ಒಂದು ಸುಂದರ, ಪ್ರೀತಿ ತುಂಬಿದ ಆದರ್ಶಪ್ರಾಯ ಕುಟುಂಬ. ಸಂಜು (ಶ್ರೀನಗರ ಕಿಟ್ಟಿ), ಅವನ ಕಿರಿಯ ಸಹೋದರ ಕಾರ್ತಿಕ್ (ಸೂರಜ್ ಗೌಡ), ತಂದೆ ಮಾಜಿ ಪೊಲೀಸ್ ಪೇದೆ ರಾಮಸ್ವಾಮಿ (ಅಶೋಕ್) ಮತ್ತು ತಾಯಿ. ಬೃಹತ್ ಬಂಗಲೆಯಲ್ಲಿ ವಾಸಿಸುತ್ತಿರುವ ಮಧ್ಯಮವರ್ಗದ ಕುಟುಂಬಕ್ಕೆ, ಕಿರಿಮಗ ಸಂಜುವಿನ ಒಂದೂವರೆ ಲಕ್ಷದ ಬೈಕ್ ಕೊಳ್ಳುವ ಬಯಕೆಯನ್ನು ಪೂರೈಸುವ ಶಕ್ತಿ ಇಲ್ಲ. ಬೈಕ್ ಇಲ್ಲ, ಆಧುನಿಕ ಮೊಬೈಲ್ ಫೋನ್ ಇಲ್ಲ ಎಂಬಿತ್ಯಾದಿ ಮೂದಲಿಕೆಗಳನ್ನು ಪ್ರೇಯಸಿಯಿಂದ ಕೇಳಿ ಸಹಿಸಲಾರದೆ ಕಾರ್ತಿಕ್ ಅಡ್ಡದಾರಿ ಹಿಡಿಯುತ್ತಾನೆ. ಈ ಅಡ್ಡದಾರಿ, ಬೆಂಗಳೂರಿನ ಅಪರಾಧಿ ವ್ಯೂಹಕ್ಕೆ ಅವನನ್ನು ಕರೆತರುತ್ತದೆ. ಅಪರಾಧಿ ಲೋಕ ಕಾರ್ತಿಕ್ ವ್ಯಕ್ತಿತ್ವವನ್ನು ಅವನ ಸುತ್ತಲಿನ ಜಗತ್ತನ್ನು, ಬದುಕನ್ನು ಬದಲಿಸಿದಾಗ ಆಗುವ ಅನಾಹುತಗಳೇನು?