(ಒಂದೆರಡು ವಾಸ್ತವಾಂಶಗಳು:- ಈ ಕಥೆಯಲ್ಲಿ ಬರುವ ಋಷಿ ಕುಮಾರನ ಹೆಸರು ಶ್ರವಣ ಕುಮಾರ ಎಂದು ಹಬ್ಬಿದೆ, ಜನಪದರಲ್ಲಿ. ಎಷ್ಟು? , ಯಾರಾದರೂ ತಂದೆ ತಾಯಿಗಳನ್ನು ಶುಶ್ರೂಷೆ ಮಾಡುತ್ತಿದ್ದರೆ ಶ್ರವಣ ಕುಮಾರನಂತೆ ಎಂಬ ಉದ್ಗಾರ ಬರುವಷ್ಟು. ಆದರೆ ವಾಲ್ಮೀಕಿ ರಾಮಾಯಣದಲ್ಲಿ ಈ ಹೆಸರು ಇಲ್ಲ. ಯಾವ ಹೆಸರೂ ಇಲ್ಲ! ಆನಂದ ರಾಮಾಯಣದಲ್ಲಿ ಮಾತ್ರ ಈ ಹೆಸರಿದೆ. ತಾಂಡವನೆಂಬ ಹೆಸರನ್ನು ತುಳಸಿದಾಸರು, ಹಾಗೂ ನರಹರಿಗಳು ಪ್ರಯೋಗಿಸಿದ್ದಾರೆ. ಈ ಕಥೆ ಈ ಮೂವರಲ್ಲಿಯೂ ಅತ್ಯುತ್ಪ್ರೇಕ್ಷವಾಗಿದೆ, ಅತಿರಂಜಿತವಾಗಿದೆ.