ಮನೆ, ವಾಹನಗಳ ನೊಂದಣಿ, ಖಾತೆಗಳೆಲ್ಲ ಡಿಜಿಟೈಸ್ ಆಗಿ ಭ್ರಷ್ಟಾಚಾರವನ್ನು ಸಾಕಷ್ಟು ಕಡಿಮೆ ಮಾಡಿವೆ. ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಂಪೂರ್ಣ ಕಾಗದ ರಹಿತ ಭಾರತದ ಮೊದಲ ಸರಕಾರಿ ಕಛೇರಿ ಎಂದು ಘೋಷಿಸಲ್ಪಟ್ಟಿದೆ.ಕರ್ನಾಟಕ ಸರಕಾರವು ತನ್ನ ಸುಮಾರು ನೂರಾ ಒಂದು ಸೇವೆಗಳನ್ನು ಮೊಬೈಲ್ ಆಪ್ ಮುಖಾಂತರ ಜನರಿಗೆ ತಲುಪಿಸುತ್ತಿದೆ. ತೆರಿಗೆ, ಪೋಲೀಸ್, ಆರೋಗ್ಯ, ಪುರಸಭೆ, ಬ್ಯಾಂಕಿಂಗ್, ನೋಂದಣಿಗಳು ಇತ್ಯಾದಿ ಅವಶ್ಯಕ ಸೌಲಭ್ಯಗಳು ಇದರಲ್ಲಿ ಇವೆ.ಇತ್ತೀಚೆಗೆ ರೈತರಿಗೆ ದಲ್ಲಾಳಿಗಳಿಂದ ಮೋಸದಂತೆ, ರೈತರು ತಮ್ಮ ಬೆಳೆಗಳ ಬೆಲೆಯನ್ನು ತಾವೇ ನಿಯಂತ್ರಿಸುವಂತೆ ಎ ಪಿ ಎಂ ಸಿ ಯನ್ನು ಡಿಜಿಟಲೈಸ್ ಮಾಡಲಾಯಿತು. ಒಂದೇ ವಾರದಲ್ಲಿ ಈ ಪ್ರಕ್ರಿಯೆಯಿಂದ ಸರಕಾರಕ್ಕೆ ಹತ್ತಾರು ಕೋಟಿ ಲಾಭವಾಯಿತು. ಇದು ನಡುವೆ ನಡೆಯುತ್ತಿದ್ದ ಸೋರಿಕೆಯನ್ನು ಯಶಸ್ವಿಯಾಗಿ ತಡೆಯಿತು. ಈಗ ಈ ಪ್ರಕ್ರಿಯೆಯನ್ನು ಇತರ ಎಲ್ಲ ಎ ಪಿ ಎಂ ಸಿ ಗಳಿಗೆ ವಿಸ್ತರಿಸುವ ಕೆಲಸ ನಡೆಯುತ್ತಿದೆ. ಹಾಗೆಯೇ ಸರಕಾರದ ವತಿಯಿಂದ ಸೈಟ್ ಅಲಾಟ್ ಮಾಡುವಾಗ ದತ್ತಾಂಶಗಳನ್ನು ಕಾಪಿಸಲು ಮತ್ತು ಮೋಸವಾಗದಂತೆ ತಡೆಗಟ್ಟಲು ಸಾಫ್ಟ್ ವೇರ್ ಅನ್ನು ರೂಪಿಸಲಾಗುತ್ತಿದೆ. ಹಾಗೆಯೇ ರಸ್ತೆಯ ಸುರಕ್ಷತೆಗಾಗಿ ಅದರ ಇತಿಹಾಸವನ್ನು ದಾಖಲಿಸಿ ಸಂರಕ್ಷಿಸಲು, ನಗರದ ಎಲ್ಲ ಮರಗಳ ಸಂರಕ್ಷಣೆಗಾಗಿ ಅವುಗಳ ದತ್ತಾಂಶವನ್ನು ಸಂಗ್ರಹಿಸಿಡಲು ಸಾಫ್ಟ್ ವೇರ್ ಗಳನ್ನು ರೂಪಿಸಲಾಗುತ್ತಿದೆ.