ಬಟ್ಟಲಲ್ಲಿ ಇನ್ನೂ ಎಂಟನೆಯ ಒಂದು ಭಾಗದಷ್ಟು ಪಾಯಸ. ದಶರಥ ಯೋಚಿಸುತ್ತಿದ್ದಾನೆ; ’ಮೊದಲ ಮಡದಿ ಕೌಸಲ್ಯೆಗೆ ಪಟ್ಟರಾಣಿಯೆಂಬ ಮಹತ್ವ. ಕೈಕೆ ಕಿರಿಯ ರಾಣಿಯೆಂದು ಅಚ್ಚು ಮೆಚ್ಚು. ಕೌಸಲ್ಯೆ ಸಿಂಹಾಸನದ ಅರ್ಧವನ್ನು ಆಕ್ರಮಿಸಿದರೆ , ಕೈಕೆ ಪಲ್ಲಂಗ ಪೂರ್ಣ ವಿಜೃಂಭಿಸಿದ್ದಾಳೆ. ಪಾಪ, ಸುಮಿತ್ರೆಗೆ ಯಾವುದೂ ಇಲ್ಲ. ಅವಳಿಗೆ ಈಗ ಪುತ್ರ ಪ್ರಾಪ್ತಿಯ ಸಂದರ್ಭದಲ್ಲಿಯಾದರೂ ನ್ಯಾಯ ದೊರೆಯಲಿ! ’ ಪತ್ನಿಯರು ತಮಗಿತ್ತ ಪಾಯಸವನ್ನು ಸಂತುಷ್ಟರಾಗಿ ಕುಡಿದಿದ್ದಾರೆ. ಏಳಲಿದ್ದ ಅವರನ್ನು ತಡೆದು, ಸುಮಿತ್ರೆಯ ಕಡೆ ನೋಡಿ "ಯೋಚಿಸಿದ ದಶರಥ, ಅಮೃತಸಮವಾದ ಪಾಯಸವನ್ನು, ಅಂದರೆ ಉಳಿದ ಎಂಟನೆಯ ಒಂದು ಭಾಗದ ಪಾಯಸವನ್ನು ಸುಮಿತ್ರೆಗೇ ಕೊಟ್ಟುಬಿಟ್ಟ."