ಇನ್ನೊಂದು ಹೊಸ ವರ್ಷಕ್ಕೆ ನಾವೆಲ್ಲಾ ಕಾಲಿಟ್ಟದ್ದೇವೆ, ಕಳೆದ ವರ್ಷದಲ್ಲಿ ಆಂದುಕೊಂಡು ಮಾಡಲಾಗದ ಉಳಿತಾಯ, ಹೂಡಿಕೆಯಿಂದ ಪಾಠ ಕಲಿತು ಈ ವರ್ಷ ಹಾಗೆ ಆಗಬಾರದು ಎನ್ನುವ ಒಂದು ವರ್ಗದ ಜನರಿದ್ದೇವೆ, ಕೆಟ್ಟ ಹೂಡಿಕೆಗಳಲ್ಲಿ ಹಣ ತೊಡಗಿಸಿ ಕೈ ಸುಟ್ಟುಕೊಂಡು 'ಹೂಡಿಕೆಯ ಸಹವಾಸ ' ಬೇಡ ಎನ್ನುವ ನಿರ್ಧಾರಕ್ಕೆ ಬಂದವರ ಇನ್ನೊಂದು ವರ್ಗವಿದೆ. ತಿಂಗಳ ಸಂಬಳ ಎನ್ನುವುದು ಒಂದೆರೆಡು ದಿನದ ಸಂಗಾತಿ, ಅದು ಬಂದದ್ದು ಗೊತ್ತಾಗುವುದಕ್ಕೆ ಮುಂಚೆ ಕಂತು, ಖರ್ಚು ಎಂದು ಅದ್ಯಾವಾಗ ಹೊರಟು ಹೋಗಿರುತ್ತದೆ ಗೊತ್ತೇ ಆಗುವುದಿಲ್ಲ ಇದರ ಮಧ್ಯೆ ಎಲ್ಲಿಯ ಉಳಿಕೆ? ಎಲ್ಲಿಯ ಹೂಡಿಕೆ? ಎನ್ನುವ ಇನ್ನೊಂದು ದೊಡ್ಡ ವರ್ಗವಿದೆ. ಎಲ್ಲಾ ಸಾಧ್ಯ ಹೂಡಿಕೆಗಳನ್ನ ಮಾಡಿ, ಹೊಸತೇನಿದೆ ಎನ್ನುವ ಮಂದಿಗೂ ನಮ್ಮ ದೇಶದಲ್ಲಿ ಕಡಿಮೆಯಿಲ್ಲ. ಒಂದು ಭಾರತದಲ್ಲಿ ಹತ್ತು ವಿವಿಧ ಭಾರತವಿದೆ ಎನ್ನುವ ಮಾತುಗಳನ್ನ ಸುಮ್ಮನೆ ಹೇಳಿರಲಾರರು ಅಲ್ಲವೇ? ಇರಲಿ
ಇದನ್ನೂ ಓದಿ: ಜಾಗತಿಕ ವಿತ್ತ ಜಗತ್ತಿನ 2023ರ ಮುನ್ನೋಟ ಇಲ್ಲಿದೆ...
ಹೊಸ ವರ್ಷಕ್ಕೆ ಹೊಸ ಸಂಕಲ್ಪಗಳು ಬಹುತೇಕರು ಮಾಡುವುದು ಗ್ಯಾರಂಟಿ. ಸಂಕಲ್ಪ ಅಂದ ಮಾತ್ರಕ್ಕೆ ಅದು ಯಾವಾಗಲೂ ಹಣಕಾಸಿಗೆ ಸಂಬಂಧ ಪಟ್ಟಿರಬೇಕು ಎಂದೇನಿಲ್ಲ , ಆದರೆ ಬದುಕಿಗೆ ವಿತ್ತೀಯ ಶಿಸ್ತು ಬಹಳ ಮುಖ್ಯ. ಒಂದು ರೂಪಾಯಿ ಉಳಿಸಿದರೆ ಅದು ಎರಡು ರೂಪಾಯಿ ಗಳಿಸಿದ್ದಕ್ಕೆ ಸಮ ಎನ್ನುವ ಬಹಳ ಹಳೆಯ ಮಾತೊಂದಿದೆ, ಇಂದಿನ ಕಾಲಘಟ್ಟದಲ್ಲಿ ಅದು ಕೂಡ ಬದಲಾಗಿ ಹೋಗಿದೆ. ಒಂದು ರೂಪಾಯಿ ಉಳಿಸಿದರೆ ಅದು ಹತ್ತು ರೂಪಾಯಿ ಗಳಿಸಿದಕ್ಕೆ ಸಮ ಎನ್ನುವುದು ಇಂದಿನ ಮಟ್ಟಿಗೆ ಸರಿಯಾಗುತ್ತದೆ. ಹಣ ಉಳಿಸುವುದು ಸುಲಭದ ಮಾತಲ್ಲ, ಉಳಿಸಿದ ಹಣವನ್ನ ಸರಿಯಾದ ಕಡೆಯಲ್ಲಿ ಹೂಡಿಕೆ ಮಾಡುವುದು ಇನ್ನೂ ದೊಡ್ಡ ಕಷ್ಟ. ಹೀಗಾಗಿ ಬದುಕಿಗೆ ನ್ಯಾಯಯುತ ಗಳಿಕೆ, ಉಳಿಕೆ ಮತ್ತು ಹೂಡಿಕೆ ಬಹಳ ಮುಖ್ಯ. ಇವೆಲ್ಲಕ್ಕಿಂತ ಇನ್ನೊಂದಷ್ಟು ಅಂಶಗಳು ಕೂಡ ಬಹಳ ಮುಖ್ಯವಾಗಿವೆ, ಅವೇನು ಎನ್ನುವುದನ್ನ ತಿಳಿದು ಕೊಳ್ಳುವ ಪ್ರಯತ್ನ ಮಾಡೋಣ. ಹೊಸ ವರ್ಷದಲ್ಲಿ ಇವುಗಳನ್ನ ಪಾಲಿಸುವುದು ಅಭ್ಯಾಸ ಮಾಡಿಕೊಂಡರೆ ಅದು ಕೆಡುಕನ್ನ ತಪ್ಪಿಸುತ್ತದೆ, ನಷ್ಟದಿಂದ ಲಾಭದ ಕಡೆಗೆ ಹೊರಳುವಂತೆ ಮಾಡುತ್ತದೆ.
ಕೊನೆಮಾತು: ಮೊದಲ ಸಾಲುಗಳಲ್ಲಿ ಹೇಳಿದಂತೆ ಇಂದಿನ ಕಾಲಘಟ್ಟದಲ್ಲಿ ಗಳಿಕೆಗಿಂತ ಉಳಿಸುವುದು ಕಷ್ಟ , ಉಳಿಸಿದ ಹಣವನ್ನ ಹೂಡಿಕೆ ಮಾಡುವುದು ಅದರಲ್ಲೂ ಉತ್ತಮ ಹೂಡಿಕೆ ಮಾಡುವುದು ಇನ್ನೂ ಕಷ್ಟ. ಎಲ್ಲದಕ್ಕಿಂತ ಮಿಗಿಲಾಗಿ ಸಣ್ಣಪುಟ್ಟ ಹಣಕಾಸು ತಪ್ಪುಗಳು ಕೂಡ ಜೀವನದ ಐದಾರು ವರ್ಷವನ್ನ ನುಂಗಿ ಬಿಡುತ್ತದೆ. ಮಧ್ಯಮ ಅಥವಾ ದೊಡ್ಡ ಪ್ರಮಾಣದ ತಪ್ಪುಗಳು ಜೀವನವನ್ನ ಮರಳಿ ಟ್ರ್ಯಾಕ್ ಗೆ ತರಲಾಗದಷ್ಟು ಹದಗೆಡಿಸಿಬಿಡುತ್ತದೆ. ಇಲ್ಲಿ ಕರುಣೆ, ಮರುಕಕ್ಕೆ ಜಾಗವಿಲ್ಲ. ಹೀಗಾಗಿ ದಿಟ್ಟ, ನಿಖರ ಹೆಜ್ಜೆಗಳು ಹೊಸ ವರ್ಷದಲ್ಲಿ ಇಡುವಂತಾಗಲಿ. ವೆಲ್ತ್ ಕ್ರಿಯೇಷನ್ ಎನ್ನುವುದು ಗುರಿಯಾಗಿರದೆ ಅದು ಸಹಜ ಬದುಕಾಗಲಿ. ಅದರತ್ತ ಸಹಜ ಸರಳ ನಡಿಗೆಯಿರಲಿ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement