'ಎಲ್ಲೋ ಜೋಗಪ್ಪ ನಿನ್ನರಮನೆ'ಗಾಗಿ 25 ಸಾವಿರ KM ಪ್ರಯಾಣ: ಹಯವದನ

ಫೆಬ್ರವರಿ 21 ರಂದು ಸಿನಿಮಾ ಬಿಡುಗಡೆಯಾಗಲಿದೆ. ತಂದೆ ಮತ್ತು ಮಗನ ನಡುವಿನ ಘರ್ಷಣೆ, ಮಧ್ಯಮ ವರ್ಗದ ಹೋರಾಟಗಳು ಮತ್ತು ಸಾಮಾಜಿಕ ಮಾಧ್ಯಮಗಳ ನಿರಂತರ ಪ್ರಭಾವದ ಕಥೆಯಾಗಿದೆ.
Hayavadana
ಹಯವದನ, 'ಎಲ್ಲೋ ಜೋಗಪ್ಪ ನಿನ್ನರಮನೆ' ಚಿತ್ರದ ದೃಶ್ಯ
Updated on

ಜನಪ್ರಿಯ ಜನಪದ ಗೀತೆಯ 'ಎಲ್ಲೋ ಜೋಗಪ್ಪ ನಿನ್ನರಮನೆ' ಎಂಬ ಪದಗುಚ್ಛವು ಮೊದಲು ಶಿವರಾಜಕುಮಾರ್ ಅಭಿನಯದ ಜೋಗಿ ಸಿನಿಮಾದಲ್ಲಿ ಹಾಡಿನ ರೂಪದಲ್ಲಿ ಬಂದು ವ್ಯಾಪಕ ಮನ್ನಣೆ ಗಳಿಸಿತು. ಈಗ, ಈ ಸಾಂಪ್ರದಾಯಿಕ ಸಾಲು ಹಯವದನ ನಿರ್ದೇಶನದ ಚೊಚ್ಚಲ ಸಿನಿಮಾ ಟೈಟಲ್ ಆಗಿದೆ.

ಈ ಚಿತ್ರದಲ್ಲಿ ಕಂಬ್ಳಿ ಹುಳ ಸ್ಟಾರ್ ಅಂಜನ್ ನಾಗೇಂದ್ರ, ವೆನ್ಯಾ ರೈ ಮತ್ತು ಸಂಜನಾ ದಾಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಫೆಬ್ರವರಿ 21 ರಂದು ಸಿನಿಮಾ ಬಿಡುಗಡೆಯಾಗಲಿದೆ. ತಂದೆ ಮತ್ತು ಮಗನ ನಡುವಿನ ಘರ್ಷಣೆ, ಮಧ್ಯಮ ವರ್ಗದ ಹೋರಾಟಗಳು ಮತ್ತು ಸಾಮಾಜಿಕ ಮಾಧ್ಯಮಗಳ ನಿರಂತರ ಪ್ರಭಾವದ ಕಥೆಯಾಗಿದೆ.

ಈ ಚಿತ್ರಕ್ಕಾಗಿ ಇಡೀ ಇಂಡಿಯಾ ಸುತ್ತಿದ್ದೇನೆ. ಇದು ಒಂದು ಜರ್ನಿ ಸಿನಿಮಾ. ತಂದೆ ಮತ್ತು ಮಗನ ಬಾಂಧವ್ಯದ ಕಹಾನಿ ಇದೆ. ಬೆಂಗಳೂರಿನಿಂದ ಶುರುವಾದ ಪ್ರಯಾಣ ಹಿಮಾಲಯದವರೆಗೆ ಹೋಗುತ್ತದೆ. ಭಾವನಾತ್ಮಕವಾದ ಈ ಸಿನಿಮಾ ಯುವ ಜನರಿಗೆ ಹೆಚ್ಚು ಮನರಂಜನೆ ನೀಡುತ್ತದೆ ಎಂದು ಹೇಳಿದ್ದಾರೆ. ಹಲವು ರಾಜ್ಯಗಳ ಅನೇಕ ಲೊಕೇಷನ್​ಗಳಲ್ಲಿ ಈ ಸಿನಿಮಾದ ಶೂಟಿಂಗ್​ ಮಾಡಲಾಗಿದೆ. ಭಾರತದ ವೈವಿಧ್ಯಮಯ ಭೂದೃಶ್ಯಗಳಾದ್ಯಂತ ನಾಯಕನ ಪ್ರಯಾಣವು ಅನ್ವೇಷಣೆಯಾಗಿ ಕಾರ್ಯನಿರ್ವಹಿಸುತ್ತದೆ, ಸಾಂಸ್ಕೃತಿಕ ಗಡಿಗಳಲ್ಲಿ ಮಾನವ ಸಂಪರ್ಕಗಳನ್ನು ಎತ್ತಿ ತೋರಿಸುತ್ತದೆ.

ಸಿನಿಮಾ ಶೂಟಿಂಗ್ ಸಮಯದಲ್ಲಿ 25,000 ಕಿಲೋಮೀಟರ್‌ಗಳಷ್ಟು ಪ್ರಯಾಣಿಸಿದ್ದೇವೆ. ಹತ್ತು ರಾಜ್ಯಗಳನ್ನು ವ್ಯಾಪಿಸಿರುವ, ಚಿತ್ರದ ಪ್ರಯಾಣವು ಭಾರತದ ದಕ್ಷಿಣದ ತುದಿಯಿಂದ ಹಿಮದಿಂದ ಆವೃತವಾದ ಹಿಮಾಲಯದವರೆಗೆ ವ್ಯಾಪಿಸಿದೆ, 3,000-ಕಿಲೋಮೀಟರ್ ಮಾರ್ಗವು ಪರದೆಯ ಮೇಲೆ ತೋರಲಾಗುತ್ತದೆ ಎಂದು ನಿರ್ದೇಶಕ ಹಯವದನ ತಿಳಿಸಿದ್ದಾರೆ.

Hayavadana
ಹಯವದನ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರಕ್ಕೆ ಸಂಜನಾ ದಾಸ್ ಎಂಟ್ರಿ

ಕಿರುತೆರೆಯಲ್ಲಿ ಯಶಸ್ವಿ ಹಿನ್ನೆಲೆ ಹೊಂದಿರುವ ಹಯವದನ ಅವರು ದೃಶ್ಯ ಮಾಧ್ಯಮದಲ್ಲಿ ಪಾರಂಗತರಾಗಿದ್ದಾರೆ. ಅಗ್ನಿ ಸಾಕ್ಷಿ, ನಾಗಿಣಿ ಮತ್ತು ಕಮಲಿ ಮುಂತಾದ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿದ ಅವರು ದೂರದರ್ಶನ ಮತ್ತು ಸಿನಿಮಾ ನಡುವಿನ ಸಂಪೂರ್ಣ ವ್ಯತ್ಯಾಸಗಳನ್ನು ಒಪ್ಪಿಕೊಂಡಿದ್ದಾರೆ.

ಟೆಲಿವಿಷನ್ ನನಗೆ ಪ್ರಯೋಗ ಮಾಡಲು ವೇದಿಕೆಯನ್ನು ನೀಡಿತು, ಧಾರಾವಾಹಿ ಹಿನ್ನಲೆಯಿಂದ ಬಂದವರಿಗೆ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂಬ ಸ್ಟೀರಿಯೊಟೈಪ್ ವಾದ ಮುರಿಯುತ್ತದೆ. ಉದಾಹರಣೆಗೆ, ನನ್ನ ಚಿತ್ರದ ಅವಧಿ ಕೇವಲ 2 ಗಂಟೆ 6 ನಿಮಿಷಗಳು. ನನ್ನ ಚೊಚ್ಚಲ ಸಿನಿಮಾ ಪ್ರದರ್ಶನವು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಕಂಬ್ಳಿ ಹುಳದ ನಂತರ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರರಂಗದಲ್ಲಿ ನನ್ನ ಎರಡನೇ ಹೆಜ್ಜೆ. ಇದು ಪ್ರತಿಯೊಬ್ಬರೂ ಆನಂದಿಸಬಹುದಾದ ಚಿತ್ರವಾಗಿದೆ. ವಿಶಿಷ್ಟವಾದ ಪಾತ್ರದಲ್ಲಿ ಅಭಿನಯಿಸಲು ನಾನು ರೋಮಾಂಚನಗೊಂಡಿದ್ದೇನೆ. ಪ್ರೇಕ್ಷಕರು ನಮ್ಮನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಚಿತ್ರದ ನಾಯಕರಲ್ಲಿ ಒಬ್ಬರಾದ ಅಂಜನ್ ನಾಗೇಂದ್ರ ಹೇಳಿದ್ದಾರೆ.

ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ನಿರ್ಮಾಣದ ಈ ಚಿತ್ರಕ್ಕೆ ಶಿಯೋಂ ಅವರ ಸಂಗೀತ, ನಟರಾಜು ಮದ್ದಾಳ ಅವರ ಛಾಯಾಗ್ರಹಣ ಮತ್ತು ಹೊಸಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com