ಜಿ20 ಶೃಂಗಸಭೆ ಯಶಸ್ವಿಯಾಗಿ ಮುಗಿದಿದೆ. ಮುಂದಿನ ಸೆಪ್ಟೆಂಬರ್ ವರೆಗೆ ಭಾರತ ಈ ಒಕ್ಕೂಟದ ಅಧ್ಯಕ್ಷ ಸ್ಥಾನದಲ್ಲಿ ಇರಲಿದೆ. ಮುಂದಿನ ವರ್ಷ ಇದು ಬ್ರೆಜಿಲ್ ದೇಶಕ್ಕೆ ವರ್ಗಾವಣೆಯಾಗಲಿದೆ. ಕಳೆದ ವರ್ಷ ಇದು ಇಂಡೋನೇಶಿಯಾ ದೇಶಕ್ಕೆ ದಕ್ಕಿತ್ತು.
ಜಿ20 ಎನ್ನುವುದು ಇಪ್ಪತ್ತು ದೇಶಗಳ ಒಕ್ಕೂಟ. ಗ್ರೂಪ್ ಆಫ್ ಟ್ವೆಂಟಿ ಎನ್ನುವುದನ್ನು ಜಿ ಟ್ವೆಂಟಿ ಎನ್ನುತ್ತಾರೆ. ಇದೆಷ್ಟು ದೊಡ್ಡ ಒಕ್ಕೂಟ ಎನ್ನುವುದಕ್ಕೆ ಒಂದು ಉದಾಹರಣೆಯನ್ನು ನೋಡೋಣ. ಜಿ20 ದೇಶಗಳು ಜಾಗತಿಕ ಜನಸಂಖ್ಯೆಯ 60 ಪ್ರತಿಶತ ಜನರನ್ನು ಪ್ರತಿನಿಧಿಸುತ್ತದೆ. ಜಾಗತಿಕ ವಹಿವಾಟಿನ 75 ಪ್ರತಿಶತ ಈ ದೇಶಗಳ ನಡುವೆ ನಡೆಯುತ್ತದೆ. ಜಗತ್ತಿನ ಒಟ್ಟು ಜಿಡಿಪಿಯ 85 ಪ್ರತಿಶತ ಈ ದೇಶಗಳ ನಡುವೆ ಉತ್ಪತ್ತಿಯಾಗುತ್ತದೆ. ಇದರ ನಾಯಕತ್ವ ಮುಂದಿನ ವರ್ಷದವರೆಗೆ ಭಾರತಕ್ಕೆ ಸಿಕ್ಕಿದೆ. ಈ ಒಕ್ಕೊಟವನ್ನು ಈ ವರ್ಷ ಇಂಡೋನೇಶಿಯಾ, ಭಾರತ ಮತ್ತು ಬ್ರೆಜಿಲ್ ದೇಶಗಳು ಒಟ್ಟಾಗಿ ಮುನ್ನೆಡೆಸುತ್ತವೆ. ನಿಕಟಪೂರ್ವ ಇಂಡೋನೇಶಿಯಾ, ಭಾವಿ ಅಧ್ಯಕ್ಷ ಭಾರತ ಮತ್ತು ಭವಿಷ್ಯದ ಅಧ್ಯಕ್ಷ ಬ್ರೆಜಿಲ್ ನಾಯಕತ್ವವನ್ನು ಹಂಚಿಕೊಳ್ಳಲಿವೆ.
ಇದನ್ನೂ ಓದಿ: ಹಣ ಬಯಸಿದಷ್ಟೂ ದೂರವಾಗುತ್ತೆ ಏಕೆ? (ಹಣಕ್ಲಾಸು)
ಜಿ20ಯಲ್ಲಿ ಯಾವೆಲ್ಲಾ ದೇಶಗಳಿವೆ ಗೊತ್ತಾ ?
ಗ್ರೂಪ್ ಆಫ್ 20 ರಲ್ಲಿ ಅರ್ಜೆಂಟೀನಾ, ಬ್ರೆಜಿಲ್, ಆಸ್ಟ್ರೇಲಿಯಾ, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ,ಇಂಡಿಯಾ, ಇಂಡೋನೇಶಿಯಾ, ಇಟಲಿ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ ಸೌತ್ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ನೇಷನ್ಸ್ ಮತ್ತು ಯೂರೋಪಿಯನ್ ಯೂನಿಯನ್. ಈ ಬಾರಿಯ ಅಧ್ಯಕ್ಷ ಸ್ಥಾನ ವಹಿಸಿರುವ ಭಾರತ ತನಗಿರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಆಫ್ರಿಕಾ ದೇಶಗಳ ಒಕ್ಕೊಟವನ್ನು ಜಿ 20 ಕ್ಕೆ ಸದಸ್ಯ ರಾಷ್ಟ್ರವನ್ನಾಗಿ ಸೇರಿಸಿಕೊಳ್ಳುವಲ್ಲಿ ಮಹತ್ವದ ಕಾರ್ಯನಿರ್ವಹಿಸಿದೆ. ಆ ಮೂಲಕ ಆಫ್ರಿಕನ್ ಒಕ್ಕೊಟದ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸಿಕೊಂಡಿದೆ.
ಈ ರೀತಿಯ ಅಧ್ಯಕ್ಷ ಪಟ್ಟ ರೊಟೇಷನ್ ಬೇಸಿಸ್ ಮೇಲೆ ಸಿಗುತ್ತದೆ. ಹೀಗಾಗಿ ಇಂದಲ್ಲ ನಾಳೆ ಎಲ್ಲಾ ದೇಶಕ್ಕೂ ಸಿಗುತ್ತದೆ. ಭಾರತಕ್ಕೆ ಸಿಕ್ಕಿರುವ ಈ ಅವಕಾಶವನ್ನು ಅವಶ್ಯಕತೆಗಿಂತ ಹೆಚ್ಚಾಗಿ ಬಿಂಬಿಸಲಾಗುತ್ತಿದೆ ಎನ್ನುವ ಕೂಗು ಸಮಾಜದ ಹಲವು ವಲಯಗಳಲ್ಲಿ ಕೇಳಿ ಬರುತ್ತಿದೆ. ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸುವಲ್ಲಿ ಬಹಳ ಯಶಸ್ವಿಯಾಗಿದೆ. ಸಾವಿರಾರು ಕೋಟಿ ರೂಪಾಯಿ ಹಣಕಾಸು ಒಪ್ಪಂದಗಳಿಗೆ ಸಹಿ ಬಿದ್ದಿದೆ.
ಲಕ್ಷಾಂತರ ಹೊಸ ಉದ್ಯೋಗ ಸೃಷ್ಟಿಯಾಗುವುದು ಖಚಿತವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಚೀನಾ ದೇಶದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದು ನಿಲ್ಲಬಲ್ಲ ಬಲಿಷ್ಠ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ರಷ್ಯಾ ಮತ್ತು ಉಕ್ರೈನ್ ಯುದ್ಧದ ಸಮಯದಲ್ಲಿ ಭಾರತ ರಷ್ಯಾ ದೇಶದಿಂದ ಕಚ್ಚಾ ತೈಲವನ್ನು ಖರೀದಿ ಮಾಡುವುದರ ಮೂಲಕ ಉಕ್ರೈನ್ ಮೇಲಿನ ಯುದ್ಧಕ್ಕೆ ರಷ್ಯಾವನ್ನು ಬೆಂಬಲಿಸಿದಂತೆ ಆಗಿದೆ. ರಷ್ಯಾಗೆ ಹಣಕಾಸು ಸಹಾಯ ಒದಗಿಸಿದಂತೆ ಆಗಿದೆ ಎನ್ನುವ ಮುಂದುವರೆದ ದೇಶಗಳ ಕೂಗನ್ನು ತಣ್ಣಗಾಗಿಸಿ ಭಾರತ ರಾಜತಾಂತ್ರಿಕತೆಯಲ್ಲಿ ತಾನೆಷ್ಟು ಬಲಿಷ್ಠ ಎನ್ನುವುದನ್ನು ಸಾಬೀತು ಮಾಡಿದೆ. ಇವುಗಳ ಬಗ್ಗೆ ಒಂದಷ್ಟು ವಿವರವಾಗಿ ತಿಳಿದುಕೊಳ್ಳೋಣ.
ಕೊನೆಮಾತು:
ಜಾಗತಿಕ ರಾಜಕೀಯದಲ್ಲಿ ಇಂದು ಧ್ರುವೀಕರಣ ನಡೆಯುತ್ತಿದೆ. ಭಾರತ ಇದರ ಮಧ್ಯದಲ್ಲಿದೆ. ಜಗತ್ತನ್ನು ಹೆಚ್ಚು ತನ್ನ ಕಡೆಗೆ ವಾಲಿಸಿಕೊಳ್ಳುತ್ತಿದೆ. ಚೀನಾ ತನ್ನ ಧೋರಣೆಯನ್ನು ಮುಂದುವರಿಸಿರುವ ಕಾರಣ ಎಲ್ಲವೂ ಸರಿಯಾಗಿದೆ ಎಂದು ಹೇಳಲು ಬಾರದು. ಆದರೆ ವಿಶ್ವ ರಾಜಕೀಯ ಸದ್ದಿಲ್ಲದೇ ಮಗ್ಗುಲು ಬದಲಾಯಿಸುತ್ತಿದೆ ಮತ್ತು ಅದು ಭಾರತಕ್ಕೆ ಹೆಚ್ಚು ಸೂಕ್ತವೂ ಆಗಿದೆ. ಇವೆಲ್ಲವುಗಳ ಮಧ್ಯೆ ಖಾಲಿಸ್ಥಾನಿ ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿದ್ದ ಕೆನಡಾ ಪ್ರಧಾನಿಯವರಿಗೆ ಬುದ್ದಿ ಹೇಳಿ ಕಳಿಸಿದ್ದು ಇನ್ನೊಂದು ಕಥೆ. ಅಮೇರಿಕಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಇನ್ನಿತರ ಸದಸ್ಯ ದೇಶಗಳು ಭಾರತವನ್ನು ಹಿಂದೆಂದಿಗಿಂತಲೂ ಹೆಚ್ಚಿನ ಬೆರಗುಗಣ್ಣಿನಿಂದ ನೋಡುತ್ತಿವೆ. ಮುಂದಿನ ದಶಕ ಭಾರತದ್ದು ಅದರಲ್ಲಿ ಯಾವುದೇ ಸಂಶಯವಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement