'ಯುದ್ಧಕಾಂಡ' ಕಥೆ ಕೇಳಿದಾಗ ನನ್ನ ಮಗಳ ನೆನಪಾಯಿತು: ಅಜಯ್ ರಾವ್ ಹೀಗೆ ಹೇಳಿದ್ಯಾಕೆ?

ಪವನ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ ಮತ್ತು ನಾಗಾಭರಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಜಯ್ ರಾವ್ ಹಾಗೂ ಚಿತ್ರ ತಂಡ
ಅಜಯ್ ರಾವ್ ಹಾಗೂ ಚಿತ್ರ ತಂಡ
Updated on

ಇಷ್ಟು ದಿನ ಲವರ್ ಬಾಯ್ ಆಗಿದ್ದ ಅಜಯ್ ರಾವ್ ಅವರು ಈ ಬಾರಿ ಕಪ್ಪು ಕೋಟ್ ಧರಿಸಿ ಲಾಯರ್ ಆಗಿ ಅಭಿನಯಿಸಿರುವ 'ಯುದ್ಧಕಾಂಡ' ಚಿತ್ರ ಇದೇ ಏಪ್ರಿಲ್ 18 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪವನ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ ಮತ್ತು ನಾಗಾಭರಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಅಜಯ್ ರಾವ್ ಸ್ವತಃ ನಿರ್ಮಿಸಿ, ಅಭಿನಯಿಸಿದ್ದಾರೆ.

ಸುಮಾರು ಮೂರು ವರ್ಷಗಳಿಂದ ಈ ಸಿನಿಮಾಗಾಗಿ ಅಜಯ್ ರಾವ್ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಇದು ಅವರ ಅತ್ಯಂತ ವೈಯಕ್ತಿಕ ಚಿತ್ರಗಳಲ್ಲಿ ಒಂದೆಂದು ವಿವರಿಸುವ ಅಜಯ್, 'ಯುದ್ಧಕಾಂಡ'ದ ಕಥೆ ತಮ್ಮ ಹೃದಯಕ್ಕೆ ಹತ್ತಿರವಾದ ಕಥೆ ಎಂದು ತಿಳಿಸಿದ್ದಾರೆ.

"ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸದಂತೆ" ಎಂಬ ಪ್ರಬಲ ವಿಷಯವನ್ನಿಟ್ಟುಕೊಂಡು ಈ ಚಿತ್ರ ಮಾಡಲಾಗಿದ್ದು, ಲೈಂಗಿಕ ದೌರ್ಜನ್ಯದ ಆಘಾತ ಮತ್ತು ನ್ಯಾಯಕ್ಕಾಗಿ ಹೋರಾಟ ನಡೆಸುವ ಸಂತ್ರಸ್ತರು ಎದುರಿಸುವ ಪರಿಸ್ಥಿತಿಗಳನ್ನು ವಿವರಿಸುತ್ತದೆ. ಆರಂಭದಲ್ಲಿ ಈ ಸೌಜನ್ಯ ಪ್ರಕರಣವನ್ನು ಆಧರಿಸಿದೆ ಎಂದು ಹೇಳಲಾಗಿತ್ತು. ಆದರೆ ಇದು ಯಾರೋ ಒಬ್ಬ ಹೆಣ್ಣು ಮಗುವಿನ ಸುತ್ತ ಇರುವ ಕತೆಯಲ್ಲ. ಭಾರತದ ಅಷ್ಟೂ ಹೆಣ್ಣು ಮಕ್ಕಳನ್ನು ಈ ಚಿತ್ರ ರೆಪ್ರೆಸೆಂಟ್‌ ಮಾಡುತ್ತದೆ ಎಂದು ಅಜಯ್ ರಾವ್ ಹೇಳಿದ್ದಾರೆ.

ಅಜಯ್ ರಾವ್ ಹಾಗೂ ಚಿತ್ರ ತಂಡ
ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ಕ್ಕೆ ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಆಯ್ಕೆ

"ಯುದ್ಧಕಾಂಡದ ಕಥೆಯನ್ನು ಕೇಳಿದಾಗ, ನನಗೆ ನನ್ನ ಮಗಳ ನೆನಪಾಯಿತು. ಪವನ್ ಭಟ್ ಸ್ಕ್ರಿಪ್ಟ್ ಅನ್ನು ವಿವರಿಸುವುದನ್ನು ಮುಗಿಸಿದ ತಕ್ಷಣ, ನಾನು ಅವರಿಗೆ ಬೇರೆ ನಿರ್ಮಾಪಕರನ್ನು ಹುಡುಕಬೇಡಿ ಎಂದು ಹೇಳಿದೆ. ನಾನೇ ಈ ಚಿತ್ರವನ್ನು ನಿರ್ಮಿಸಲು ನನ್ನ ಮಗಳು ಕಾರಣ" ಎಂದು ಅಜಯ್ ಹಂಚಿಕೊಂಡಿದ್ದಾರೆ.

"ಮಹಿಳೆಯರಿಲ್ಲದೆ ಮನೆ ಇಲ್ಲ, ಮತ್ತು ಅವರ ಸುರಕ್ಷತೆಯು ನಮ್ಮನ್ನು ನಿರಂತರವಾಗಿ ಕಾಡುವ ವಿಷಯ. ನಾನು ಪ್ರತಿ ಬಾರಿ ಅತ್ಯಾಚಾರ ಪ್ರಕರಣದ ಬಗ್ಗೆ ಓದಿದಾಗ, ನನ್ನ ರಕ್ತ ಕುದಿಯುತ್ತದೆ" ಎಂದಿದ್ದಾರೆ.

ಯುದ್ಧಕಾಂಡವು ತನ್ನ ಮಗಳಿಗೆ ನ್ಯಾಯ ಪಡೆಯಲು ಯಾವುದೇ ಮಟ್ಟಕ್ಕೆ ಹೋಗುವ ಒಬ್ಬ ತಾಯಿಯ ಕಥೆಯನ್ನು ಹೇಳುತ್ತದೆ. "ಸರ್ಕಾರ ವಾಹನ ಚಲಾಯಿಸುವಾಗ ಸುರಕ್ಷತೆಗಾಗಿ ಹೆಲ್ಮೆಟ್‌ಗಳನ್ನು ಬಳಸುವಂತೆ ಹೇಳುತ್ತದೆ. ಆದರೆ ಲೈಂಗಿಕ ದೌರ್ಜನ್ಯದ ವಿಷಯಕ್ಕೆ ಬಂದಾಗ, ಕಠಿಣ ಕ್ರಮ ಎಲ್ಲಿದೆ?" ಅಜಯ್ ಪ್ರಶ್ನಿಸಿದ್ದಾರೆ. ಅಲ್ಲದೆ "ಈ ಚಿತ್ರ ನಿಜವಾಗಿ ಏನು ಮಾಡಬಹುದು ಎಂಬುದನ್ನು ತೋರಿಸುತ್ತದೆ" ಎಂದಿದ್ದಾರೆ.

ರವಿಚಂದ್ರನ್ ಅವರಿಂದ ಸ್ಫೂರ್ತಿ ಪಡೆದು ಅವರ ಯುದ್ಧಕಾಂಡವನ್ನು ಜೀವಂತಗೊಳಿಸಲು ಈ ಸಿನಿಮಾ ಮಾಡಿದ್ದೇನೆ. ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದೇನೆ. ಆಸ್ತಿಗಳನ್ನು ಒತ್ತೆ ಇಟ್ಟಿದ್ದೇನೆ. ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಒಳ್ಳೆಯ ಉದ್ದೇಶದಿಂದ ಖರ್ಚು ಮಾಡಿದ್ದೇನೆ. "ಅಗತ್ಯವಿದ್ದರೆ, ನಾನು ನಾಳೆ ಟ್ಯಾಕ್ಸಿ ಓಡಿಸಬಹುದು. ಆದರೆ ಎಲ್ಲರಿಗೂ ಅಜಯ್ ರಾವ್ ಆಗುವ ಅವಕಾಶ ಸಿಗುವುದಿಲ್ಲ. ಏನೇ ಆದರೂ, ದೇವರು ನನಗೆ ದಾರಿ ತೋರಿಸುತ್ತಾನೆ ಎಂಬ ನಂಬಿಕೆ ಇದೆ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com