ಸಿದ್ಧಾರ್ಥ ಐತಿಹಾಸಿಕ ವ್ಯಕ್ತಿಯಾಗಲಿ ಅಥವಾ ನೊಬೆಲ್ ಪ್ರಶಸ್ತಿ ವಿಜೇತ ಹರ್ಮನ್ ಹೆಸ್ ಕಾದಂಬರಿ ಸಿದ್ಧಾರ್ಥನ ನಾಯಕನಾಗಲಿ, ಸಂಪನ್ನ ಕುಟುಂಬದಿಂದ ಬಂದ ವ್ಯಕ್ತಿ ತನ್ನನ್ನರಿಯಲು ಎಲ್ಲವನ್ನು ತ್ಯಜಿಸಿ ಜೀವನದ ಅನ್ವೇಷಣೆಯಲ್ಲಿ ತೊಡಗುತ್ತಾನೆ. ಜೀವನದ ಅನ್ವೇಷಣೆ ಇರಲಿ, ದೊಡ್ಮನೆ ಮೊಮ್ಮಗ ವಿನಯ್ ರಾಜಕುಮಾರ್ ಸಿನೆಮಾಗೆ ಬೇಕಾದ ಕನಿಷ್ಠ ಸಿದ್ಧತೆಯನ್ನು ಮಾಡಿದಂತಿಲ್ಲ. ಬುದ್ಧನಾದ ಸಿದ್ಧಾರ್ಥನಾಗಲೀ ಅಥವಾ ಹರ್ಮನ್ ಹೆಸ್ ನ ಕಾದಂಬರಿಯಾಗಲಿ ಅಥವಾ ನಟರಾಗಿ ವರನಟ ರಾಜಕುಮಾರ್ ಆಗಲಿ ಜನಮಾನಸದ ನಡುವೆ ಕ್ಲಾಸಿಕ್ ಆಗಿ, ಅಜರಾಮರರಾಗಿ ಉಳಿದಿದ್ದು ಅವರ ಪರಿಶ್ರಮ ಮತ್ತು ಸಿದ್ದತೆಯಿಂದಲೆ! ಇವರಿಂದ ಈ ಸಿದ್ಧಾರ್ಥ ಕಲಿಯುವುದು ಬಹಳಷ್ಟಿದೆ. ಈ ಸಿದ್ಧಾರ್ಥ ಮುಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರೋದ್ಯಮದ ಬುದ್ಧನಾಗಲಿ ಎಂದು ಆಶಿಸೋಣ!
-ಗುರುಪ್ರಸಾದ್
guruprasad.n@kannadaprabha.com