"ಏ ಹೆಣ್ಣೆ! ಸುಡುವ ಸುಂಕ ಕೊಡದೇ ಸುಡ ಹೊರಟೆಯಲ್ಲ, ನಿನಗೆಷ್ಟು ಸೊಕ್ಕು!," ನುಗ್ಗಿ ಬಂದು ಚಿತೆಯ ಮೇಲಿದ್ದ ಶವದ ಕಾಲೆಳೆದು ಹೊರ ಬಿಸುಟ ಹರಿಶ್ಚಂದ್ರ. ಓಡಿ ಬಂದ ಆ ಒಂಟಿ ಹೆಣ್ಣು ಕಾಲು ಹಿಡಿದು ಬೇಡಿದಳು, "ಅಪ್ಪ ದಯಾಳು! ಸಿಟ್ಟಾಗಬೇಡ! ನೀನು ಯಾರೋ? ನೀನು ಯಾರೇ ಆಗಿರು, ನಿನ್ನ ಕಾಲು ಹಿಡಿದು ಬೇಡುವೆನು. ನೀನು ಯಾವ ಜಾತಿಯವನೇ ಆಗಿರು, ನಿನ್ನಲ್ಲಿ ಬೇಡುವೆ. ಈ ಮಗ, ನನ್ನ ಮಗ, ನನ್ನ ಮಗನಲ್ಲಪ್ಪ, ನಿನ್ನ ಮಗ ಎಂದುಕೊಳ್ಳಯ್ಯ! ಬೇಡ ಬೇಡ, ಕಠಿಣನಾಗಬೇಡ. ಹಾಗೆ ದರದರ ಎಳೆದರೆ ನೋವಾಗುತ್ತೆ ಅವನಿಗೆ. ದಯವಿಟ್ಟು ಸುಡೋಕೆ ಅನುಮತಿ ಕೊಡಪ್ಪ.