ಧ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನರ್ತನ್?

ಧ್ರುವ ಸರ್ಜಾ ಮತ್ತು ನಿರ್ದೇಶಕ ನರ್ತನ್ ಹೊಸ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಸಾಧ್ಯತೆಯಿದ್ದು ಮಾತುಕತೆಗಳು ನಡೆಯುತ್ತಿವೆ. ಕಥೆ ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ನಟನ ಮೂಲಗಳು ಬಹಿರಂಗಪಡಿಸಿವೆ
Narthan And Dhruva sarja
ನರ್ತನ್ ಮತ್ತು ಧ್ರುವ ಸರ್ಜಾ
Updated on

ನಟ ಧ್ರುವ ಸರ್ಜಾ ಪ್ರಸ್ತುತ ಸ್ವಿಟ್ಜರ್ಲೆಂಡ್‌ನಲ್ಲಿದ್ದಾರೆ, ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಪ್ರೇಮ್ ಅವರ ಕೆಡಿ ಚಿತ್ರದ ಅಂತಿಮ ಹಾಡಿನ ಚಿತ್ರೀಕರಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಈ ಹಿಂದೆ ಹಂಚಿಕೊಂಡಂತೆ ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ, ಆದಾಗ್ಯೂ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

ಪ್ರೇಮ್ ಅವರ ಕೆಡಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆಯಾದರೂ, ಧ್ರುವ ಸರ್ಜಾ ಅವರ ಮುಂದಿನ ಯೋಜನೆಯ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿವೆ. ಕೆಡಿ ಚಾಪ್ಟರ್ 2 ಸಿನಿಮಾ ಮಾಡುವ ಬಗ್ಗೆ ವದಂತಿಗಳು ಹರಡಿದ್ದವು. ಆದರೆ ಧ್ರುವ ಸರ್ಜಾ ಕೆಡಿ ಚಾಪ್ಟರ್ 2 ಜೊತೆಗೆ ಒಂದೆರಡು ಪ್ರಾಜೆಕ್ಟ್ ಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿಗಳ ಪ್ರಕಾರ ಧ್ರುವ ಸರ್ಜಾ ಮತ್ತು ನಿರ್ದೇಶಕ ನರ್ತನ್ ಹೊಸ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಸಾಧ್ಯತೆಯಿದ್ದು ಮಾತುಕತೆಗಳು ನಡೆಯುತ್ತಿವೆ. ಕಥೆ ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ನಟನ ಮೂಲಗಳು ಬಹಿರಂಗಪಡಿಸಿವೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಜುಲೈನಲ್ಲಿ ಔಪಚಾರಿಕ ಮಾತುಕತೆ ನಡೆಯುವ ನಿರೀಕ್ಷೆಯಿದೆ.

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ನಿರ್ದೇಶಕ ನರ್ತನ್ ಸಹಿ ಮಾಡಿದ್ದಾರೆ, ಆರಂಭದಲ್ಲಿ ರಾಮ್ ಚರಣ್ ಗೆ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು ಎಂದು ಸಿನಿಮಾ ಎಕ್ಸ್‌ಪ್ರೆಸ್‌ಗೆ ತಿಳಿದುಬಂದಿದೆ. ಈ ಪ್ರಾಜೆಕ್ಟ್ ವಿಳಂಬವಾಗುತ್ತಿದೆ ಎಂದು ತೋರುತ್ತದೆ. ನರ್ತನ್ ಮತ್ತೊಂದು ಚಿತ್ರಕ್ಕಾಗಿ ಸುದೀಪ್ ಜೊತೆ ಚರ್ಚೆಯಲ್ಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದಾಗ್ಯೂ, ಧ್ರುವ ಮತ್ತು ನರ್ತನ್ ತಮ್ಮ ಆರಂಭಿಕ ಮಾತುಕತೆಗಳನ್ನು ನಡೆಸಿದ್ದಾರೆ, ನರ್ತನ್ ಧ್ರುವ ಸರ್ಜಾಗೆ ಸೂಕ್ತವಾದ ಕಥೆಯನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Narthan And Dhruva sarja
ಅರ್ಜುನ್ ಸರ್ಜಾ ನಿರ್ದೇಶನದ 'ಸೀತಾ ಪಯಣ' ಚಿತ್ರದಲ್ಲಿ ನಟ ಧ್ರುವ ಸರ್ಜಾ; ಇಂದಿನಿಂದ ಚಿತ್ರೀಕರಣ

ಮಫ್ತಿ ಚಿತ್ರದ ಮೂಲಕ ಖ್ಯಾತಿ ಪಡೆದ ನರ್ತನ್, ಇತ್ತೀಚೆಗೆ ಶಿವರಾಜ್‌ಕುಮಾರ್ ಅವರ ಭೈರತಿ ರಣಗಲ್ ಚಿತ್ರವನ್ನು ನಿರ್ದೇಶಿಸಿದ್ದಾರೆ ಮತ್ತು ಅವರ ಮೂರನೇ ಪ್ರಾಜೆಕ್ಟ್ ಬಗ್ಗೆ ಇನ್ನೂ ಸುಳಿವು ನೀಡಿಲ್ಲ.

ಎಲ್ಲವೂ ಸರಾಗವಾಗಿ ನಡೆದರೆ, ನಟ ಮತ್ತು ನಿರ್ದೇಶಕರಿಂದ ಅಧಿಕೃತ ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಬಹುದು. ಈ ಯೋಜನೆಯು ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತದೆಯೇ, ಎರಡೂ ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಅಥವಾ ಬೇರೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com