ಡ್ಯಾನಿ (ಧನಂಜಯ್) ಎಂಬ ಜನಮೆಚ್ಚಿದ ರೇಡಿಯೋ ಜಾಕಿ, ತನ್ನ ಮಾತಿನ ಮೋಡಿಯಿಂದ ಅಸಂಖ್ಯಾತ ಜನರ ಖುಷಿಗೆ ಕಾರಣವಾಗಿದ್ದರೂ, ತನ್ನ ಮಡಿಲಿನಲ್ಲೇ ದುಃಖವನ್ನು ತುಂಬಿಸಿಕೊಂಡಿದ್ದಾನೆ. ಶ್ವಾಸಕೋಶ ತೊಂದರೆಯ ಮಾರಣಾಂತಿಕ ಖಾಯಿಲೆಯಿಂದ ನರಳುತ್ತಿರುವ ತನ್ನ ಪ್ರೀತಿಯ ಗೆಳತಿ ಚಾರ್ವಿ (ಶ್ರುತಿ ಹರಿಹರನ್) ಆರು ತಿಂಗಳಿನಿಂದ ಆಸ್ಪತೆಯಲ್ಲಿ ಕಾಲ ದೂಡುತ್ತಿದ್ದು, ಕಾಶ್ಮೀರ ನೋಡುವ ಅವಳ ಕೊನೆಯ ಆಸೆಯನ್ನು ಪೂರೈಸಲಾಗದೆ, ಆಸ್ಪತ್ರೆಯ ಖರ್ಚು ಭರಿಸಲು ನಾನಾ ಕೆಲಸಗಳನ್ನು ಮಾಡುತ್ತಿದ್ದಾನೆ. ಪೊಲೀಸ್ ಹಿರಿಯ ಅಧಿಕಾರಿಯ ಕಾರ್ ಚಾಲಕನಾಗಿರುವ ಕಾನ್ಸ್ಟೆಬಲ್ ಗೆ (ವಿಜಯ್ ರಾಘವೇಂದ್ರ) ಕೆಲಸದ ಒತ್ತಡದಲ್ಲಿ ಮಡದಿ-ಮಗಳ ಜೊತೆಗೆ ಹೆಚ್ಚು ಕಾಲ ಕಳೆಯಲು ಸಮಯವಿಲ್ಲದೆ ಕೊರಗುತ್ತಿದ್ದರೆ, ಹೊಸವರ್ಷದ ಆರಂಭದ ರಾತ್ರಿ ನಡೆಯಲಿರುವ ಮಗಳ ನೃತ್ಯಕ್ಕೆ ಹೋಗುವ ಸಾಧ್ಯತೆ ಬಗ್ಗೆ ಕಾರ್ಮೋಡ ಕವಿದಿದೆ. ಹರ್ಷ (ದಿಗಂತ್) ಕೆಲಸ ಜಂಜಾಟದಲ್ಲಿ ಬದುಕುತ್ತಿರುವ ಮತೊಬ್ಬ ಯುವಕ, ಗೆಳೆಯರಿಂದ ಹಣ ಪಡೆದು ಪಟ್ಟಾಯದಲ್ಲಿ ಮೋಜು ಮಸ್ತಿಗೆ ಹಾರಿದಾಗ, ಪಯಣಿಗಳೊಬ್ಬನನ್ನ ಭೇಟಿ ಮಾಡುತ್ತಾನೆ. ವಿಸ್ಮಯಳ ನಂಬಿಕೆಗೆ ವಿರುದ್ಧವಾಗಿ ಅವಳನ್ನು ಅವಮಾನಿಸುವುದರಿಂದ ಗೆಳತಿಯನ್ನು ಕಳೆದುಕೊಳ್ಳುವ ಆತಂಕ ಅವನದ್ದು. ಕಾರ್ ಮಾರಾಟ ಸಂಸ್ಥೆಯ ವ್ಯವಸ್ಥಾಪಕ (ಸಾಯಿಕುಮಾರ್) ಮಡದಿಯ (ಸುಧಾರಾಣಿ) ವಿಪರೀತ ಮಡಿಗೆ ಬೇಸತ್ತು, ತನ್ನ ಕಚೇರಿಯ ಸೇಲ್ಸ್ ಮ್ಯಾನೇಜರ್ ಮೇಲೆ ಜೊಲ್ಲು ಸುರಿಸುತ್ತಾನೆ. ಪತ್ನಿಗೆ ಗುಟ್ಟು ತಿಳಿದಾಗ ನಡೆಯುವುದೇನು? ಜೈಲಿನಿಂದ ಬಿಡುಗಡೆಯಾದ ಕುಖ್ಯಾತ ರೌಡಿ ಕೌರವ (ಬಿ ಸಿ ಪಾಟೀಲ್), ವಿದೇಶಿ ಯುವತಿಯ ಬೆಡಗಿಗಿ ಮನಸೋತು ತನ್ನ ಬೆದರಿಕೆ-ರೌಡಿ ವೃತ್ತಿಯನ್ನು ತೊರೆದರು, ಇಂಗ್ಲಿಷ್ ಭಾಷೆ ತಿಳಿಯದೆ ಅವಳನ್ನು ಒಲಿಸಿಕೊಳ್ಳುವುದು ಹೇಗೆ? ಹೀಗೆ ಈ ಐದು ಜನರು ತಮ್ಮ ತೊಂದರೆಗಳಿಂದ ವಿಮೋಚನೆ ಪಡೆಯುವರೇ? ಇವರ ಬಾಳಲ್ಲಿ ಹೊಸ ವರ್ಷದ ನವಗಾಳಿ ಬೀಸುವುದೇ?