ರಿಮ್ಯಾಂಡ್ ಹೋಮ್ ನಿಂದ ಸುಧಾರಿತನಾದಂತೆ ಕಾಣುವ ರಾಮ್ (ಯುವರಾಜ್), ಚಿಕ್ಕಮ್ಮನ ಅವಮಾನ ತಾಳಲಾರದೆ, ಕೊಲೆಗಾರ ಎಂಬ ಹಣೆಪಟ್ಟಿಯೊಂದಿಗೆ ನೊಂದು ಬೆಂಗಳೂರಿನ ಬಸ್ಸು ಹತ್ತುತ್ತಾನೆ. ಬಸ್ಸು ಅಪಘಾತವಾಗಿ ಸಹ ಪ್ರಯಾಣಿಕ ಮೊಹಮದ್ ರಹೀಮ್ ಮೃತಪಡುತ್ತಾನೆ. ಅವನ ಸೂಟ್ಕೇಸ್ ಹೊತ್ತು ತರುವ ರಾಮ್, ಮೃತನ ಪದವಿ ಪ್ರಮಾಣಪತ್ರಗಳನ್ನು ಬಳಸಿ ತಾನೇ ರಹೀಮ್ ಆಗಿ ಬದಲಾಗಿ, ಅವನ ಜೀವನವನ್ನೇ ನಕಲು ಮಾಡಿ, ಬದುಕಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಾನೆ. ಅಲ್ಲಿ ಕ್ರಿಶ್-ಕೃಷ್ಣ ಎಂಬ ಸಿರಿವಂತನ ಗೆಳೆತನವಾಗಿ ಅವನ ಮನೆಯಲ್ಲಿಯೇ ವಾಸಿಯುತ್ತಾನೆ. ಇವನ ಮೂಲ ಐಡೆಂಟಿಟಿ ಬಗ್ಗೆ ಕೃಷ್ಣನಿಗೆ ಸಂದೇಹ ಮೂಡಿದಾಗ ಇಬ್ಬರಿಗೂ ಕಲಹವಾಗಿ ಕೃಷ್ಣ ಆಕಸ್ಮಿಕವಾಗಿ ಮೃತಪಡುತ್ತಾನೆ. ಕೃಷ್ಣನನ್ನು ಹೂತುಹಾಕಿ, ಕೃಷ್ಣನಾಗಿ ಬದುಕಿ ಅವನ ಪ್ರೇಯಸಿ, ಗೆಳೆಯ, ಪೋಷಕರಿಗೂ ಸುಳ್ಳು ಹೇಳುತ್ತಾನೆ. ಇದರಿಂದ ತಪ್ಪಿಸಿಕೊಳ್ಳಲು ಕೃಷ್ಣನ ಗೆಳೆಯ ವಿಕ್ಕಿಯ ಕೊಲೆ ಮಾಡುತ್ತಾನೆ. ನಂತರ ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳುತ್ತಾನೆ?