ಕಡಿಮೆ ಬಜೆಟ್, ಸಣ್ಣ ಎಳೆಯ ಕಥೆ, ಹೆಚ್ಚು ಮಾತು ಅದರಲ್ಲಿ ಸಾಕಷ್ಟು ಪೋಲಿ ಎಂಬ ಫಾರ್ಮುಲಾ ಹಿಡಿದು ಕನ್ನಡ ಚಿತ್ರರಂಗಕ್ಕೆ ಆಗಮಿಸಿದ ನಿರ್ದೇಶಕ ಗುರುಪ್ರಸಾದ್ ಚೊಚ್ಚಲ ಸಿನೆಮಾ 'ಮಠ' ಮೂಲಕ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡು, ನಂತರ 'ಎದ್ದೇಳು ಮಂಜುನಾಥ', 'ಡೈರೆಕ್ಟರ್ ಸ್ಪೆಷಲ್' ಸಿನೆಮಾಗಳನ್ನು ತೋರಿಸಿ, ಮತ್ತೆ ಕಿರುತೆರೆಯಲ್ಲಿ ಕಾಣೆಯಾದವರು, ಈಗ 'ಎರಡನೇ ಸಲ'ದ ಮೂಲಕ ಹಿಂದಿರುಗಿದ್ದಾರೆ. ಶೀರ್ಷಿಕೆ ಮತ್ತು ಟ್ರೇಲರ್ ಮೂಲಕ ವಿಚಿತ್ರ ಕುತೂಹಲ (ತುಸು ನಿರಾಸೆಯನ್ನು) ಹುಟ್ಟಿಸಿದ್ದ ಸಿನೆಮಾ ಇಂದು ಬಿಡುಗಡೆಯಾಗಿದೆ.