ಸಿರಿವಂತರಾಗಬೇಕು ಎಂದರೆ ಅದಕ್ಕೆ ಪ್ರಯತ್ನ ಪಡಬೇಕು. ಸಿರಿತನಕ್ಕೆ ಯಾವುದೇ ಅಡ್ಡದಾರಿಗಳಲ್ಲ. ಇದ್ದರೂ ಅವು ಶಾಶ್ವತವಲ್ಲ. ಅಡ್ಡದಾರಿಯಲ್ಲಿ ಗಳಿಸಿದ ಸಂಪತ್ತು ಬಹುಕಾಲ ಉಳಿಯುವುದು ಇಲ್ಲ. ಸಿರಿತನವನ್ನು ಗಳಿಸಲು ಇರುವುದು ಒಂದೇ ಮಾರ್ಗ ಅದು ಹೂಡಿಕೆ. ಹಣವನ್ನು ಉಳಿಸಿದ್ದೇವೆ ಎಂದು ಪೂರ್ವಾಪರ ಯೋಚನೆ ಮಾಡದೆ ಹೂಡಿಕೆ ಮಾಡಿದರೂ ಸಂಕಷ್ಟ ತಪ್ಪಿದ್ದಲ್ಲ. ಹೂಡಿಕೆಯಲ್ಲಿ ಎರಡು ವಿಧ. ಮೊದಲನೆಯದು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ.
ಅದು ಬೇರೆಯವರ ಕನಸಿನಲ್ಲಿ ಹೂಡಿಕೆ ಮಾಡುವುದು. ಅಂದರೆ ಸಂಸ್ಥೆಗಳ ಷೇರುಗಳಲ್ಲಿ, ಬಾಂಡ್ಗಳಲ್ಲಿ ಹೂಡಿಕೆ ಮಾಡುವುದು. ಇನ್ನೊಂದು ನಮ್ಮ ಕನಸಿನ ಮೇಲೆ ಹೂಡಿಕೆ ಮಾಡುವುದು. ಅಂದರೆ ನಮಗಿಷ್ಟವಾದ ವ್ಯಾಪಾರ, ಉದ್ದಿಮೆಯನ್ನು ಪ್ರಾರಂಭಿಸುವುದು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನು ಗೊತ್ತೇ? ನಾವು ಇತರರ ಕನಸಿನಲ್ಲಿ ಹೂಡಿಕೆ ಮಾಡಿದಾಗ ಹಣ ಗಳಿಸುವ ಅಥವಾ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ನಮ್ಮ ಕನಸಿನಲ್ಲಿ ಹೂಡಿಕೆ ಮಾಡಿದಾಗ ಈ ಎರಡೂ ಸಾಧ್ಯತೆಯ ಜೊತೆಗೆ ನಮ್ಮ ವೇಳೆಯನ್ನು ಸಹ ನಾವು ಹೂಡಿಕೆ ಮಾಡಬೇಕಾಗುತ್ತದೆ. ಹೀಗೆ ನಾವು ವೇಳೆಯನ್ನು ಇನ್ವೆಸ್ಟ್ ಮಾಡಿದಾಗ ಆ ವೇಳೆಯ ಅಪರ್ಚುನಿಟಿ ಕಾಸ್ಟ್ ಎಷ್ಟು ಎನ್ನುವುದನ್ನು ನಾವು ಲೆಕ್ಕ ಮಾಡಬೇಕಾಗುತ್ತದೆ. ಉದಾಹರಣೆಗೆ ನಾವು ನಮ್ಮಿಷ್ಟದ ಉದ್ದಿಮೆ ಶುರು ಮಾಡುವ ಮೊದಲು ಯಾವುದೋ ಒಂದು ಹುದ್ದೆಯಲ್ಲಿ, ಕೆಲಸದಲ್ಲಿ ಇರುತ್ತೇವೆ ಅಲ್ಲವೇ? ಅಲ್ಲಿಂದ ವಾರ್ಷಿಕ ಉತ್ಪತ್ತಿ 12 ಲಕ್ಷ ಎಂದು ಕೊಂಡರೆ, ಅದನ್ನು ನಾವು ಅಪರ್ಚುನಿಟಿ ಕಾಸ್ಟ್ ಎನ್ನಬಹುದು. ನಮ್ಮ ಕನಸಿನಲ್ಲಿ ಹೂಡಿಕೆ ಮಾಡುವಾಗ ನಾವು ಗಣನೆಗೆ ತೆಗದುಕೊಳ್ಳದ ಅತಿ ದೊಡ್ಡ ಅಂಶವಿದು.
ಇದರ ಜೊತೆಗೆ ಅದೇ ಸಮಯವನ್ನು ಕೌಶಲ ವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರೆ? ಎನ್ನುವ ಪ್ರಶ್ನೆಯನ್ನು ಕೂಡ ಮಾಡಿಕೊಳ್ಳಬೇಕು. ನೆನೆಪಿರಲಿ ಸಿರಿವಂತಿಕೆಯ ದಾರಿಯಲ್ಲಿ ಪ್ರಮುಖ ಪಾತ್ರವಹಿಸುವುದು ಹೂಡಿಕೆ, ಕಲಿಕೆ ಜೊತೆಗೆ ಟೈಮ್! ಮುಕ್ಕಾಲು ಪಾಲು ವೇಳೆ ನಾವು ನಮ್ಮ ವೇಳೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ನಮ್ಮ ವೇಳೆ ಚೀಪ್ ಅಲ್ಲ. ವೇಳೆಗಿಂತ ಮೌಲ್ಯವುಳ್ಳ ಕರೆನ್ಸಿ ಜಗತ್ತಿನಲ್ಲಿ ಬೇರಾವುದೂ ಇಲ್ಲ.
ಸರಿ ನಾವು ಬೇರೆಯವರ ಕನಸಿನಲ್ಲೂ ಅಷ್ಟಿಷ್ಟು ಹೂಡಿಕೆ ಮಾಡಿದ್ದೇವೆ, ನಮ್ಮ ಕನಸಿನ ಮೇಲೂ ಹೂಡಿಕೆ ಮಾಡುವ ಇಷ್ಟವಿದೆ ಎಂದರೆ ಅದಕ್ಕೆ ಸಿದ್ದತೆಗಳು ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳೋಣ. ಇಲ್ಲಿ ಕೂಡ ಇನ್ನೊಂದು ಅಂಶವನ್ನು ನಿಮಗೆ ತಿಳಿಸಿಬಿಡುತ್ತೇನೆ. ಹೊಸದಾಗಿ ಆರಂಭಗೊಂಡ 100 ವ್ಯಾಪಾರ, ಉದ್ದಿಮೆಗಳಲ್ಲಿ 95ಕ್ಕೂ ಹೆಚ್ಚು ವರ್ಷದಲ್ಲಿ ಅವಸಾನವನ್ನು ಅಪ್ಪುತ್ತವೆ. ವರ್ಷಕ್ಕೂ ಮೀರಿ ಉಳಿದುಕೊಳ್ಳುವ ಉದ್ದಿಮೆಗಳ ಸಂಖ್ಯೆ ಒಂದು ಪ್ರತಿಶತಕ್ಕಿಂತ ಕಡಿಮೆ. ಜಗತ್ತಿನಲ್ಲಿ ಶ್ರೀಮಂತರು ಎನ್ನುವ ಹಣೆಪಟ್ಟಿ ಪಡೆದುಕೊಳ್ಳಲು ಸಾಧ್ಯವಾಗಿರುವುದು ಕೂಡ ಒಂದು ಪ್ರತಿಶತ ಜನಕ್ಕೆ ಮಾತ್ರ! ಹೀಗೇಕೆ? ಇದಕ್ಕೆ ಉತ್ತರ ಸ್ಪಷ್ಟವಿದೆ. ಸಿದ್ಧತೆ, ಹೌದು ಸರಿಯಾದ ಸಿದ್ಧತೆಯಿಲ್ಲದೆ ಕೇವಲ ಉತ್ಸಾಹದಿಂದ ಶುರು ಮಾಡುವ ಕೆಲಸ ಹೆಚ್ಚು ದಿನ ಬದುಕುವುದಿಲ್ಲ. ಉತ್ಸಾಹ ದಿನದಿಂದ ದಿನಕ್ಕೆ ಕುಸಿತ ಕಾಣುತ್ತದೆ. ಸಣ್ಣಪುಟ್ಟ ಜಯಗಳು ಸಿಗದ್ದಿದ್ದರೆ ಉತ್ಸಾಹದ ಜೊತೆಗೆ ಶ್ರದ್ದೆ ಕೂಡ ಕಡಿಮೆಯಾಗುತ್ತದೆ. ಈ ಕಾರಣದಿಂದ ಬಹುತೇಕ ಬಿಸಿನೆಸ್ ಸೋಲುತ್ತವೆ. ಹೀಗಾಗಿ ಒಂದು ಯಶಸ್ವಿ ಉದ್ದಿಮೆ ಕಟ್ಟುವುದಕ್ಕೆ ನಾವು ತೆಗೆದುಕೊಳ್ಳಬೇಕಾದ ಹೆಜ್ಜೆಗಳನ್ನು ಚರ್ಚಿಸೋಣ. ಒಂದರ್ಥದಲ್ಲಿ ಬೇರೊಬ್ಬರ ಕನಸಿನಲ್ಲಿ ಹೂಡಿಕೆ ಮಾಡುವುದಕ್ಕಿಂತ ನಮ್ಮ ಕನಸಿನಲ್ಲಿ ಹೂಡಿಕೆ ಮಾಡುವುದು ಲೇಸು.
5. ಹಣ ಹೂಡಿಕೆ ಬಗ್ಗೆ ನಿಖರತೆ ಇರಲಿ: ಬ್ಯುಸಿನೆಸ್ಗೆ ಬೇಕಾದ ಹಣವನ್ನು ಎಲ್ಲಿಂದ ತರುವುದು ಎನ್ನುವುದು ಇನ್ನೊಂದು ಮುಖ್ಯ ಪ್ರಶ್ನೆ. ನಮ್ಮ ಐಡಿಯಾ ಉತ್ತಮವಾಗಿದ್ದರೆ ಹಣಕ್ಕೆ ಪರದಾಡುವ ಸ್ಥಿತಿಯಲ್ಲಿ ಇಂದು ನಾವಿಲ್ಲ. ನಮ್ಮ ಕನಸುಗಳನ್ನು ಸಶಕ್ತವಾಗಿ ಕಟ್ಟಿಕೊಡುವ ಕಲೆಗಾರಿಕೆ ಬಹಳ ಮುಖ್ಯ. ಹಣವನ್ನು ಈ ಮೂಲಗಳಿಂದ ಸಂಪಾದಿಸಬಹುದು:
6. ವ್ಯಾಪಾರದ ರಚನೆ / ಸ್ಟ್ರಕ್ಚರ್ ಯಾವುದಿರಬೇಕು?: ಇದು ಕೂಡ ಅತಿ ಮುಖ್ಯ ನಿರ್ಧಾರ. ನಾವು ಬಯಸಿ ಕಟ್ಟಲಿರುವ ಬಿಸಿನೆಸ್ ಯಾವ ರಚನೆಯಲ್ಲಿರಬೇಕು ಎನ್ನುವುದರ ನಿಖರತೆ ಕೂಡ ನಮ್ಮಲ್ಲಿ ಇರಬೇಕು. ಮುಖ್ಯವಾಗಿ ಕೆಳಗಿನ ರಚನೆಗಳು ಚಾಲ್ತಿಯಲ್ಲಿವೆ. ನಮಗೆ ಯಾವುದು ಹೆಚ್ಚು ಲಾಭದಾಯಕ ಎನ್ನುವುದನ್ನು ನಾವು ಕಂಡುಕೊಳ್ಳಬೇಕು.
7. ಉದ್ದಿಮೆಗೆ ಒಂದೊಳ್ಳೆ ಹೆಸರಿಡಿ ಮತ್ತು ಅದನ್ನು ನೋಂದಾಯಿಸಿ: ಹೆಸರು ವಿವಾದಕ್ಕೆ ಎಡೆ ಮಾಡಿಕೊಡದೆ ಸಮಾಜದ ಎಲ್ಲಾ ವರ್ಗಕ್ಕೂ ಒಪ್ಪಿತವಾಗುವಂತಿರಲಿ.
8. ಎಲ್ಲಾ ಅವಶ್ಯಕ ಅನುಮತಿಗಳನ್ನು ಪಡೆದುಕೊಳ್ಳಿ
9. ಬ್ಯಾಂಕ್ ಖಾತೆ ತೆರೆಯಿರಿ
10. ವ್ಯಾಪಾರದ ಸ್ಥಳ ನಿರ್ಧರಿಸಿ.
11. ಒಂದೊಳ್ಳೆ ಟೀಮ್ ಕಟ್ಟಬೇಕು
12. ಸೇವೆ ಅಥವಾ ಸರುಕು ಸಿದ್ದಪಡಿಸಿ
13. ಪದಾರ್ಥವನ್ನು ಮಾರ್ಕೆಟ್ ಮಾಡಿ
14. ಯಾವುದೇ ಕಾರಣಕ್ಕೂ ವ್ಯಾಪಾರದ ಹಣವನ್ನು ವೈಯಕ್ತಿಕ ಹಣದ ಜೊತೆಗೆ ಬೆರಸಬೇಡಿ.
ಕೊನೆ ಮಾತು: ನಾವು ಹೇಗೆ ಬದುಕ ಬೇಕು ಎನ್ನುವ ಆಯ್ಕೆ ನಮ್ಮದ್ದು. ಜಗತ್ತಿನ ಎಲ್ಲಾ ಉದ್ದಿಮೆದಾರರ ಪೋಷಕರು ಉದ್ದಿಮೆದಾರರಾಗಿರಲಿಲ್ಲ ಎನ್ನುವುದು ನೆನಪಿರಲಿ. ಎಲ್ಲದಕ್ಕೂ ಒಂದು ಮೊದಲು ಇರಬೇಕಲ್ಲ? ಆ ಮೊದಲು ನಮ್ಮಿಂದಲೇ ಶುರುವಾಗಲಿ ಎನ್ನುವ ಉತ್ಕಟ ಬಯಕೆಯಿರಲಿ. ಸೋಲಿಗೆ ಕುಗ್ಗದ, ಗೆಲುವಿಗೆ ಹಿಗ್ಗದ ಸ್ಥಿತಪ್ರಜ್ಞತೆ ನಮ್ಮದಾಗಿರಲಿ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement