ಆದರೆ ಇಲ್ಲಿ ಅನುಮಾನಾಸ್ಪದ ಪ್ರಸಂಗಗಳು ಪ್ರಧಾನಿಗಳ ಅಮೇರಿಕ ಭೇಟಿಯೊಂದಿಗೆ ನಡೆದಿವೆ. ಜಗತ್ತಿಗೆ ಭಾರತದ ಐಟಿ ಹೆಬ್ಬಾಗಿಲನ್ನು ಮೊದಲು ತೆರೆದವರು ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್. ಎಮ್ . ಕೃಷ್ಣ! ಬೆಂಗಳೂರನ್ನು ಸಿಂಗಾಪುರ ಮಾಡುವ ಘೋಷಣೆಯಲ್ಲಿ ಮೊಟ್ಟಮೊದಲು ಸಿಲಿಕಾನ್ ವ್ಯಾಲಿಗೆ ಎಡತಾಕಿದವರು. ಅಂದು ಅವರು ಹಾಕಿಕೊಟ್ಟ ದಾರಿಯಲ್ಲಿ ನೋಯಿಡಾ,ಕಲ್ಕತ್ತಾ, ಚೆನೈ, ಮುಂಬೈಗಳಲ್ಲಿ ಗಳು ಐ.ಟಿ ಕಂಪನಿಗಳು ಸಾಲುಗಟ್ಟಿದವು. ತಂತ್ರಜ್ಞಾನ ಕ್ಷೇತ್ರದಲ್ಲಿ ನೂರಿಪ್ಪತೈದು ಕೋಟಿ ಜನಸಂಖ್ಯೆಯುಳ್ಳ ದೇಶದ ಸುಪ್ತಸಾಮರ್ಥ್ಯ ಏನು ಎಂಬುದು ಜಗತ್ತಿಗೆ ಗೊತ್ತಾದದ್ದೇ ಆವಾಗ! ನಂತರ ಬಂದ ಮೊಬೈಲ್ ಕ್ರಾಂತಿ ವಿಶ್ವದಲ್ಲೇ ಅತಿ ದೊಡ್ಡ ಮಾರುಕಟ್ಟೆಯ ಸಾಧ್ಯತೆಯನ್ನು ತಂತ್ರಜ್ಞಾನ ಆಧಾರಿತ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತೊಮ್ಮೆ ಸಾಬೀತುಪಡಿಸಿತು. ಚೀನಾ ತನ್ನ ತಂತ್ರಜ್ಞಾನ ಮಾರುಕಟ್ಟೆಯನ್ನು ಹೊರದೇಶದ ಕಂಪನಿಗಳಿಗೆ ಪ್ರವೇಶಾವಕಾಶದ ಮಿತಿಯನ್ನು ನಿಗ್ರಹಿಸುವುದರೊಂದಿಗೆ ಮತ್ತೆ ಈ ಕಂಪನಿಗಳಿಗೆ ಭಾರತವೇ ದೊಡ್ಡ ಮಾರುಕಟ್ಟೆಯಾಗಿ ಮಾರ್ಪಟ್ಟಿತು.