ನಾಲ್ಕು ಮಕ್ಕಳನ್ನೂ ಕೂಡಿಸಿಕೊಂಡು ಒಂದು ದಿನ ಕೈಕಸಿ ಹೇಳಿದಳು, " ನಿಮ್ಮ ಅಣ್ಣನ್ನ ನೋಡಿ. ಅವನು ಧನಾಧ್ಯಕ್ಷ, ಲಂಕಾಧಿಪತಿ, ಮಹಾ ಶ್ರೀಮಂತ, ಯಕ್ಷರಿಗೆಲ್ಲ ಒಡೆಯ. ಅವನಿಗೂ, ನಿಮಗೂ ತಂದೆ ಒಬ್ಬನೇ. ಆದರೆ ನೀವು ಯಾಕೆ ಹೀಗಿದ್ದೀರಿ ? ಅವನಂತೆ ನೀವು ದೃಢರಾಗಬೇಕಾಗಿದ್ದರೆ, ಅವನಂತೆ ಪ್ರಸಿದ್ಧರಾಗಬೇಕಾಗಿದ್ದರೆ ತಪಸ್ಸು ಮಾಡಿ, ಬ್ರಹ್ಮನನ್ನು ಮೆಚ್ಚಿಸಿ, ವರಗಳನ್ನು ಪಡೆಯಿರಿ. ಮಹೋಗ್ರ ದಶಕಂಠ, ನಿದ್ದೆಯ ಗುಂಗಿನಲ್ಲಿ ಸದಾ ಮೊಂಕಾಗಿರುವ ಕುಂಭಕರ್ಣ, ವೀರ ಸಾತ್ವಿಕ ಧಾರ್ಮಿಕನಾದ ವಿಭೀಷಣ, ಮೂವರೂ ತೀಕ್ಷ್ಣ ತಪಸ್ಸಿಗೆ ಕುಳಿತರು. ಶೂರ್ಪಣಖೆ ಸಹೋದರರ ಶುಶ್ರೂಶೆ ಮಾಡುತ್ತಿದ್ದಳು. ಕಾಲ ಕಳೆಯಿತು, ತಪದ ಮಜಲುಗಳು ಮುಗಿಯುತ್ತ ಬಂದರೂ ವಿರಿಂಚಿ ಕಾಣಲೊಲ್ಲ, ಬರಲೊಲ್ಲ, ಸೂಚನೆ ಕೊಡಲೊಲ್ಲ!! (ಮುಗಿದಿಲ್ಲ)