ಚಿತ್ರ ನಿರ್ದೇಶನಕ್ಕೆ ಕಾಲಿಟ್ಟ ನಾದಬ್ರಹ್ಮ ಹಂಸಲೇಖ: 'ಓಕೆ' ಚಿತ್ರಕ್ಕೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

ಸಾಮಾಜಿಕ ಪಿಡುಗು ಆಗಿರುವ ಭ್ರೂಣಹತ್ಯೆ ಕಥೆಯನ್ನಾಧರಿಸಿರುವ ಒಕೆ ಚಲನಚಿತ್ರ ಚಿತ್ರೀಕರಣಕ್ಕೆ ಸಿಎಂ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
CM Siddaramaiah congratulated Dr Hamsalekha
ಹಂಸಲೇಖರಿಗೆ ಶುಭಹಾರೈಸಿದ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ನಿರ್ದೇಶನದ ಮೊದಲ ಸಿನಿಮಾ ಓಕೆ ಚಿತ್ರೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ಸಾಮಾಜಿಕ ಪಿಡುಗು ಆಗಿರುವ ಭ್ರೂಣಹತ್ಯೆ ಕಥೆಯನ್ನಾಧರಿಸಿರುವ ಒಕೆ ಚಲನಚಿತ್ರ ಚಿತ್ರೀಕರಣಕ್ಕೆ ಸಿಎಂ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಚಾಲನೆ ನೀಡಿದ್ದಾರೆ. ಹಂಸಲೇಖ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಸಿಹಿ ತಿನ್ನಿಸಿ ಅವರ ನೂತನ ಸಿನಿಮಾಗೆ ಸಿದ್ದರಾಮಯ್ಯ ಶುಭಕೋರಿದರು.

CM Siddaramaiah congratulated Dr Hamsalekha
ಸಿಟ್ಟನ್ನು ಸಿನಿಮಾದಲ್ಲಿ ತೋರಿಸಬೇಕು, ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು: ದರ್ಶನ್‌ಗೆ ಹಂಸಲೇಖ ಕಿವಿಮಾತು

ನಾಡು ಕಂಡ ಅಪರೂಪದ ಸಂಗೀತಗಾರ, ಸಂಗೀತ ನಿರ್ದೇಶಕ, ಸಾವಿರಾರು ಯುವಕರನ್ನು ಬೆಳೆಸಿರುವ ಹಂಸಲೇಖ ಅವರು 75ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸಂದರ್ಭ ಚಿತ್ರನಿರ್ದೇಶಕರಾಗಿ ಬಡ್ತಿ ಹೊಂದುತ್ತಿರುವುದು ಸಂತಸದ ವಿಷಯ, ಅವರ ಓಕೆ ಚಿತ್ರಕ್ಕೆ ಶುಭವಾಗಲಿ, ಚಿತ್ರ ನಿರ್ದೇಶಕರಾಗಿಯೂ ಹೆಸರು ಗಳಿಸಲಿ ಎಂದು ಶುಭಹಾರೈಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com