ಅರಣ್ಯ ಅಧಿಕಾರಿಯೊಬ್ಬರು (ಸುಹಾಸಿನಿ) ತಮ್ಮ ಕೆಳಗಿನ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಹುಲಿ ಸಂರಕ್ಷಣೆಗೂ ನಾವು ಕುಡಿಯುವ ನೀರಿಗೂ ಇರುವ ಸಂಬಂಧದ ವೈಜ್ಞಾನಿಕ ತರ್ಕವನ್ನು ಮಂಡಿಸುತ್ತಾರೆ. ಹುಲಿ ಸಂತತಿ ನಾಶ ಆದರೆ, ಜಿಂಕೆಗಳಂತಹ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಿ, ಕಾಡುಗಳನ್ನು ತಿಂದು ಮುಗಿಸುತ್ತವೆ. ಇದು ಭೂಸವೆತಕ್ಕೆ ಕಾರಣವಾಗಿ, ಅಣೆಕಟ್ಟುಗಳಲ್ಲಿ ಹೆಚ್ಚೆಚ್ಚು ಹೂಳು ಶೇಖರವಾಗಿ ನೀರನ ಮಟ್ಟ ಕುಸಿಯುತ್ತದೆ. ಇದು ಕುಡಿಯುವ ನೀರಿಗೆ ಸಂಚಕಾರ ತರುತ್ತದೆ ಎಂಬ ಕಥೆ. ಪರಿಸರ ವಿಜ್ಞಾನ ಮತ್ತು ಸರಕ್ಷಣೆಯನ್ನು ಇಷ್ಟು ಸುಲಭವಾಗಿ ನೋಡಲು ಸಾಧ್ಯವಿಲ್ಲವಾದರೂ, ಇದೊಂದು ಜನಪ್ರಿಯ ನಂಬಿಕೆ. ಇಂತಹ ಜನಪ್ರಿಯ ನಂಬಿಕೆಗಳು, ಹಲವು ಆಚರಣೆಗಳು, ಹುಲಿ ಸಂರಕ್ಷಣೆ ಇತ್ಯಾದಿ ವಿಷಯಗಳನ್ನು ಒಳಗೊಂಡಿರುವ ಜನಪ್ರಿಯ ಸಿನೆಮಾ 'ಮಾಸ್ತಿ ಗುಡಿ' ಇಂದು ಬಿಡುಗಡೆ ಕಂಡಿದೆ.