(ಕೇಳಿದ್ದು ಎರಡೇ ವರ. ಆದರೆ ಎರಡನೆಯದಕ್ಕೆ ಅಂಟಿಸಿದ ನಿಯಮವೂ ಮೂರನೆಯದೆಂದು ಬಾಯಿ೧ಟ್ಟು ಹೇಳದಿದ್ದರೂ ಗುಪ್ತ ವರವೇ ಆಗಿ ಶ್ರೀರಾಮರಿಗೆ ಕಡುಕಷ್ಟ ತಂದಿತು. ಮೇಲ್ನೋಟಕ್ಕೆ ಎರಡೇ ಆದರೂ ಮೂರು ವರಗಳಾಗಿಬಿಟ್ಟಿತು; ಪಾದಗಳಿಗೆ ಬಳ್ಳಿ ಪಾಶ ಸುತ್ತಿ! ಈ ಗುಪ್ತವರ ಕೇಳದಿದ್ದಿದ್ದರೆ ಶ್ರೀರಾಮರು ಸಹಜ ಉಡುಗೆ ತೊಡಬಹುದಿತ್ತು! ಜಟೆ ಕಟ್ಟದೇ ಸಾಮಾನ್ಯ ನಾಗರಿಕರಿದ್ದಂತೆ ಇರಬಹುದಿತ್ತು! ಎಲ್ಲಕ್ಕಿನ್ನ ಮುಖ್ಯವಾಗಿ ತಪಸ್ವಿಯಾಗಬೇಕಿರಲಿಲ್ಲ!!! ಈ ನಿಯಮಗಳೇ ಇರದಿದ್ದರೆ, ಶ್ರೀರಾಮರು ಅಸ್ತ್ರಶಸ್ತ್ರಾಭ್ಯಾಸ ಶಾಲೆಯನ್ನೋ, ವೇದಾಂತೋಪನ್ಯಾಸ ಮಂದಿರವನ್ನೋ ತೆಗೆದು, ಅರ್ಹರಿಗೆ ಪಾಠ ಹೇಳಿ ಸಂಪಾದಿಸಬಹುದಿತ್ತು. ಮಡದಿಯೊಡನೆ ದಾಂಪತ್ಯ ಸುಖ ಅನುಭವಿಸುತ್ತ, ಗೃಹಸ್ಥಾಶ್ರಮಿಯಾಗಿರಬಹುದಿತ್ತು. ತಾಪಸಿಯಾದ್ದರಿಂದ ಯಾವ ಊರಿನೊಳಗೂ ಹೋಗಲು ಆಗದೇ, ಕೇವಲ ಅಡವಿಯಲ್ಲೇ ಕಡುಕಷ್ಟಪಟ್ಟು ಹದಿನಾಲ್ಕು ವರ್ಷಗಳ ಕಾಲ ಪರದಾಡಬೇಕಾಯ್ತು! ಯುವ ಸುಂದರ ಪತ್ನಿ ಇದ್ದೂ, ಆರೋಗ್ಯ ಪೂರ್ಣ ದೃಢ ದೇಹವಿದ್ದೂ, ಶೃಂಗಾರ ತ್ಯಕ್ತ ಅಕಾಲಿಕ ವೈರಾಗ್ಯದಲ್ಲಿ ಮನಸ್ಸು-ದೇಹಗಳನ್ನು ದಂಡಿಸಬೇಕಾಯಿತು. ಇದು ಕೈಕೆಯ ದುಷ್ಟ ಬುದ್ಧಿಗೆ ಸೇರಿದ ನಾಗರ ನಂಜಾಯಿತು- ಲೇಖಕರು)