ನಿಮಿಷದಲ್ಲಿ ಶುದ್ಧಿ ಮಾಡಿ, ಬಟ್ಟೆಯಲ್ಲಿ ಸುತ್ತಿದ ಎರಡು ಮಕ್ಕಳನ್ನೆತ್ತಿ ತಂದಿದ್ದಾರೆ ಇಬ್ಬರು ದಾದಿಯರು. ದಶರಥನ ಎರಡು ಕೈಗಳನ್ನೂ ತುಂಬಿದರು. ಕೆಂಪು ಕಣ್ಣುಗಳು, ಬಿಗಿದ ಹುಬ್ಬು, ಅತಿ ಕಠಿಣ ಮುಖಚರ್ಯೆ, ಚೂಪಾದ ಮೂಗು, ಕಚ್ಚಿದ ತುಟಿ, ಏಕೋ ಗೊತ್ತಿಲ್ಲ; ಬಿಗಿಯಾದ ವಾತಾವರಣ! ರಾಮ ಭರತರ ಬಣ್ಣಗಳ ಸಂಯುಕ್ತ ವರ್ಣ... ಸರಿಸುಮಾರು ನಾಲ್ಕು ಮಕ್ಕಳದೂ ಒಂದೇ ಮುಖ, ಒಂದೇ ಆಕರ್ಷಣೆ. ವಸಿಷ್ಠರು ಹೆಸರಿಟ್ಟೇಬಿಟ್ಟರು, " ಬಲಗೈ ತುಂಬಿದ ಮಗು ಲಕ್ಷ್ಮಣ, ವಾಮಕರದಲ್ಲಿರುವಾತ ಶತ್ರುಘ್ನ"