ಚೆನೈನಲ್ಲಿ ಕಳೆದ ತಿಂಗಳು ನಡೆದ ಜಲವಿಪ್ಲವದ ನಂತರ ಮತ್ತೊಮ್ಮೆ ಗಂಭೀರ ಚಿಂತನೆ ನಡೆದಿದೆ. ಅವೈಜ್ಞಾನಿಕ ನಗರಾಭಿವೃದ್ಧಿ ಯೊಜನೆಗಳು, ಸರಿಯಾದ ಒಳಚರಂಡಿ ವ್ಯವಸ್ಥೆಯ ಕೊರತೆ, ಪ್ರತೀ ವರ್ಷ ಇಂತಹ ಅನಾಹುತಗಳು ನಡೆಯುತ್ತಿದ್ದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳದಿರುವುದು ಮತ್ತೆ ಮತ್ತೆ ಜೀವಹಾನಿಯಾಗುವ ಸಾಧ್ಯತೆಗಳನ್ನು ಹೆಚ್ಚಿಸಿವೆ. ಪ್ರವಾಹವು ಅತಿ ಹೆಚ್ಚು ಜನರ ಸಾವಿಗೆ ಕಾರಣವಾಗುವ ಪ್ರಾಕೃತಿಕ ವಿಕೋಪ. ಪ್ರವಾಹದ ತಡೆ ಮತ್ತು ಮುನ್ನೆಚ್ಚರಿಕೆಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದರೂ ಎಂದೆಂದಿಗೂ ಮಾನವ ಪ್ರಕೃತಿಯ ಎದುರಿಗೆ ಕುಬ್ಜನೇ! ಹೆಚ್ಚೆಂದರೆ ಜೀವಹಾನಿಯನ್ನು ಕಡಿಮೆಗೊಳಿಸಲು ಇಲ್ಲಿಯವರೆಗೆ ಸಾಧ್ಯವಾಗಿದೆಯೇ ಹೊರತು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ.