ಖುಷಿಯಾಗಿರಲು ನಿಗದಿಪಡಿಸಿರುವ ಹಣದ ಮೊತ್ತದ ದುಪಟ್ಟು ಅಥವಾ ಅದಕ್ಕೂ ಹೆಚ್ಚು ಸಂಪಾದಿಸುವ ಜನರಲ್ಲಿ ಖಿನ್ನತೆ, ಅಶಿಸ್ತು, ಬದುಕಿನಲ್ಲಿ ಆಸಕ್ತಿ ಇಲ್ಲದೆ ಹೋಗುವುದು ಏನು ಮಾಡಬೇಕು ಎನ್ನುವ ನಿಖರತೆಯ ಕೊರತೆ. ಸುಖಾಸುಮ್ಮನೆ ಬೇಜಾರು ಇಂತಹ ಮಾನಸಿಕ ತುಮುಲಗಳು ಹೆಚ್ಚಾಗಿರುವುದನ್ನ ಅಧ್ಯಯನಗಳು ಬಹಿರಂಗಪಡಿಸಿವೆ . ಕೊನೆಗೆ ಇಂತವರು ತಮ್ಮ ಬದುಕನ್ನ ಡ್ರಗ್ಸ್ ಸೇವೆನೆಯಂತಹ ದಾರುಣ ಅಂತ್ಯಕ್ಕೆ ಕರೆದುಕೊಂಡ ಹೋದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಮಜಾ ನೋಡಿ ನಿಗದಿತ ಮೊತ್ತಕ್ಕಿಂತ ಕಡಿಮೆ ಹಣ ದುಡಿಯುವ ಜನರಲ್ಲಿ ಬದುಕಿನ ಬಗ್ಗೆ ಇನ್ನಷ್ಟು ಹೆಚ್ಚು ಪ್ರೀತಿ ಕಾಣುತ್ತೇವೆ ಹೇಗಾದರೂ ಮಾಡಿ ಬದುಕನ್ನ ಇನ್ನಷ್ಟು ಹಸನಾಗಿಸಲಿ ಕೊಳ್ಳಬೇಕ್ಕೆನ್ನುವ., ನಮ್ಮಂತೆ ನಮ್ಮ ಮುಂದಿನ ಪೀಳಿಗೆ ನೋವು ತಿನ್ನಬಾರದು ಎನ್ನುವ ಹಪಹಪಿಕೆ ಕೆಲಸ ಮಾಡುತ್ತದೆ. ಇದು ಭಾರತದ ವೈಶಿಷ್ಟ್ಯ. ಮುಂದುವರಿದ ದೇಶಗಳಲ್ಲಿ ಹಾಗಲ್ಲ ಕಡಿಮೆಯಿದ್ದವರೂ ಅತಿ ಹೆಚ್ಚಿದ್ದವರೂ ಇಬ್ಬರೂ ನೋವಿನಲ್ಲಿ ಸಮಭಾಗಿಗಳು.