ನಮ್ಮ ಜನರಲ್ಲಿ ಹಣಕಾಸಿಗೆ ಸಂಬಂಧಪಟ್ಟ ಹಲವು ಮಿಥ್ಯೆಗಳಿವೆ. ಜೀವನ ಪೂರ್ತಿ ಅವು ತಪ್ಪುಎಂದು ತಿಳಿಯದೆ ಆ ಸುಳ್ಳಿನಲ್ಲೇ ಬದುಕಿ, ಜೀವನ ಸವೆಸಿ ಹೊರಟು ಹೋಗುತ್ತಾರೆ. ಅಪ್ಪನ ಆಸ್ತಿ ಇದ್ದರೆ ಸಿರಿವಂತರಾಗಬಹುದು, ಕಷ್ಟಪಟ್ಟು ದುಡಿದು ಹಣಗಳಿಸುವುದು ಬಹಳ ಕಷ್ಟ ಎನ್ನವುದು ಅಂತಹ ಮಿಥ್ಯೆಗಳಲ್ಲಿ ಒಂದು.
ಹಣಗಳಿಸಲು ಹೆಣಗಬೇಕಾಗಿಲ್ಲ ತಿಣುಕಬೇಕಾಗಿಲ್ಲ. ಇಲ್ಲಿ ಪ್ರಮುಖವಾಗಿ ಬೇಕಾಗಿರುವುದು ಹಣದ ಬಗ್ಗೆ ಅದಮ್ಯ ಪ್ರೀತಿ, ಗೌರವ. ಜೊತೆಗೆ ಒಂದಷ್ಟು ಕಷ್ಟಪಟ್ಟು ದುಡಿಯುವ ಮನಸ್ಸು ಮತ್ತು ಒಳ್ಳೆಯ ಸಂಪರ್ಕಗಳ ಜೊತೆಗೆ ನಿಲ್ಲದ ಕೌಶಲ್ಯ ವೃದ್ಧಿ. ಅಮೇರಿಕಾ ಇರಬಹುದು ಅಥವಾ ಯೂರೋಪ್ ಅಥವಾ ಭಾರತ...., ದೇಶ ಯಾವುದೇ ಇರಲಿ ಸ್ವಂತ ಬಲದಿಂದ ಮಿಲಿಯನೇರ್ ಅಥವಾ ಬಿಲಿಯನೇರ್ ಆದವರನ್ನ ಸೂಕ್ಷ್ಮವಾಗಿ ಗಮನಿಸಿ ನೋಡಿ. ಅವರಲ್ಲಿ ದಣಿವು ಕಾಣುವುದಿಲ್ಲ ತಮ್ಮ ಕೆಲಸದಲ್ಲಿ ಅವರಿಗೆ ಅಪರಿಮಿತ ಆಸಕ್ತಿ. ಮೂರು ತಲೆಮಾರು ಕುಳಿತು ತಿನ್ನುವಷ್ಟು ಆಸ್ತಿಯ ಒಡೆಯರಾಗಿದ್ದೂ ಅವರು ದುಡಿಯುತ್ತಾರೆ. ದಣಿವಿಲ್ಲದ ದುಡಿಮೆ ಅವರ ಸಿರಿವಂತಿಕೆಯ ಗುಟ್ಟು. ಶನಿವಾರ ಅವರು ಜನ ಸಾಮಾನ್ಯರಂತೆ ರಜಾ ಬಯಸುವುದಿಲ್ಲ. ಅವಶ್ಯಕತೆ ಬಿದ್ದಾಗ ಬೇಕಾದ ರಜಾ ಪಡೆಯುತ್ತಾರಷ್ಟೆ. ಅಪ್ಪನಿಂದ ಸಂಪತ್ತು ಪಡೆದ ಜನರ ಬಗ್ಗೆ ಇದೆ ಮಾತು ಹೇಳಲು ಬರುವುದಿಲ್ಲ. ಸ್ವಂತ ಬಲದಿಂದ ಮೇಲೆ ಬಂದ ಜನ ಖರ್ಚು ಮಾಡುವುದಕ್ಕೆ ಮುನ್ನ ಹತ್ತು ಬಾರಿ ಯೋಚಿಸುತ್ತಾರೆ. ಮಾಡುವ ಖರ್ಚು ಅವಶ್ಯಕವೇ? ಎನ್ನುವ ಪ್ರಶ್ನೆ ಮಾಡಿಕೊಳ್ಳದೆ ಅಳೆದು ತೂಗಿ ನೋಡದೆ ಒಂದು ರುಪಾಯಿ ಕೂಡ ಅವರು ಖರ್ಚು ಮಾಡುವುದಿಲ್ಲ.
ನೋಡಿ ನಮ್ಮಲ್ಲಿ ಮುಕ್ಕಾಲು ಪಾಲು ಜನರಿಗೆ ಅಪ್ಪನಿಂದ ಹೆಚ್ಚಿನ ಸಂಪತ್ತು ಸಿಕ್ಕುವುದಿಲ್ಲ ಹಾಗೆಂದ ಮಾತ್ರಕ್ಕೆ ನಾವು ಸಿರಿವಂತರಾಗಲು ಸಾಧ್ಯವೇ ಇಲ್ಲವೇ? ಇದಕ್ಕೆ ಉತ್ತರ-’ಸಾಧ್ಯವಿದೆ’. ನಮ್ಮಲ್ಲಿ ಯಾರು ಬೇಕಾದರೂ ಸಿರಿವಂತರಾಗಬಹುದು. ಮೊದಲೇ ಹೇಳಿದಂತೆ ಅದಮ್ಯ ಬಯಕೆ ಇರಬೇಕು ಜೊತೆಗೆ ಕೆಲವೊಂದು ಮೂಲಭೂತ ಸಿದ್ಧಾಂತಗಳನ್ನು ಪಾಲಿಸಬೇಕು. ಇಂತಹ ಆರ್ಥಿಕ ಸಿದ್ಧಾಂತಗಳ ಬಗ್ಗೆ ಇಂದು ಒಂದಷ್ಟು ಗಮನ ಹರಿಸೋಣ.
ಕೊನೆ ಮಾತು: ಹಣವಂತ ಅಥವಾ ಸಿರಿವಂತರು ಯಾರು ಬೇಕಾದರೂ ಆಗಬಹುದು. ಇದಕ್ಕೆ ಮೊದಲೇ ಹೇಳಿದಂತೆ ಹೆಣಗಬೇಕಾಗಿಲ್ಲ, ತಿಣುಕಬೇಕಾಗಿಲ್ಲ ಸರಳ ರೇಖೆಯಲ್ಲಿ ಗಳಿಕೆ-ಉಳಿಕೆ-ಹೂಡಿಕೆ ಎನ್ನುವ ಸಿದ್ಧಾಂತವನ್ನ ಚಾಚೂ ತಪ್ಪದೆ ಪಾಲಿಸುತ್ತಾ ಬಂದರೆ ಸಿರಿವಂತರಾಗುವುದು ಕಷ್ಟವಲ್ಲ. ಆದರೆ ಇಲ್ಲಿ ಇನ್ನೊಂದು ಪ್ರಮುಖ ಅಂಶವನ್ನ ನೆನಪಿನಲ್ಲಿಡಬೇಕು. ಅದು ವೇಳೆ ! ರಾತ್ರಿ ಕಳೆದು ಬೆಳಗಾಗುವುದರಲ್ಲಿ ಇದೆಲ್ಲ ಸಾಧ್ಯವಿಲ್ಲದ ಮಾತು. ಇಲ್ಲೇನಿದ್ದರೂ ನಿಧಾನವೇ ಪ್ರಧಾನ. ಅದನ್ನ ಅರಿತು ತಾಳ್ಮೆಯಿಂದ ಒಳ್ಳೆಯ ಹೂಡಿಕೆಯನ್ನ ಹುಡುಕಿ ಮಾಡಬೇಕಾಗುತ್ತದೆ. ಸಮಾಜದಲ್ಲಿ ತ್ವರಿತಗತಿಯಲ್ಲಿ ಹಣ ಮಾಡುವ ಬಗ್ಗೆ ಹಲವಾರು ಆಮಿಷಗಳು ಎದುರಾಗುತ್ತವೆ. ಅಂತಹವುಗಳ ಬಗ್ಗೆ ಕೂಡ ಜಾಗೃತರಾಗಿರುವುದು ಬಹುಮುಖ್ಯ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement