ಹಣ ಮುದ್ರಣ, ಬ್ಯಾಂಕುಗಳ ಮೇಲಿನ ಹಿಡಿತ, ವಿದೇಶಿ ವಿನಿಮಯ ನಿರ್ಧಾರಗಳು ಹೀಗೆ ಹಲವು ಹತ್ತು ಕಾರ್ಯವನ್ನ ಆರ್ ಬಿಐ ತನ್ನ ಬಳಿಯಿರುವ ನುರಿತ ಕಸುಬುದಾರರಿಂದ ನೆಡೆಸುತ್ತದೆ. ಹೀಗೆ ನೆಡೆಸುವ ಕೆಲಸದಿಂದ ಅದು ಖರ್ಚು ಕಳೆದು ಉಳಿವ ಬಹಳಷ್ಟು ಹಣವನ್ನ ತನ್ನ ಮಾಲೀಕ ಕೇಂದ್ರ ಸರಕಾರಕ್ಕೆ ವರ್ಗಾವಣೆ ಮಾಡುತ್ತದೆ. ಅಲ್ಲದೆ ಒಂದಷ್ಟು ಹಣವನ್ನ ಮೊದಲೇ ಊಹಿಸಲಾಗದ ಅನಿಶ್ಚಿತತೆಯನ್ನ ಎದುರಿಸಲು ಮೀಸಲು ಹಣ (ರಿಸರ್ವ್ ಮನಿ/ಫಂಡ್) ಎಂದು ತೆಗೆದಿರಿಸುತ್ತದೆ. ಸರಿಯಾಗಿದೆ ಅಲ್ಲವೇ...? ಮತ್ತೇಕೆ ಇಂತಹ ವಾಕ್ಸಮರ? ಕೇಂದ್ರ ಮತ್ತು ಸೆಂಟ್ರಲ್ ಬ್ಯಾಂಕ್ ನಡುವಿನ ಇಂತಹ ಗುದ್ದಾಟಕ್ಕೆ ಚರಿತ್ರೆಯಿದೆ.