್ಳಿ ಕಾಲುಂಗುರ'; ಧನ್ಯಾ ರಾಮ್ ಕುಮಾರ್ ನಾಯಕಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com