social_icon

ಹೊಸ ವರ್ಷಕ್ಕೆ ಆರೋಗ್ಯ ಸೂತ್ರಗಳು (ಕುಶಲವೇ ಕ್ಷೇಮವೇ)

ಜೀವನವನ್ನು ಸಂತೋಷದಾಯಕ ಮತ್ತು ಆರೋಗ್ಯದಾಯಕವನ್ನಾಗಿ ಮಾಡಿಕೊಳ್ಳಲು ಈ ಸೂತ್ರಗಳನ್ನು ಗಮನಿಸಿ.

Published: 31st December 2022 10:41 AM  |   Last Updated: 04th January 2023 07:12 PM   |  A+A-


2023 (File pic )

ಹೊಸ ವರ್ಷ 2023 (ಸಾಂಕೇತಿಕ ಚಿತ್ರ)

Posted By : srinivasrao
Source :

ಜೀವನವನ್ನು ಸಂತೋಷದಾಯಕ ಮತ್ತು ಆರೋಗ್ಯದಾಯಕವನ್ನಾಗಿ ಮಾಡಿಕೊಳ್ಳಲು ಈ ಸೂತ್ರಗಳನ್ನು ಗಮನಿಸಿ:

•    ಬದುಕನ್ನು ಒಂದು ಕಲೆಯಾಗಿ ರೂಪಿಸಿಕೊಂಡಲ್ಲಿ ಆನಂದದ ‘ಅರಮನೆ’ ನಮ್ಮದಾಗುವುದು.
•    ಆಹಾರ, ವ್ಯಾಯಾಮ, ಮಾನಸಿಕ ಒತ್ತಡ ನಿಭಾಯಿಸುವಿಕೆ ಇವು ಆರೋಗ್ಯಕರ ಜೀವನದ ಮೂರು ಸ್ತಂಭಗಳು.
•    ನಾವು ಮಾಡುವ ಪ್ರತಿಯೆಂದು ಕೆಲಸವನ್ನು ಇಷ್ಟಪಟ್ಟು ಮಾಡೋಣ, ಕಷ್ಟಪಟ್ಟು ಮಾಡುವುದು ಬೇಡ.
•    ಹಿತವಾದ, ಮಿತವಾದ ಆಯಾ ಋತುಮಾನಕ್ಕನುಗುಣವಾದ ಆಹಾರಕ್ರಮವಿರಲಿ.
•    ಆಹಾರದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳು ಯಥೇಚ್ಛವಾಗಿರಲಿ.
•    ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು ಈ ಆರು ರುಚಿಗಳನ್ನು ಒಳಗೊಂಡ ಆಹಾರ ಸೇವಿಸಿದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿರುತ್ತದೆ.
•    ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳಿಂದ ದೂರವಿರಿ.
•    ಬಿಳಿ ವಿಷ ಮತ್ತು ನಿಧಾನ ವಿಷಗಳಾದ ಉಪ್ಪು, ಸಕ್ಕರೆ ಮತ್ತು ಮೈದಾ ಬಳಸುವುದರಲ್ಲಿ ಜಿಪುಣರಾಗೋಣ (ಮಿತಿ ಹಾಕಿಕೊಳ್ಳೋಣ).

ಇದನ್ನೂ ಓದಿ: ​ಪ್ರಕೃತಿ ಚಿಕಿತ್ಸೆ ಎಂದರೇನು?; ನ್ಯಾಚುರೋಪಥಿಯ ಮಹತ್ವ ಮತ್ತು ಉಪಯೋಗಗಳ ಬಗ್ಗೆ ತಿಳಿಯಿರಿ

•    ಸಕ್ಕರೆಗೆ ಬದಲು ಬೆಲ್ಲ ಬಳಸಿ.
•    ನಾರಿನಾಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ.
•    ರಾತ್ರಿ ಹೊತ್ತು ಬೇಗ ಊಟ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
•    ಕಾಫಿ, ಟೀ, ತಂಪು ಪಾನೀಯಗಳ ಸೇವನೆಯಲ್ಲಿ ಮಿತಿ ರೂಢಿಸಿಕೊಳ್ಳಿ.
•    ದಿನಕ್ಕೆ ಮೂರು ಲೀಟರ್ ನೀರನ್ನು ಅವಶ್ಯಕವಾಗಿ ಕುಡಿಯಿರಿ.
•    ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿನೀರು ಕುಡಿದಲ್ಲಿ ಮಲಬದ್ಧತೆಯ ಸಮಸ್ಯೆ ಬಾಧಿಸಲಾರದು.
•    ಊಟ ಮಾಡುವಾಗ ನಿಧಾನವಾಗಿ ಅಗಿದು ತಿನ್ನುವ ಕ್ರಮ ರೂಢಿಸಿಕೊಳ್ಳಿ.
•    ದಿನಕ್ಕೆ ಒಂದು ಗಂಟೆ ನಡಿಗೆ ಅಥವಾ 1/2 ಗಂಟೆ ವ್ಯಾಯಾಮ ಅಥವಾ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಿ.
•    ಕನಿಷ್ಟ ವಾರಕ್ಕೆ ಐದು ದಿನವಾದರೂ ನಡಿಗೆ, ವ್ಯಾಯಾಮ ಅಥವಾ ಯೋಗಾಭ್ಯಾಸ ಇರಲಿ.
•    6 ರಿಂದ 8 ಗಂಟೆ ನಿದ್ರೆ ಅವಶ್ಯಕ.
•    ನಿದ್ರೆಮಾತ್ರೆಗೆ ಮೊರೆಹೋಗದೇ ರಾತ್ರಿ ಕೊಳಲಿನ ಸಂಗೀತ ಆಲಿಸಿದಲ್ಲಿ ನಿದ್ರೆ ತಾನಾಗಿಯೇ ಬರುತ್ತದೆ.
•    ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಸಿ ಹೆಚ್ಚಾಗಿರುವ ನೆಲ್ಲಿಕಾಯಿಯನ್ನು ಆಹಾರದಲ್ಲಿ ಹೆಚ್ಚು ಬಳಸಿ.
•    ಜೇನುತುಪ್ಪವನ್ನು ದಿನ ನಿತ್ಯದ ಆಹಾರದಲ್ಲಿ ಬಳಸುತ್ತಿದ್ದಲ್ಲಿ ಕಬ್ಬಿಣಾಂಶ, ಸುಣ್ಣಾಂಶದ ಕೊರತೆ ಕಾಡಲಾರದು.
•    ಧೂಮಪಾನ, ಮದ್ಯಪಾನಗಳಿಂದ ಮತ್ತು ಮಾದಕ ವಸ್ತುಗಳಿಂದ ದೂರವಿರಿ.
•    ದಪ್ಪಗಿದ್ದಲ್ಲಿ ತೂಕ ಕಡಿಮೆ ಮಾಡಿಕೊಳ್ಳುವ ಕುರಿತು ಯೋಚಿಸಿ, ನಿಮಗೆ ನೀವೇ ಆಹಾರದಲ್ಲಿ ಮಿತಿ, ವ್ಯಾಯಾಮ ಅನುಸರಿಸಿ ತೂಕ ತಗ್ಗಿಸಿಕೊಂಡು ಆರೋಗ್ಯಕರ ಜೀವನ ನಡೆಸಿ.

ಇದನ್ನೂ ಓದಿ: ಚಳಿಗಾಲಕ್ಕೆ ಆರೋಗ್ಯಕರ ಆಹಾರಕ್ರಮ

•    ದೈಹಿಕ ಸ್ವಚ್ಛತೆ, ಮನೆ ಒಳಗಿನ ಹಾಗೂ ಹೊರಗಿನ ಪರಿಸರದ ಸ್ವಚ್ಛತೆಯ ಕಡೆಗೆ ಗಮನಹರಿಸಿ.
•    ಎಲ್ಲರನ್ನು ಪ್ರೀತಿಸುವ, ಕಾಳಜಿ ವಹಿಸುವ ಮನೋಭಾವ ನೆಮ್ಮದಿ ನೀಡುತ್ತದೆ.
•    ಸಮಯದ ಪರಿಪಾಲನೆ, ಬದುಕಿನಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು.
•    ಪ್ರೀತಿ, ವಿಶ್ವಾಸ ಬದುಕಿನ ಮೂಲಮಂತ್ರವಾಗಿರಲಿ.
•    ಆಸೆಯಿರಲಿ, ಆದರೆ ದುರಾಸೆ ಬೇಡ.
•    ಸಾಹಿತ್ಯ, ಸಂಗೀತ, ಕ್ರೀಡೆ ಮುಂತಾದ ಯಾವುದಾದರೊಂದು ಹವ್ಯಾಸ ರೂಢಿಸಿಕೊಳ್ಳಬೇಕು.
•    ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಬೇಕು.
•    ಇರುವುದರಲ್ಲಿಯೇ ತೃಪ್ತಿ ಕಂಡುಕೊಳ್ಳಬೇಕು.
•    ಇತರರ ಏಳಿಗೆಯನ್ನು ಕಂಡು ಸಂತೋಷಪಡುವ ಮನೋಭಾವ ಇರಲಿ.
•    ಪ್ರಜ್ಞಾವಂತಿಕೆ ಹೆಚ್ಚಿಸಿಕೊಳ್ಳೋಣ.
•    ಅಂತರಂಗದ ಸೌಂದರ್ಯ ಹೆಚ್ಚಿಸಿಕೊಳ್ಳೋಣ.
•    ನಗುಮುಖ, ಸ್ನೇಹದ ನಡವಳಿಕೆ, ಆತ್ಮವಿಶ್ವಾಶ ಬೆಳೆಸಿಕೊಂಡಲ್ಲಿ ಸುಂದರ ವ್ಯಕ್ತಿಯಾಗಲು ಸಾಧ್ಯ.
•    ವಯಸ್ಸಾಗುವಿಕೆ ಪ್ರತಿಯೊಬ್ಬರಿಗೂ ಅನಿವಾರ್ಯ. ಅದನ್ನು ಬಂದಾಗ ಸ್ವೀಕರಿಸಿ ಜೀವನ ಶೈಲಿಯಲ್ಲಿ ಸೂಕ್ತ ಬದಲಾವಣೆ ಅನುಸರಿಸಿ ಸಂತೋಷ ಮತ್ತು ನೆಮ್ಮದಿಯ ಜೀವನ ನಡೆಸಬೇಕು.
•    ಮೊಬೈಲ್ ಬಳಸುವುದನ್ನು ಮಿತಿಗೊಳಿಸಿಕೊಳ್ಳೋಣ. ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸೋಣ.
•    ತಿಂಗಳ ಬಜೆಟ್‌ನಲ್ಲಿ ಕನಿಷ್ಟ 300 ರೂ.ಗಳ ಪುಸ್ತಕ ಖರೀದಿಸೋಣ.
•    ತಿಂಗಳಿಗೊಮ್ಮೆ ಒಂದು ಪುಸ್ತಕದ ಬಗ್ಗೆ ಕುಟುಂಬದ ಎಲ್ಲರೂ ಕುಳಿತು ಚರ್ಚಿಸೋಣ.
•    ಮಕ್ಕಳಿಗೆ ದಿನಕ್ಕೊಂದು ಕತೆ ಹೇಳೋಣ.
•    ವರುಷಕ್ಕೊಮ್ಮೆ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳೋಣ.
•    ಅನಗತ್ಯ ವಸ್ತುಗಳ ಖರೀದಿಯನ್ನು ನಿಲ್ಲಿಸೋಣ.
•    ಮನೆಯಲ್ಲಿ ಒಳಾಂಗಣ ಗಿಡಗಳನ್ನು ಬೆಳೆಸೋಣ.
•    ಮನೆಯ ಹಿತ್ತಲಲ್ಲಿ ಔಷಧೀಯ ಗಿಡಗಳನ್ನು ಬೆಳೆಸೋಣ ಮತ್ತು ಬಳಸೋಣ.
•    ಪರಿಸರ ಮಾಲಿನ್ಯ ತಗ್ಗಿಸಲು ಪ್ಲಾಸ್ಟಿಕ್ ಬಳಕೆ ಮಿತಿಗೊಳಿಸಿಕೊಳ್ಳೋಣ.
•    ಪರಿಸರ ಪ್ರಜ್ಞೆ ಮತ್ತು ಕನ್ನಡ ಪ್ರಜ್ಞೆ ಬೆಳೆಸಿಕೊಳ್ಳೋಣ.
•    ನೋವುನಿವಾರಕ ಮಾತ್ರೆಗಳ ಸೇವನೆ ಮಿತಿಗೊಳಿಸಿಕೊಳ್ಳೋಣ.
ನಾವೂ ಆರೋಗ್ಯವಾಗಿದ್ದು, ಕುಟುಂಬದವರ ಆರೋಗ್ಯ ರಕ್ಷಣೆಯ ಕಡೆಗೆ ಗಮನಹರಿಸಿ, ಪರಸ್ಪರ ಪ್ರೀತಿ, ಗೌರವವನ್ನು ನೀಡುತ್ತ, ಪಡೆಯುತ್ತ ಎಲ್ಲರೊಂದಿಗೆ ಸ್ನೇಹ ಸೌಹಾರ್ದತೆಯಿಂದ ಕೂಡಿ ಬಾಳೋಣ.


ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com


    Stay up to date on all the latest ಅಂಕಣಗಳು news
    Poll
    K Annamalai

    ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


    Result
    ಹೌದು
    ಇಲ್ಲ

    Comments

    Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

    The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

    flipboard facebook twitter whatsapp