ಅದಕ್ಕೆ ಅನನ್ಯ 'ಅಪ್ಪನನ್ನ ಕೇಳುವ ಅವಶ್ಯಕತೆ ಇಲ್ಲ ನಿಮ್ಮ ಕೈಲಿರುವ ಹಣವನ್ನ ಕನ್ನಡಿ ಮುಂದೆ ಹಿಡಿಯಿರಿ' ಎಂದು ನಕ್ಕು ಆಡಲು ಓಡಿದಳು. ಈ ಘಟನೆಯನ್ನ ಇಲ್ಲಿ ಪ್ರಸ್ತಾಪಿಸುವ ಅವಶ್ಯಕತೆ ಏನಿತ್ತು? ಎನ್ನುವ ಪ್ರಶ್ನೆ ನಿಮ್ಮಲ್ಲಿ ಬಂದಿದ್ದರೆ ಅದಕ್ಕೆ ಕಾರಣವಿದೆ. ನಮ್ಮ ಸಮಾಜವನ್ನು ಸ್ವಲ್ಪ ಗಮನಿಸಿ ನೋಡಿ, ನಮ್ಮ ಸುದ್ದಿ ಪತ್ರಿಕೆಗಳ, ವಾರ್ತಾವಾಹಿನಿಗಳನ್ನು ಸ್ವಲ್ಪ ನೋಡಿ ಅವುಗಳಲ್ಲಿ ಜನರ ಹಣವನ್ನ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಮೋಸ ಮಾಡಿದ ಸುದ್ದಿಗಳು ಇದ್ದೇ ಇರುತ್ತವೆ. ಅನನ್ಯಳಂತ ಮಗು ಕನ್ನಡಿಯ ಮುಂದಿಡಿ ಅದು ಡಬಲ್ ಆಗುತ್ತೆ ಎನ್ನವುದು ಜೋಕ್ ಎಂದು ನಗುವ ಜನ ಅದೇ ಸೋಗಲಾಡಿ ಇನ್ವೆಸ್ಟ್ಮೆಂಟ್ ಅಡ್ವೈಸರ್ಗಳು ಅಥವಾ ಕಂಪನಿಗಳ ಬಲೆಗೆ ಮಾತ್ರ ಅದೆಷ್ಟು ಸುಲಭವಾಗಿ ಬೀಳುತ್ತಾರೆ.. ಹೀಗೇಕೆ? ಇದಕ್ಕೆ ಮೂಲ ಕಾರಣ ಜನರಲ್ಲಿರುವ ಅರ್ಥ ನಿರಕ್ಷರತೆ. ಅಂಕಿ ಸಂಖ್ಯೆಗಳು ನನ್ನದಲ್ಲ ಅದು ನಗಿಷ್ಟವಿಲ್ಲ ಎನ್ನವುದು ನಾನು ಸಾಮನ್ಯವಾಗಿ ನನ್ನ ಬಳಿ ಸಲಹೆ ಕೇಳಿ ಬರುವ ಜನರ ಬಾಯಲ್ಲಿ ಕೇಳುವ ಮಾತು. ನನ್ನದಲ್ಲ ನನಗಿಷ್ಟವಿಲ್ಲ ಎನ್ನುವುದು ಹೆಗ್ಗಳಿಕೆಯಲ್ಲ ಕಲಿಯಬೇಕು ನಿಮ್ಮ ಮೆದುಳನ್ನ ಸ್ವಲ್ಪ ದುಡಿಮೆಗೆ ಹಾಕಿ ಆಗ ಅದು ಎಲ್ಲಾ ತರದಲ್ಲೂ ಲಾಭದಾಯಕ ಎನ್ನವುದು ನಾನು ಹೇಳುವ ಮಾತು.ಇರಲಿ.